Posts

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಂದ 26 ಕೋಟಿ ಷೇರು ಬಂಡವಾಳ ಸಂಗ್ರಹ; ನೂತನ ಅಧ್ಯಕ್ಷ ಸದಾಶಿವ ರೆಡ್ಡಿ.

Image
 ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಂದ 26 ಕೋಟಿ ಷೇರು ಬಂಡವಾಳ ಸಂಗ್ರಹ; ನೂತನ ಅಧ್ಯಕ್ಷ ಸದಾಶಿವ ರೆಡ್ಡಿ.    ಬೆಂಗಳೂರು ಫೆಬ್ರವರಿ 4;  ಬೆಂಗಳೂರು ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಸುಮಾರು 11 ಸಾವಿರ ಸದಸ್ಯರನ್ನು ಹೊಂದಿದ್ದು,26 ಕೋಟಿ ಷೇರು ಬಂಡವಾಳ ಹೊಂದಿದೆ ಎಂದು ನೂತನ ಅಧ್ಯಕ್ಷ ಸದಾಶಿವ ರೆಡ್ಡಿ, ಉಪಾಧ್ಯಕ್ಷ ಸಿ ಚೆನ್ನಾರೆಡ್ಡಿ ತಿಳಿಸಿದರು.   ಪ್ರೆಸ್ ಕ್ಲಬ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು,ಜನವರಿ 2026ರ ಅಂತ್ಯಕ್ಕೆ ಬ್ಯಾಂಕಿನ ಠೇವಣಿ 478 ಕೋಟಿ ರೂಪಾಯಿಗಳಷ್ಟಿದ್ದು,336 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟು ಹೂಡಿಕೆಗಳು 204 ಕೋಟಿ ರೂಪಾಯಿಗಳಷ್ಟಿದ್ದು, ಇದರಲ್ಲಿ ಶೇ.68% ರಷ್ಟನ್ನು ಸರ್ಕಾರಿ ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಒಟ್ಟಾರೆ 814 ಕೋಟಿ ರೂಪಾಯಿಗಳಷ್ಟು ವ್ಯವಹಾರ ಹೊಂದಿದೆ ಹಾಗೂ 2024-25 ನೇ ಸಾಲಿನಲ್ಲಿ 8.07 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದೆ ಎಂದರು. ಮಾರ್ಚ್ 2025ರ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ ಶೇ.1.25 ರಷ್ಟಿದ್ದು ಹಾಗೂ ಸತತ ಮೂರು ವರ್ಷಗಳಿಂದ ಶೂನ್ಯ ನಿವ್ವಳ ನಿಷ್ಕ್ರಿಯ ಆಸ್ತಿಗಳನ್ನು  ಹೊಂದಿದೆ. Phonepay, Google pay, POS ಇ- ಕಾಮರ್ಸ್‌ಗಳೊಂದಿಗೆ ಎಲ್ಲಾ ರೀತಿಯ ...

ಪರಿಶಿಷ್ಟ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಲು ಒತ್ತಾಯ.

Image
 ಪರಿಶಿಷ್ಟ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಲು ಒತ್ತಾಯ.   ಬೆಂಗಳೂರು ಫೆಬ್ರವರಿ 2:ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಇತರೆ ಜನಾಂಗದವರಿಗಾಗಿ ಸರ್ಕಾರಿ ಗೋಮಾಳ ಹಾಗೂ ಇನ್ನಿತರೆ ಪ್ರವರ್ಗಗಳ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ 1960ರ ಪೂರ್ವದಲ್ಲಿ ಹಾಗೂ ನಂತರದಲ್ಲಿ ಜಮೀನುಗಳನ್ನು ಮಂಜೂರು ಮಾಡಿದ್ದು ಮಂಜೂರುದಾರರು ತಮ್ಮ ಹಕ್ಕು ದಾಖಲೆಗಳನ್ನು ಪಡೆಯಲು ಹಲವಾರು ದಶಕಗಳಿಂದಲೂ,ದಾಖಲೆಗಳನ್ನು ಪಡೆಯದೆ ವಿಫಲರಾಗಿರುವುದರಿಂದ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಬೇಕೆಂದು  ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ರೈತರ ಹಿತಾರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಡಾ.ಬಿ. ಆರ್. ಅಂಬೇಡ್ಕ‌ರ್ ಭೀಮರಥ ಸೇನೆ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ,ಭಾರತೀಯ ಬೌದ್ಧ ಮಹಾಸಭಾ ಒತ್ತಾಯಿಸಿದೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತಯ್ಯ,ನಾಗರತ್ನಮ್ಮ,ಮಂಜುಳಾ, ದರಖಾಸ್ತು ಪೋಡಿಯಾಗಿ ದಶಕಗಳಿಗೂ ಹೆಚ್ಚಿನ ಅವಧಿಯಿಂದ ಪಹಣಿ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿದ್ದರೂ ಸಹ ಭೂಮಿ ತಂತ್ರಾಂಶದಲ್ಲಿ ಈ ಹಿಂದೆ ಪೋಡಿಯಾಗಿರುವ ಪ್ರಕರಣಗಳಿಗೆ ಪಹಣಿ ದಾಖಲಿಸಲು ತಹಸೀಲ್ದಾರ್ ಹಾಗೂ ಎ.ಡಿ.ಎಲ್.ಆರ್. ಕಛೇರಿಗಳಲ್ಲಿ ಹಲವಾರು ವರ್ಷಗಳಿಂದ ಕಡತಗಳು ಇತ್ಯರ್ಥಕ್ಕೆ ಬಾಕಿ ಉಳಿದು...

ಕನ್ನಡ ರಕ್ಷಣಾ ವೇದಿಕೆಯ ಎಲ್.ಆರ್.ಶಿವರಾಮೇ ಗೌಡ ಅವರ ಹುಟ್ಟು ಹಬ್ಬ ಆಚರಣೆ; ಆರ್.ಆರ್ ನಗರ ಎಸ್.ಜಯನ್ ಅವರಿಂದ ಶುಭ ಹಾರೈಕೆ.

Image
  ಕನ್ನಡ ರಕ್ಷಣಾ ವೇದಿಕೆಯ  ಎಲ್.ಆರ್.ಶಿವರಾಮೇ ಗೌಡ  ಅವರ ಹುಟ್ಟು ಹಬ್ಬ ಆಚರಣೆ; ಆರ್.ಆರ್ ನಗರ ಎಸ್.ಜಯನ್ ಅವರಿಂದ ಶುಭ ಹಾರೈಕೆ.  ಬೆಂಗಳೂರು ಫೆಬ್ರವರಿ 2; ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲ್.ಆರ್.ಶಿವರಾಮೇ ಗೌಡ ಹಾಗೂ ಮಲೇಶ್ವರ ಶಾಸಕ ಆಶ್ವಥ್ ನಾರಾಯಣ ಅವರ ಹುಟ್ಟು ಹಬ್ಬ ಕಾರ್ಯಕ್ರಮ ಮಲೇಶ್ವರದ ರೋಟರಿ ಕ್ಲಬ್ ಸಭಾಂಣದಲ್ಲಿ ಅದ್ದೂರಿಯಾಗಿ ಜರುಗಿತು. ಪರಸ್ಪರ ಇಬ್ಬರು ನಾಯಕರು ಕೇಕ್  ಕತ್ತರಿಸಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಆಶ್ವಥ್ ನಾರಾಯಣ ಮಾತನಾಡಿ,ಮಲೇಶ್ವರಂ ವಿಧಾನ ಸಭಾ ಕ್ಷೇತ್ರ ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಡಾ.ರಾಜ್ ಕುಮಾರ್ ಅವರ ಜತೆಯಲ್ಲಿ ಸಾ.ರಾ.ಗೋವಿಂದ್ ಹಾಗೂ ಶಿವರಾಮೇ ಗೌಡರು ಗೋಕಾಕ್ ಚಳುವಳಿಗೆ ಸಾಥ್ ನೀಡಿದರು.ಆಗ ನಾನು ಚಿಕ್ಕವನಿದ್ದೆ ಎಂದು ಹೇಳಿದರು. ಶಿವರಾಮೇ ಗೌಡ ಮಾತನಾಡಿ,ಕನ್ನಡದ ನೆಲ,ಜಲ, ವಿಚಾರದಲಿ ಕಂಟಕ ಎದುರಾದಗ  ಸಂಪೂರ್ಣವಾಗಿ ಪ್ರಾಣ ತ್ಯಾಗ ಮಾಡಿ ನಾವು ಹೋರಾಟ ನಡೆಸಲು ಸಿದ್ಧರಿದ್ದೇವೆ.ಹೊರ ರಾಜ್ಯಗಳಲ್ಲಿ ಕನ್ನಡಿಗ ಯಾತ್ರಿಕರಿಗೆ ತೊಂದರೆ ನೀಡಿದರೆ ಯಾವುದೇ ಮುಲ್ಲಾಜಿಲ್ಲದೇ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.   ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದ್,ಮಲೇಶ್ವರಂ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ  ಜಯಕುಮಾರ್, ರಾಜರಾಜೇಶ್ವರಿ ನಗರದ ಎಸ್.ಜಯನ್‌ ಸೇರಿದಂತೆ ವಿ...

ರೈತರ ಮಕ್ಕಳಿಗೆ ಹೆಣ್ಣು ಕೊಟ್ಟವರಿಗೆ 10ಲಕ್ಷ ರೂ.ವೆಚ್ಚದ ಮನೆ ಯೋಜನೆ ಜಾರಿಗೆ ಒತ್ತಾಯ.

Image
 ರೈತರ ಮಕ್ಕಳಿಗೆ ಹೆಣ್ಣು ಕೊಟ್ಟವರಿಗೆ 10ಲಕ್ಷ ರೂ.ವೆಚ್ಚದ ಮನೆ ಯೋಜನೆ ಜಾರಿಗೆ ಒತ್ತಾಯ.   ಬೆಂಗಳೂರು ಜನವರಿ 30; ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ರೈತರ ಮಕ್ಕಳಿಗೆ ಹೆಣ್ಣು ಕೊಟ್ಟರೆ ಮುಂದಿನ ದಿನಗಳಲ್ಲಿ 10 ಲಕ್ಷ ರೂಪಾಯಿ ಮನೆಯನ್ನು ನೀಡುತ್ತೇವೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷದ ಮುಖಂಡ,ರಾಜ್ಯ ಉಪಾಧ್ಯಕ್ಷ ಎ. ಜಾಕೀರ್ ಹುಸೇನ್  ಮಾತನಾಡಿ,ರೈತರ ಗಂಡು ಮಕ್ಕಳಿಗೆ ಸರಿಯಾದ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ,ಈ ಹಿನ್ನಲೆಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರಿಗೆ 10ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕು, ರೈತರ ಜಮೀನುಗಳಿಗೆ ಉಚ್ಚಿತವಾಗಿ ವಿದ್ಯುತ್ ನೀಡಬೇಕು,  ಉಚಿತವಾಗಿ ಎಲ್ಲಾ ವರ್ಗದ ಜನರಿಗೆ ವಸತಿಯನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡಬೇಕು ಉಚಿತವಾಗಿ ವಿದ್ಯಾಭ್ಯಾಸ ಕೊಡಬೇಕು, ಉಚಿತವಾಗಿ ಎಲ್ಲರಿಗೂ ವರ್ಗದ ಜನರಿಗೆ ಆರೋಗ್ಯ ಉಚಿತವಾಗಿ ಕೊಡಬೇಕು ಎಂದು ಒತ್ತಾಯಿಸಿದರು. ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್,ಸಂಘಟನಾ ಕಾರ್ಯಾಧ್ಯಕ್ಷೆ ಜ್ಯೋತಿ ಸೇರಿದಂತೆ ನೂರಾರು ಮಂದಿ ರೈತ ಮಹಿಳೆಯರು, ಯುವಕರು ಭಾಗವಹಿಸಿದ್ದರು.

ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ.

Image
 ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ ಬೆಂಗಳೂರು ಜನವರಿ 30; ಸ್ವಚ್ಛತಾ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಘನತ್ಯಾಜ್ಯ ಚಾಲಕರು, ಸಹಾಯರುಗಳನ್ನು ಕೂಡಲೇ ನೇರಪಾವತಿ ಯೋಜನೆಗೆ  ಒಳಪಡಿಸುವಂತೆ ಕಾರ್ಮಿಕ ಸಂರಕ್ಷಣಟ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು. ಸಮಿತಿ ರಾಜ್ಯಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ನೇರ ಪಾವತಿ ಯೋಜನೆಗೆ ಘನತಾಜ್ಯ ಚಾಲಕರು ಸಹಾಯಕರನ್ನು ನೇರಪಾವತಿ ಯೋಜನೆಯಡಿ ಒಳಪಡಿಸುವಂತೆ  ಆದೇಶಿಸಬೇಕು, ಕೊಟ್ಟ ಮಾತಿಗೆ ತಪ್ಪಿದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸ್ವಚ್ಛತಾ ಕೆಲಸಕ್ಕೆ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತ ಸಂವಿಧಾನದ ಆಶಯದಂತೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಆಡಿಯಲ್ಲಿ ವಿಶೇಷ ಆಧ್ಯತೆ ಮೇರೆಗೆ ಈ ಜನಾಂಗವನ್ನು ಎಲ್ಲಾ  ಶೋಷಣೆಯಿಂದ ಸಂವಿಧಾನದ ಅನುಚ್ಛೇದ 46ರ ಪ್ರಕಾರ ರಕ್ಷಣೆ ಮಾಡಬೇಕಾದ ಹೊಣೆಯು ಸರ್ಕಾರದ ಮೇಲೆ ಇದೆ ಎಂದು ಹೇಳಿದರು. ಉಪ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಧರಣಿನಿರತ ಕೆಲವು ನಾಯಕರನ್ನು ತಮ್ಮ ಕಛೇರಿಗೆ ಕರೆ...

ದಲಿತ ಮುಖ್ಯಮಂತ್ರಿ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ನೇಮಕಕ್ಕೆ ಒತ್ತಾಯ.

Image
 ದಲಿತ ಮುಖ್ಯಮಂತ್ರಿ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ನೇಮಕಕ್ಕೆ ಒತ್ತಾಯ. ಬೆಂಗಳೂರು ಜನವರಿ 30;  ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ಅದರಲ್ಲಿ ಪರಿಶಿಷ್ಟ ಪಂಗಡದ ಸತೀಶ್ ಜಾರಕಿಹೊಳಿ ರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕರ್ನಾಟಕ ನವ ಸಮಾಜ ನಿರ್ಮಾಣ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ನೂರಾರು ದಲಿತ ನಾಯಕ ಸಮುದಾಯದವರು ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ.ಎಸ್.ಟಿ ನಿಗಮದ  ನಿರ್ದೇಶಕ ಯೋಗೇಶ್ ಮನವಿ ಸ್ವೀಕರಿಸಿದರು.      ವೇದಿಕೆ ರಾಜ್ಯಾಧ್ಯಕ್ಷ ಸಾಹೇಬ ರೆಡ್ಡಿ, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸಂಪುಟ ದರ್ಜೆ ಸಚಿವ ಸ್ಥಾನವನ್ನು ಮದುಗಿರಿ ಕ್ಷೇತ್ರದ ಶಾಸಕರಾದ ಕೆ .ಎನ್. ರಾಜಣ್ಣ, ರಾಯಚೂರು ಗ್ರಾಮೀಣ ಶಾಸಕರಾದ  ಬಸವನಗೌಡ ದದ್ದಲ್‌, ಚಳ್ಳಿಕೆರೆ ಶಾಸಕ ಟಿ. ರಘುಮೂರ್ತಿ ರವರನ್ನು ಆಯ್ಕೆ ಮಾಡಬೇಕು,ಎಸ್.ಟಿ. ಆಯೋಗ ರಚನೆ ಮಾಡಬೇಕು, ಸುಮ್ಮನಹಳ್ಳಿಯಲ್ಲಿ ಮಂಜೂರು ಮಾಡಿರುವ 2 ಎಕರೆ ಜಾಗದಲ್ಲಿ ವಾಲ್ಮೀಕಿ ಸೌಧ ನಿರ್ಮಾಣಕ್ಕೆ 50 ಕೋಟಿ ಅನುದಾನ ಮೀಸಲಿಡ ಬೇಕು ಎಂದು ಹೇಳಿದರು ಎಸ್.ಸಿ.ಎಸ್.ಟಿ. ವಸತಿರಹಿತರಿಗೆ ಖಾಲಿ ನಿವೇಶನ ಅಥವಾ ಮನೆಯನ್ನು ನೀಡುವುದು, ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ,ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚ...

ಬ್ರ್ಯಾಂಡ್ ಎಂಗೇಜ್‌ಮೆಂಟ್‌ಗೆ ಹೊಸ ದಾರಿ; ‘Dilfluencer Moments’ ಅನ್ನು ಪರಿಚಯಿಸಿದ ‘Z’!

Image
 ಬ್ರ್ಯಾಂಡ್ ಎಂಗೇಜ್‌ಮೆಂಟ್‌ಗೆ ಹೊಸ ದಾರಿ; ‘Dilfluencer Moments’ ಅನ್ನು ಪರಿಚಯಿಸಿದ ‘Z’! ಬೆಂಗಳೂರು, ಭಾರತ: ಭಾರತದ ಮುಂಚೂಣಿ ಕಂಟೆಂಟ್ ಮತ್ತು ತಂತ್ರಜ್ಞಾನ ಪವರ್‌ಹೌಸ್ ಆಗಿರುವ ‘Z’, ಬಹು-ಸ್ಕ್ರೀನ್ ಎಂಗೇಜ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ನಾವಿಗೇಟ್ ಮಾಡಲು ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ಬ್ರ್ಯಾಂಡ್‌ಗಳಿಗೆ ನೆರವಾಗುವ ಹೊಸ ಓಮ್ನಿಚಾನಲ್ ರೀಚ್ ಪರಿಹಾರ ‘Dilfluencer Moments’ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತದ ಜಾಹೀರಾತು ಕ್ಷೇತ್ರವು ವೇಗವಾಗಿ ರೂಪಾಂತರಗೊಳ್ಳುತ್ತಿದ್ದು, ಇಂದು ಯಾವುದೇ ಗಾತ್ರದ ಬ್ರ್ಯಾಂಡ್‌ಗಳಿಗೂ ಜಾಹೀರಾತು ಇನ್‌ವೆಂಟರಿಯನ್ನು ಸುಲಭವಾಗಿ ಖರೀದಿಸುವ ಅವಕಾಶ ದೊರಕಿದೆ. ಆದರೆ ಈ ಪ್ರಜಾಪ್ರಭುತ್ವೀಕರಣವೇ ವಿಸ್ತರಣೆ ಅಪಾರ ಪ್ರಮಾಣದ ಜಾಹೀರಾತು ಸಂದೇಶಗಳ ನಡುವೆ ಬ್ರಾಂಡ್‌ಗಳು ಎದ್ದು ಕಾಣುವುದು ಹೇಗೆ ಎಂಬ ಹೊಸ ಸವಾಲನ್ನು ತಂದಿದೆ. ಗಮನಾವಧಿ ಕುಗ್ಗುತ್ತಿರುವ ಮತ್ತು ಜಾಹೀರಾತು ಗೊಂದಲ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಗ್ರಾಹಕರು ಕೇವಲ ನೋಡುವುದಲ್ಲದೆ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡುವುದೇ ಮಾರ್ಕೆಟರ್‌ಗಳ ಪ್ರಮುಖ ಪ್ರಶ್ನೆಯಾಗಿದೆ. ಬ್ರ್ಯಾಂಡ್ ಅವೇರ್‌ನೆಸ್ ಮಾತ್ರವಲ್ಲದೆ, ಬ್ರಾಂಡ್ ಪ್ರೀತಿ ಮತ್ತು ಅರ್ಥಪೂರ್ಣ ಸಕ್ರಿಯತೆಯನ್ನು ಹೇಗೆ ನಿರ್ಮಿಸಬೇಕು ಎಂಬುದೇ ಸವಾಲಾಗಿದೆ. ‘Dilfluencer Moments’ ಪರಿಚಯ: ಈ ಸವಾಲಿಗೆ ‘Z’ಯ ಉತ್ತರವೇ ‘Dilfluencer Momen...