ರಾಜ್ಯಾದ್ಯಂತ ಆಸ್ತಿಗಳ ಭದ್ರತೆ ಅಪಾಯದಲ್ಲೇ?* *ಇ-ನೋಂದಣಿ ದೋಷಗಳಿಂದ ಭೂಮಾಫಿಯಾ, ಹ್ಯಾಕರ್ಗಳಿಗೆ ಬಾಗಿಲು
*ರಾಜ್ಯಾದ್ಯಂತ ಆಸ್ತಿಗಳ ಭದ್ರತೆ ಅಪಾಯದಲ್ಲೇ?* *ಇ-ನೋಂದಣಿ ದೋಷಗಳಿಂದ ಭೂಮಾಫಿಯಾ, ಹ್ಯಾಕರ್ಗಳಿಗೆ ಬಾಗಿಲು ತೆರೆಯಿತೇ?* *ಜನರಲ್ಲಿ ಆತಂಕ – ತಜ್ಞರಿಂದ ಗಂಭೀರ ಎಚ್ಚರಿಕೆ* ಬೆಂಗಳೂರು, ಮೇ 2: ರಾಜ್ಯದಲ್ಲಿ ಜಾರಿಗೊಂಡಿರುವ ಪೇಪರ್ಲೆಸ್ ಡಿಜಿಟಲ್ ಇ-ನೋಂದಣಿ ವ್ಯವಸ್ಥೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾನ್ಯ ಜನರ ಆಸ್ತಿ ಭದ್ರತೆ ಗಂಭೀರ ಅಪಾಯದಲ್ಲಿದೆ ಎಂಬ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಂತ್ರಿಕ ದೋಷಗಳು, ಭದ್ರತಾ ಕೊರತೆಗಳು ಹಾಗೂ ಪಾರದರ್ಶಕತೆಯ ಅಭಾವದಿಂದ ಈ ವ್ಯವಸ್ಥೆ ಭೂಮಾಫಿಯಾ ಮತ್ತು ಹ್ಯಾಕರ್ಗಳಿಗೆ ಸಹಾಯಕವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಖ್ಯ ಸಮಸ್ಯೆಗಳು – ಸಾರ್ವಜನಿಕರಿಗೆ ದೊಡ್ಡ ಎಚ್ಚರಿಕೆ ಪತ್ರಗಳೇ ಇಲ್ಲ – ಆಸ್ತಿಯೇ ಅಪಾಯದಲ್ಲಿ! ಇ-ನೋಂದಣಿ ಬಳಿಕ ಖರೀದಿದಾರರಿಗೆ ಯಾವುದೇ ಭೌತಿಕ ದಾಖಲೆಗಳು ನೀಡಲಾಗುತ್ತಿಲ್ಲ. ಡಿಜಿಟಲ್ ಲಾಕರ್ನಲ್ಲೇ ದಾಖಲೆಗಳು ಉಳಿಯುತ್ತಿರುವುದರಿಂದ ಜನರಿಗೆ ತಮ್ಮ ಆಸ್ತಿಯ ನಿಖರ ದಾಖಲೆಗಳೇ ಲಭ್ಯವಿಲ್ಲ. ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು)ಪತ್ರ ಬರಹಗಾರರ ಒಕ್ಕೂಟದಿಂದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ.ಏಕಕೋಟೆ, ಉಪಾಧ್ಯಕ್ಷರಾದ ನವೀನ್ ಕುಮಾರ್ ಎಸ್, ಸಹ ಕಾರ್ಯದರ್ಶಿಗಳಾದ ಕರಿಬಸಪ್ಪ ಬಳ್ಳಿ, ಈ.ಕೃಷ್ಣಮೂರ್ತಿರವರು ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು. ವಾರಸುದಾರರಿಗೆ ಮಾ...