ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದ
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದಿಲ್ಲಿಯಿಂದ ರಾಜ್ಯ ರಾಜ್ಯಧಾನಿಯವರೆಗೆ ಗೆಲುವು ಕಂಡಿದೆ. 2022ರ ಫ್ರೀಡಂ ಪಾರ್ಕ್ ಐತಿಹಾಸಿಕ ಹೋರಾಟದಿಂದ ಹಂತ ಹಂತವಾಗಿ ಒಳಮೀಸಲಾತಿ ಹೋರಾಟವು ಯಶಸ್ವಿಯಾಗಿ ಮುಂದೆ ಸಾಗಿದೆ. ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳ ಸಂವಿಧಾನಿಕ ಸೌಲಭ್ಯಗಳ ಹಂಚಿಕೆಯಲ್ಲಿ ಉಂಟಾದ ತಾರತಮ್ಯಗಳ ನಿವಾರಣಾ ಸಮಿತಿಯು ಭಾರತದಲ್ಲಿ ಮೊದಲ ಬಾರಿಗೆ ಮನೆಮನೆಯ ಸಮೀಕ್ಷೆಯನ್ನು ನಡೆಸಿ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ಕ್ರೋಢೀಕರಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ದಿನಾಂಕ: 06.06.2012 ರಂದು ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳೂ ಒಳಮೀಸಲಾತಿ ಸಮಸ್ಯೆಯನ್ನು ಒಂದು ಸಾಮಾಜಿಕ ನ್ಯಾಯವೆಂದು ಪರಿಗಣಿಸದೆ ರಾಜಕೀಯ ದಾಳವಾಗಿ ಉಪಯೋಗಿಸಿರುವುದು ದುರಂತದ ವಿಷಯ. ಇದು ಖಂಡನೀಯ. ಮಾನ್ಯ ಸುಪ್ರೀಂ ಕೋರ್ಟ್ ದಿನಾಂಕ 1.8.2024ರಂದು ಒಳ ಮೀಸಲಾತಿ ನೀಡುವ ...