Posts

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾಗಬೇಕು: ಕೆ ಬಸಪ್ಪ ಗೌಡ

Image
  ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾಗಬೇಕು: ಕೆ ಬಸಪ್ಪ ಗೌಡ   ಬೆಂಗಳೂರು : ಮಧ್ಯ ಕರ್ನಾಟಕದ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಶಿವಮೊಗ್ಗದಲ್ಲಿ ಸ್ಥಾಪನೆಯಾಗಬೇಕು ಎಂದು ಹೋರಾಟ ಸಮಿತಿಯ ಗೌರವಾಧ್ಯಕ್ಷ, ವಕೀಲರಾದ ಕೆ ಬಸಪ್ಪ ಗೌಡ ಆಗ್ರಹಿಸಿದರು. ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಕರ್ನಾಟಕದ ಜಿಲ್ಲೆಗಳು ಭೌಗೋಳಿಕವಾಗಿ ಹೊಂದಿಕೊಂಡಿರುವ ಜಿಲ್ಲೆಗಳಾಗಿವೆ. ಇವೆಲ್ಲಕ್ಕೆ ಶಿವಮೊಗ್ಗ ಜಿಲ್ಲೆ ಕೇಂದ್ರ ಸ್ಥಾನವಾಗಿದೆ. 1956 ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾದಾಗ, ಕರ್ನಾಟಕ ರಾಜ್ಯದ ಎಲ್ಲಾ ಆಡಳಿತಾತ್ಮಕ ಸಂಘ ಸಂಸ್ಥೆಗಳು, ಮಧ್ಯಸ್ಥಾನವಾದ ಶಿವಮೊಗ್ಗ ಅಥವಾ ಹರಿಹರಕ್ಕೆ ಸ್ಥಾಪಿತಗೊಳ್ಳಬೇಕು ಎಂದು ಮಧ್ಯ ಕರ್ನಾಟಕದ ಜನರ ಹಕ್ಕಾಗಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಹೈದರಾಬಾದ್- ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಜಸ್ವಂತ್ ಸಿಂಗ್ ಕಮಿಷನ್ ಸೂತ್ರಗಳನ್ನು ಗಮನಿಸಿ ಭೌಗೋಳಿಕ ದೂರವನ್ನು ಪ್ರಮುಖವಾಗಿ ಪರಿಗಣಿಸಿ, ಆ ಭಾಗ ಮಧ್ಯ ಭಾಗವಾದ ಗುಲ್ಬರ್ಗದಲ್ಲಿ ಸಂಚಾರಿ ಪೀಠ ಸ್ಥಾಪಿಸಲಾಗಿತ್ತು. ಈಗ ಅದು ಶಾಶ್ವತ ಪೀಠವಾಗಿ ಪರಿವರ್ತನೆಗೊಂಡಿದೆ. ಅದೇ ರೀತಿಯಾಗಿ ಉತ್ತರ ಕರ್ನಾಟಕದಲ್ಲಿ ಸಂಚಾರಿ ಪೀಠವನ್ನು 2008 ರಲ್ಲಿ ...

ಆದಿಚುಂಚನಗಿರಿ ವಿವಿಯಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ: ಕುಲಸಚಿವ ಡಾ.ಸಿ.ಕೆ ಸುಬ್ಬರಾಯ

Image
ಆದಿಚುಂಚನಗಿರಿ ವಿವಿಯಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ: ಕುಲಸಚಿವ ಡಾ.ಸಿ.ಕೆ ಸುಬ್ಬರಾಯ ಬೆಂಗಳೂರು : ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ಕಾಲೇಜಿನಲ್ಲಿ ಎರಡು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ವಿವಿ ಕುಲಸಚಿವ ಡಾ.ಸಿ.ಕೆ ಸುಬ್ಬರಾಯ ಮಾಹಿತಿ ನೀಡಿದರು. ಗುರುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿ ಪರಮಪೂಜ್ಯ ಜಗದ್ಗುರು ನಿರ್ಮಲಾನಂದನಾಥ ಮಹಾ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಸಲಿದ್ದಾರೆ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಶಾಸಕ ಹಾಗೂ ಮಾಜಿ ಕೃಷಿ ಸಚಿವ ಚೆಲುವರಾಯಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಎಸ್.ಇ.ಆರ್.ಬಿ ನ್ಯಾಷನಲ್ ಸೈನ್ಸ್ ಅಧ್ಯಕ್ಷ ಹಾಗೂ ಐ.ಐ.ಎಸ್‌.ಇ.ಆರ್ ತಿರುವತಿಯ ನಿಕಟಪೂರ್ವ ನಿರ್ದೇಶಕ ಪ್ರೊ ಕೆ ಎನ್ ಗಣೇಶ್ ಉಪಸ್ಥಿತರಿರಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಯ ವಿಶ್ರಾಂತ ಕುಲಪತಿ ಹಾಗೂ ಎನ್ಎಎಸ್ಐ ಪೀಠದ ಪ್ರಾಧ್ಯಾಪಕ ಪ್ರೊ ಕೆ ಎಸ್ ರಂಗಪ್ಪ, ಜಪಾ...

VIP Karnataka Unit Condemns Arrest of Mukesh Sahni, Raises Concerns Over Encounter Killing

Image
  VIP Karnataka Unit Condemns Arrest of Mukesh Sahni, Raises Concerns Over Encounter Killing Bengaluru, June 13 : The Karnataka unit of the Vikassheel Insaan Party (VIP) has strongly criticised the arrest of its national founder and former Bihar Minister Mukesh Sahni and the alleged encounter killing of Kamlesh Bind in Uttar Pradesh. Addressing a press conference at the Bengaluru Press Club, State President Mohan Kumar B.K. accused the Uttar Pradesh government of undermining democratic values and bypassing established legal procedures. Mr. Mohan Kumar alleged that Mr. Sahni was arrested unlawfully in public and questioned the circumstances surrounding the death of Kamlesh Bind . He claimed that members of Bind’s family were not permitted to view the body following the encounter. Stressing the importance of due process, he said that individuals accused of wrongdoing should be produced before a court of law and tried in accordance with constitutional provisions. He further alle...

ಯುವಕರನ್ನು ಕೃಷಿಯತ್ತ ಸೆಳೆಯಲು ‘ವಿದ್ಯಾರ್ಥಿ–ರೈತ ವಾಕಥಾನ್’

Image
  ಯುವಕರನ್ನು ಕೃಷಿಯತ್ತ ಸೆಳೆಯಲು ‘ವಿದ್ಯಾರ್ಥಿ–ರೈತ ವಾಕಥಾನ್’ ಬೆಂಗಳೂರು : ಯುವಜನರಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸಿ, ಅವರನ್ನು ಕೃಷಿ ಕ್ಷೇತ್ರದತ್ತ ಆಕರ್ಷಿಸುವ ಉದ್ದೇಶದಿಂದ ‘ಸ್ಟೂಡೆಂಟ್ ಫಾರ್ಮರ್ಸ್ ವಾಕಥಾನ್ ಎಡಿಷನ್–2’ ಕಾರ್ಯಕ್ರಮವನ್ನು ಜೂನ್ 14ರಂದು (ಭಾನುವಾರ) ಬೆಳಿಗ್ಗೆ 8 ಗಂಟೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ. ಆಹಾರ ಸರಪಳಿ ಅಭಿಯಾನ (Food Chain Campaign) ನೇತೃತ್ವದಲ್ಲಿ ನಡೆಯುವ ಈ ವಾಕಥಾನ್‌ನಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತದ ನಿರ್ದೇಶಕ ಸಿ.ಎನ್. ಶಿವಪ್ರಕಾಶ್, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಎ.ಬಿ. ಪಾಟೀಲ್, ಉಪ ಆಯುಕ್ತ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಎಸ್. ಕಾಂತರಾಜು, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಶ್ರೀಗಂಧದ ಮರ ಮತ್ತು ವೇಣುಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ. ಅಮರನಾರಾಯಣ, ಗೋಶುಭಮ್ ಫೌಂಡೇಶನ್‌ನ ಸ್ಥಾಪಕ ನರೇಂದ್ರ, ಸಾರ್ವಜನಿಕ ಆರೋಗ್ಯ ತಜ್ಞ ಡಾ. ಸೌರೀಶ್ ಹೆಗ್ಡೆ, ಅಗ್ರೋಟಿಲ್ ಸಂಸ್ಥಾಪಕ ಅಲೆನ್ ಜೋಸೆಫ್ ಹಾಗೂ ಆಹಾರ ಸರಪಳಿ ಅಭಿಯಾನದ ಸ್ಥಾಪಕ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಯುವ ಅಧ್ಯಕ್ಷ ಯತೀಶ್ ತುಕಾರಾಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಯುವ ವಿದ್ಯಾರ್ಥಿಗಳು, ರೈತರು ಹಾಗೂ ಕೃಷಿ ಕ್ಷೇತ್ರದ ...

ಹೆಣ್ಣುಮಕ್ಕಳ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ವಿಶೇಷ ಕಾರ್ಯಕ್ರಮ: ಇನ್ನರ್ ವೀಲ್ ಅಧ್ಯಕ್ಷೆ ವಿನುತಾ ಹರೀಶ್

Image
 ಹೆಣ್ಣುಮಕ್ಕಳ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ವಿಶೇಷ ಕಾರ್ಯಕ್ರಮ: ಇನ್ನರ್ ವೀಲ್ ಅಧ್ಯಕ್ಷೆ ವಿನುತಾ ಹರೀಶ್  ಬೆಂಗಳೂರು: ಹೆಣ್ಣುಮಕ್ಕಳ ಕ್ರೀಡಾ ಚುಟುವಟಿಗಳು ಬೆಳವಣಿಗೆ ಹಂತದಲ್ಲಿದ್ದು, ಅವರಿಗೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಇನ್ನರ್ ವೀಲ್ ಸಂಸ್ಥೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಇನ್ನರ್ ವೀಲ್ ಕ್ಲಬ್ ಅಸೋಸಿಯೇಷನ್ ನೂತನ ರಾಷ್ಟ್ರೀಯ ಅಧ್ಯಕ್ಷೆ ವಿನುತಾ ಹರೀಶ್ ಹೇಳಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನೆಡೆಸಿ ಮಾತಾಡಿದ ಅವರು, ನಮ್ಮ 1755 ಕ್ಲಬ್ ಗಳಲ್ಲೂ ಹೆಣ್ಣು ಮಕ್ಕಳಿಗೆ ಕ್ರೀಡಾ ಮನೋಭಾವವನ್ನು ಬೆಳೆಸುವುದು ಮತ್ತು ಈ ಕುರಿತು ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ಇಡೀ ವರ್ಷ ಈ ಹಿನ್ನಲೆಯಲ್ಲಿ ಬಹುಮುಖ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕೇವಲ ನಮ್ಮ ರಾಜ್ಯ ಮಾತ್ರವಲ್ಲದೆ ಇಡೀ ದೇಶಾದ್ಯಂತ ಕ್ರೀಡೆಗೆ ಉತ್ತೇಜನ ನೀಡುವುದು ಇನ್ನರ್ ವೀಲ್ ಕ್ಲಬ್ ಅಸೋಸಿಯೇಷನ್ ಗುರಿಯಾಗಿದೆ. 60 ಸಾವಿರ ಸದಸ್ಯರೂ ಕೂಡ ಸರ್ವಾನುಮತದಿಂದ ಇದಕ್ಕೆ ಒಪ್ಪಿಗೆಯನ್ನೂ ಕೂಡ ನೀಡಿದ್ದಾರೆ ಎಂದರು. ಜಗತ್ತಿನಲ್ಲಿ ನಮ್ಮ ಸದಸ್ಯರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕವಾಗಿದೆ. ಈಗಾಗಲೇ 18 ಕೋಟಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪರಿಹಾರ ಒದಗಿಸುವ ಕಾರ್ಯ ಈಗಾಗಲೇ ನಡೆದಿದೆ. ಸಿ.ಎಸ್.ಆರ್ ನಿಧಿಗಳು, ಜನರಿಂದ ನೇರವಾಗಿ ಪಡೆದ ದಾನದಿಂದ ಈ ಸೇವಾ ಕಾರ್ಯ...

ಅಪಾರ್ಟ್ಮೆಂಟ್ ಗಳ ಸಂಬಂಧ ಕಾನೂನಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಎನ್. ಎ. ಹ್ಯಾರಿಸ್

Image
 ಅಪಾರ್ಟ್ಮೆಂಟ್ ಗಳ ಸಂಬಂಧ ಕಾನೂನಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಎನ್. ಎ. ಹ್ಯಾರಿಸ್ ಬೆಂಗಳೂರು: ಅಪಾರ್ಟ್ಮೆಂಟ್ ಮಾಲೀಕರು, ಬಿಲ್ಡರ್ಸ್ ಮತ್ತು ಇತರೆ ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ತರಲು ರಾಜ್ಯ ಸರ್ಕಾರ ಸಾಕಷ್ಟು ಕಾನೂನಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಎ. ಹ್ಯಾರಿಸ್ ತಿಳಿಸಿದರು. ಶನಿವಾರ ಸಂಜೆ ನಗರದ ಸೇಂಟ್ ಜೋಸೆಫ್ಸ್ ಲಾ ಕಾಲೇಜಿನಲ್ಲಿ ನಡೆದ ಪ್ರಾಪರಿಟಾಸ್ 2.0 ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಕೂಡ ಹಳ್ಳಿ ಹಳ್ಳಿಗಳಿಂದ ಕೂಡಿ ಮಹಾನಗರವಾಗಿ ಮಾರ್ಪಟ್ಟಿದೆ. ಇಲ್ಲಿ ಕೂಡ ಜನರು ಸೌಹಾರ್ದತೆಯಿಂದ ಮತ್ತು ಸಂತಸದಿಂದ ಬದುಕುವುದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಹಳೆಯ ಕಾನೂನು ಮತ್ತು ಪದ್ಧತಿಗಳು ಹೊಸ ಜೀವನ ಶೈಲಿಗೆ ತೊಡಕಾಗಿದ್ದವು ಇವನ್ನು ಸರಿಪಡಿಸಿ ಹೊಸ ತಂತ್ರಜ್ಞಾನ, ಕಾನೂನು ಜ್ಞಾನವನ್ನು ತರಲು ಸರ್ಕಾರದ ವತಿಯಿಂದ ಶಮಿಸಲಾಗುತ್ತಿದೆ ಎಂದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೂಡ ನಾನು ಅಧ್ಯಕ್ಷನಾಗಿ ಕಾರ್ಯಭಾರ ಸ್ವೀಕರಿಸಿದ ಮೇಲೆ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಪಾರದರ್ಶಕ ಆಡಳಿತ ವ್ಯವಸ್ಥೆ, ತಂತ್ರಜ್ಞಾನದ ಅಳವಡಿಕೆ, ಸಾರ್ವಜನಿಕ ಕುಂದು ಕೊರತೆ ಆಲಿಸಲು ಪ್ರತ್ಯೇಕ ವಿಭಾಗ ವನ್ನು ಸ್ಥಾಪಿಸಲಾಗಿದೆ. ಕಾನೂನಾತ್ಮದ ತೊಡ...

ಕೆ. ವಿ.ಅಮರ್‌ನಾಥ್‌ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಮಡಿವಾಳರ ಆಗ್ರಹ.

Image
 ಕೆ. ವಿ.ಅಮರ್‌ನಾಥ್‌ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಮಡಿವಾಳರ ಆಗ್ರಹ. ಬೆಂಗಳೂರು ಜೂನ್ 6; ಮಡಿವಾಳ ಸಮುದಾಯದ ಪ್ರಮುಖರಾದ ಶ ಕೆ. ವಿ. ಅಮರನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡುವಂತೆ ರಾಜ್ಯ ಮಡಿವಾಳರ ಸಂಘ ಆಗ್ರಹಿಸಿದೆ.  ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ನಂಜಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಆರ್.ಪ್ರಕಾಶ್, ಉಪಾಧ್ಯಕ್ಷ ರಾಜಣ್ಣ,ಮಡಿವಾಳ ಸಮುದಾಯದ ಸಮಾಜದ ಸೇವೆ ಮಾಡುತ್ತಾ ಮತ್ತು ಸಮಾಜದ ಅನೇಕ ಸಮಾವೇಶಗಳಿಗೆ ಆರ್ಥಿಕ ಸಹಾಯ, ಸಂಘಟನೆ ಮಾಡುತ್ತಾ ಬಂದಿದ್ದಾರೆ. ಕೆ. ವಿ. ಅಮರ್‌ನಾಥ್ ಅವರು ಮಡಿವಾಳ ಸಮುದಾಯದ ಯಾವುದೇ ಸಮಸ್ಯೆಗೂ ಸ್ಪಂದಿಸಿ ನೆರವಾಗುವ ಮೂಲಕ ಸಮುದಾಯದ ಮುಂಚೂಣಿಯ ನಾಯಕರಾಗಿದ್ದಾರೆ. ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಬಂದು ಇವರು ಕಾಂಗ್ರೆಸ್ ಪಕ್ಷವನ್ನು ಸೇರಿ ಪಕ್ಷವನ್ನು ಸಂಘಟನೆ ಮಾಡಿ ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಬೃಹತ್ ಜನ ಜಾಗೃತಿ ಸಮಾವೇಶವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸಿದರು ಎಂದರು. ಸಮಾಜ ಸೇವೆ ಎನ್ನುವುದು ಕೆ. ವಿ. ಅಮರ್‌ನಾಥ್ ರವರ ರಕ್ತದಲ್ಲಿ ಬೆರೆತು ಹೋಗಿದೆ. ನೊಂದು ಬಂದವರನ್ನು ಯಾವತ್ತು ಬರಿಗೈಯಲ್ಲಿ ಕಳಿಸಿದವರಲ್ಲ. ಹಾಗೆಯೇ ಬದುಕಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಸಹಾಯ ಮಾಡಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಸಮು...