Posts

ಬೆಂಗಳೂರುದಲ್ಲಿ ಲಯನ್ಸ್ ಬಿಸಿನೆಸ್ ಡೇ” ಉದ್ಯಮಿಗಳ ಸಮಾಗಮ

Image
  ಬೆಂಗಳೂರುದಲ್ಲಿ ಲಯನ್ಸ್ ಬಿಸಿನೆಸ್ ಡೇ” ಉದ್ಯಮಿಗಳ ಸಮಾಗಮ ಬೆಂಗಳೂರು, ಏಪ್ರಿಲ್ 2026 ಲಯನ್ಸ್ ಬಿಸಿನೆಸ್ ನೆಟ್‌ವರ್ಕ್ ವತಿಯಿಂದ  ಲಯನ್ಸ್ ಬಿಸಿನೆಸ್ ಡೇ  ಅಂಗವಾಗಿ ಸುಸಂಘಟಿತ ಹಾಗೂ ಪರಿಣಾಮಕಾರಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಕೈಗಾರಿಕಾ ಪರಿಣಿತರ ಮತ್ತು ವ್ಯಾಪಾರ ವಲಯದ ನಾಯಕರು ಭಾಗವಹಿಸಿ, ಸಹಕಾರ, ನಾಯಕತ್ವ ಮತ್ತು ಭವಿಷ್ಯದ ದಿಕ್ಕು ತೋರಿಸುವ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಚರ್ಚಿಸಿದರು. ಕಾರ್ಯಕ್ರಮವು ಬೆಳಿಗ್ಗೆ 11:30ಕ್ಕೆ ಸಂಪ್ರದಾಯಬದ್ಧ ದೀಪಪ್ರಜ್ವಲನದೊಂದಿಗೆ ಆರಂಭವಾಯಿತು. ನಂತರ ಮುಖ್ಯ ಅತಿಥಿಗಳು ಮತ್ತು ಗಣ್ಯರ ಸ್ವಾಗತ ಹಾಗೂ ಧ್ವಜ ವಂದನೆ ನಡೆಯಿತು. ಸ್ವಾಗತ ಭಾಷಣದಲ್ಲಿ ಲಯನ್ಸ್ ಬಿಸಿನೆಸ್ ನೆಟ್‌ವರ್ಕ್‌ನ ಜಿಲ್ಲಾ ಅಧ್ಯಕ್ಷರಾದ  ಡಾ. ಸಿಂಹ ಶಾಸ್ತ್ರಿ  ಅವರು ವೃತ್ತಿಪರ ಸಂಬಂಧಗಳನ್ನು ಬಲಪಡಿಸುವುದು ಮತ್ತು ವ್ಯಾಪಾರ ಸಮುದಾಯದಲ್ಲಿ ಪರಸ್ಪರ ಬೆಳವಣಿಗೆಯ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಥಮ ಉಪ ಜಿಲ್ಲಾ ಗವರ್ನರ್  ರಾಜು ಚಂದ್ರಶೇಖರ್  ಅವರು ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ನಾಯಕತ್ವದ ಮಹತ್ವವನ್ನು ವಿವರಿಸಿದರು. ಉದ್ಯಮಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ತಂತ್ರಾತ್ಮಕ ಚಿಂತನೆ ಅತ್ಯಂತ ಅಗತ್ಯವೆಂದು ಅವರು ತಿಳಿಸಿದರು. ಮುಖ್ಯ ಭಾಷಣಕಾರರ...

ಮೆಜೆಸ್ಟಿಕ್ ನಲ್ಲಿ ಇರುವ ಡಿಪೋ ಮ್ಯಾನೇಜರ್ ಹೇಳುತ್ತಾನೆ ಪ್ರಯಾಣಕರಿಗೆ ಕೇಳುವ ಹಕ್ಕು ಯಾವುದೇ ರೀತಿ ಇಲ್ಲ ಎಂದು ಪ್ರಯಾಣಿಕರ ಮೇಲೆ ಧಮ್ಕಿ

Image
  ಮೆಜೆಸ್ಟಿಕ್ ನಲ್ಲಿ ಇರುವ ಡಿಪೋ ಮ್ಯಾನೇಜರ್ ಹೇಳುತ್ತಾನೆ ಪ್ರಯಾಣಕರಿಗೆ ಕೇಳುವ ಹಕ್ಕು ಯಾವುದೇ ರೀತಿ ಇಲ್ಲ ಎಂದು ಪ್ರಯಾಣಿಕರ ಮೇಲೆ ಧಮ್ಕಿ   ವಿಷಯ   ಇಂದು ಬೆಂಗಳೂರಿಂದ ಶಿವಮೊಗ್ಗ ಈ ಜರ್ನಿ ಮಾಡುತ್ತಿರುವ ಪ್ರಯಾಣಿಕರು ಹಾಗೂ ಇತರೆ ಸ್ಟೇಷನ್ಗಳ ಪ್ರಯಾಣಿಕರಿಗೆ ಮನೆ ತೊಂದರೆ ಆಗಿದ್ದು ಅದರ ಬಗ್ಗೆ ಕೇಳಿದಾಗ ಡಿಪೋ ಮ್ಯಾನೇಜರ್ ಕೂಡ ಪ್ರಯಾಣಿಕರಿಗೆ ಅಸಭ್ಯ ವರ್ತನೆಯಿಂದ ಮಾತನಾಡಿ ಅವರಿಗೆ ತಂತಿ ಹಾಕುತ್ತಿದ್ದಾನೆ  ನೀವು ಹೇಳುತ್ತಿರುವ ಸಮಸ್ಯೆ ಸರಳ ವಿಷಯ ಅಲ್ಲ — ಇದು ಪ್ರಯಾಣಿಕರ ಹಕ್ಕುಗಳಿಗೆ ಸಂಬಂಧಿಸಿದ ವಿಷಯ. Karnataka State Road Transport Corporation (KSRTC) ಬಸ್‌ಗಳು ಸಾಮಾನ್ಯವಾಗಿ ನಿಗದಿತ ಸ್ಟಾಪ್‌ಗಳಲ್ಲಿ ಮಾತ್ರ ನಿಲ್ಲುತ್ತವೆ. ಆದರೆ ಕೆಲವು ಮುಖ್ಯ ವಿಷಯಗಳನ್ನು ಗಮನಿಸಬೇಕು: 🔹 ಯಾಕೆ ಮಧ್ಯದಲ್ಲಿ ನಿಲ್ಲಿಸುವುದಿಲ್ಲ? ನಿಗದಿತ ರೂಟ್ ಮತ್ತು ಸ್ಟಾಪ್‌ಗಳು ಬೆಂಗಳೂರು–ಶಿವಮೊಗ್ಗ ರೂಟ್‌ನಲ್ಲಿ ಬಸ್‌ಗಳಿಗೆ ಫಿಕ್ಸ್ ಮಾಡಿದ ಸ್ಟಾಪ್‌ಗಳು ಇರುತ್ತವೆ. ಚಾಲಕ/ಕಂಡಕ್ಟರ್‌ಗಳು ಅದಕ್ಕಿಂತ ಹೊರಗೆ ನಿಲ್ಲಿಸುವುದಕ್ಕೆ ಅನುಮತಿ ಇಲ್ಲ. ಎಕ್ಸ್‌ಪ್ರೆಸ್ / ನಾನ್-ಸ್ಟಾಪ್ ಸರ್ವಿಸ್ ನೀವು ತೆಗೆದುಕೊಂಡದ್ದು “Express” ಅಥವಾ “Rajahamsa / Airavat” ರೀತಿಯ ಸರ್ವಿಸ್ ಆಗಿದ್ದರೆ, ಅವು ಕಡಿಮೆ ಸ್ಟಾಪ್‌ಗಳಲ್ಲಿ ಮಾತ್ರ ನಿಲ್ಲಿಸುತ್ತವೆ. ಸೇಫ್ಟಿ ಮತ್ತು ನಿಯಮಗಳು ರಸ್ತೆ ಸುರಕ್ಷತೆ ಮತ್ತು ಟ...

“ಹಬ್ಬದ ಹೆಸರಿನಲ್ಲಿ ಹಸಿರು ಹತ್ಯೆ ಜೆಲ್ಯಾಕ್ಕಸ್ ಜೆವೆಲ್ಲೆರ್ಸ್ : ರಾಜಾಜಿನಗರದಲ್ಲಿ ಪರಿಸರದ ಮೇಲೆ ವ್ಯಾಪಾರ ದೌರ್ಜನ್ಯ!

Image
 **“ಹಬ್ಬದ ಹೆಸರಿನಲ್ಲಿ ಹಸಿರು ಹತ್ಯೆ ಜೆಲ್ಯಾಕ್ಕಸ್ ಜೆವೆಲ್ಲೆರ್ಸ್ : ರಾಜಾಜಿನಗರದಲ್ಲಿ ಪರಿಸರದ ಮೇಲೆ ವ್ಯಾಪಾರ ದೌರ್ಜನ್ಯ! **“ಅಕ್ಷಯ ತೃತೀಯ ಸಂಭ್ರಮವೇ? ಇಲ್ಲ ಪ್ರಕೃತಿಯ ಸಂಹಾರವೇ? ರಾಜಾಜಿನಗರದಲ್ಲಿ ಹಸಿರಿನ ಮೇಲೆ ವ್ಯಾಪಾರ ದಾಳಿ!”** *ನಟರಾಜ್ ಬಿಪಿ*  ಬೆಂಗಳೂರು: ರಾಜಾಜಿನಗರದಲ್ಲಿರುವ ಜೋಯಲುಕಾಸ್ ಜುವೆಲರಿ  (Joyalukkas Jewellery) ಆಭರಣ ಮಳಿಗೆಯಲ್ಲಿ ಅಕ್ಷಯ ತೃತೀಯ  (Akshaya Tritiya) ಅಂಗವಾಗಿ ಘೋಷಿಸಿರುವ ಭರ್ಜರಿ ಆಫರ್‌ಗಳು ವ್ಯಾಪಾರಿಕ ಚಟುವಟಿಕೆಯ ಭಾಗವಾಗಿದ್ದರೂ, ಅದರ ಹೆಸರಿನಲ್ಲಿ ಪರಿಸರ ಹಾನಿ ನಡೆಯುತ್ತಿರುವುದು ಅತ್ಯಂತ ಗಂಭೀರ ಮತ್ತು ಖಂಡನೀಯ ಸಂಗತಿಯಾಗಿ ಹೊರಹೊಮ್ಮಿದೆ. ಪರಿಸರ ಸ್ನೇಹಿ ಟ್ರಸ್ಟ್ ಅಧ್ಯಕ್ಷರಾದ ನಟರಾಜ್ ಬಿ.ಪಿ  ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಗ್ರಾಹಕರನ್ನು ಆಕರ್ಷಿಸಲು ಮಳಿಗೆ ಅಲಂಕಾರ ಮಾಡುವುದು ವ್ಯಾಪಾರಿಗಳ ಹಕ್ಕು ಎಂಬುದು ಸತ್ಯ. ಆದರೆ ಅದಕ್ಕಾಗಿ ಜೀವಂತ ಮರಗಳನ್ನು ಕಡಿದುಹಾಕುವುದು ಅಥವಾ ಮರಗಳಿಗೆ ಅತಿಯಾದ ವಿದ್ಯುತ್ ದೀಪಾಲಂಕಾರಗಳನ್ನು ಹಾಕಿ ಅವುಗಳ ಜೀವಚಕ್ರಕ್ಕೆ ಹಾನಿ ಉಂಟುಮಾಡುವುದು ನೇರವಾಗಿ ಪ್ರಕೃತಿಯ ಮೇಲೆ ನಡೆಯುವ ಹಿಂಸಾಚಾರ. ಇದು ಕೇವಲ ಅಜಾಗರೂಕತೆ ಅಲ್ಲ — ಇದು ಸಮಾಜದ ವಿರುದ್ಧದ ಜವಾಬ್ದಾರಿಯಿಲ್ಲದ ವರ್ತನೆ ಮತ್ತು ಕಾನೂನು ಉಲ್ಲಂಘನೆಯಷ್ಟೇ ಗಂಭೀರವಾದ ಕ್ರಮ” ಎಂದು ಕಿಡಿಕಾರಿದರು. ಅವರು ಮುಂದುವರಿದು, “ಮರಗಳು ಕೇವಲ ಅಲಂಕಾರದ ವಸ್...

ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಕಾರ್ಯಾಗಾರ. ನ್ಯಾ.ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ; ತಿರಸ್ಕಾರಕ್ಕೆ ಬಲಗೈ ಸಮುದಾಯ ಮುಖಂಡರ ಒಕ್ಕೊರಲ್ಲ ತೀರ್ಮಾನ.

Image
  ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಕಾರ್ಯಾಗಾರ. ನ್ಯಾ.ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ; ತಿರಸ್ಕಾರಕ್ಕೆ ಬಲಗೈ ಸಮುದಾಯ ಮುಖಂಡರ ಒಕ್ಕೊರಲ್ಲ ತೀರ್ಮಾನ.  ಬೆಂಗಳೂರು: ಏ.17: ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಒಳಮೀಸಲಾತಿ ವಿಷಯದಲ್ಲಿ ನಾಗಮೋಹನ್ ದಾಸ್ ಆಯೋಗವು ನೀಡಿರುವ ಅವೈಜ್ಞಾನಿಕ ವರದಿಯ ಹಿನ್ನಲೆಯಲ್ಲಿ ಸಮಗ್ರವಾಗಿ ನಮ್ಮ ಬಲಗೈ ಸಮುದಾಯಕ್ಕೆ ಅನ್ಯಾಯದ ವಿಷಯವಾಗಿ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು  ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕ‌ರ್ ಭವನದಲ್ಲಿ ಆಯೋಜಿಸಲಾಗಿತ್ತು.   ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಹುಜನ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ,ರೋಸ್ಟರ್ ಬಿಂದುಗಳ ಆದೇಶವನ್ನು ಹಿಂಪಡೆಯಲು ಮತ್ತು ಸಮಾಜ ಕಲ್ಯಾಣ ಇಲಾಖೆ ದಿನಾಂಕ ಅಕ್ಟೋಬರ್  8 2025ರಂದು ಹೊರಡಿಸಿರುವ ಜಾತಿ ಪ್ರಮಾಣ ಪತ್ರದ ಸುತ್ತೋಲೆಯನ್ನು ಹಿಂಪಡೆದು ಮೂಲ ಜಾತಿ ಪ್ರಮಾಣ ಪತ್ರ ನೀಡಲು ಆದೇಶ ಹೊರಡಿಸಲು, ಈ ಹಿಂದೆ ನೀಡಿರುವ ಕಾಯಂ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಶೇ.15+3ರಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರಬಾರದು ಎಂದು ಹೇಳಿದರು. ಸರ್ಕಾರವು ಇದುವರೆಗೂ ಯಾವುದೇ ಕ್ರಮ ವಹಿಸದೇ ಇರುವುದರಿಂದ ಮುಂದಿನ ಹೋರಾಟಗಳನ್ನು ರೂಪಿಸಲು ಚರ್ಚಿಸುವುದು ಅಗತ್ಯವಾಗಿದೆ ಈ  ಹಿನ್ನೆಲೆಯಲ್ಲಿ ಕಾರ್ಯಗಾರವನ್ನು ಏರ್ಪಡಿಸಿ ಕೆಲ ಅಂಶಗಳ ಬಗ್...

*ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಯೋಜನೆಗೆ ಚಾಲನೆ.ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತ

Image
 *ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಯೋಜನೆಗೆ ಚಾಲನೆ.ಕರ್ನಾಟಕ ಕಾಂಪೋಸ್ಟ್  ಅಭಿವೃದ್ದಿ ನಿಗಮ ನಿಯಮಿತ*  ಜಿಬಿಎ ಕೇಂದ್ರ ಕಛೇರಿ: ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತ ಜಿಬಿಟಿಐಎ ವತಿಯಿಂದ  ಸಿ.ಎಸ್.ಆರ್.ಚಟುವಟಿಕೆಯಡಿ ಬೆಂಗಳೂರು ಕಾಂಪೋಸ್ಟ್ ಖರೀದಿ ಮತ್ತು ರೈತರಿಗೆ ಉಚಿತಲಾಗಿ ವಿತರಣಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಎ.ಎನ್.ನಟರಾಜ್ ಗೌಡರವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ *ಅಧ್ಯಕ್ಷರಾದ ಎ.ಎನ್.ನಟರಾಜ್ ಗೌಡರವರು* ಮಾತನಾಡಿ  ಹಸಿ ಕಸದಿಂದ ಗೊಬ್ಬರ ತಯಾರಿಕೆಯಾಗಬೇಕು ಮತ್ತು ಒಣಕಸ ಮರುಬಳಕೆಯಾಗಬೇಕು ಭೂಮಿಗೆ ಯಾವ ಕಲುಷಿತ ವಸ್ತುಗಳು ಸೇರಬಾರದು ಎಂಬ ಉದ್ದೇಶ ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ತಯಾರಿಕೆಯಾಗುವ ಗೊಬ್ಬರ ಮತ್ತು ನಮ್ಮ ನಿಗಮದಲ್ಲಿರುವ ಗೊಬ್ಬರವನ್ನು  ಸಿ.ಎಸ್.ಆರ್.ಅನುದಾನದ ಅಡಿಯಲ್ಲಿ  ಮೈತ್ರಿ ಸರ್ವ ಸೇವಾ ಸಮಿತಿ ಸಹಯೋಗದಲ್ಲಿ ರೈತರಿಗೆ ಉಚಿತವಾಗಿ ಕಾಂಪೋಸ್ಟ್ ಗೊಬ್ಬರ  ವಿತರಿಸಲಾಗುವುದು. ಬೆಂಗಳೂರುನಗರದಲ್ಲಿ ಕಾಂಪೋಸ್ಟ್ ತಯಾರಿಕೆಯಾದ ಮೇಲೆ ಹಳ್ಳಿಯ ರೈತರಿಗೆ ಉಪಯೋಗವಾಗಲು ಡೊಡ್ಡ ಯೋಜನೆ ರೂಪಿಸಲಾಗಿದೆ. ಇದರಿಂದ ಸಿ.ಎಸ್.ಆರ್. ನಿಧಿಯಿಂದ  ರೈತರಿಗೆ ಉಚಿತವಾಗಿ ನೀಡಲಾಗುವುದು. ನಮ್ಮ ಸಂಸ್ಥೆ ಮತ್ತು ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ತಯಾರಿಸುವ ಗೊಬ್ಬರವನ್ನು  ತಲುಪಿಸುವ ಕೆಲಸವಾಗುತ್ತದೆ. ಕೋಲಾರ, ಚಿಕ...

ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಂದ ಸುಳ್ಳು ಮಾಹಿತಿ ನೀಡಿ ಆಸ್ತಿ ಕಬಳಿಕೆ ಆರೋಪ.

Image
 ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಂದ ಸುಳ್ಳು ಮಾಹಿತಿ ನೀಡಿ ಆಸ್ತಿ ಕಬಳಿಕೆ ಆರೋಪ. ಬೆಂಗಳೂರು ಏಪ್ರಿಲ್ 15; ತೆಲಂಗಾಣ ಮೂಲದ ಹಿರಿಯ ನಾಗರಿಕರಿಗೆ ಸೇರಿದ ಬೆಲೆ ಬಾಳುವ ನಿವೇಶನವನ್ನು ಬಿಜೆಪಿ ಹಿರಿಯ ಮುಖಂಡ,ಪ್ರತಿಪಕ್ಷ ನಾಯಕ ಆರ್.ಅಶೋಕ್ ನ್ಯಾಯಾಲಯಕ್ಕೆ ಸುಳ್ಳು  ಮಾಹಿತಿ ನೀಡಿ ಕಬಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಸಮಾಜ ಸೇವಕ ಪ್ರಶಾಂತ್ ಗೌಡ, ನಿವೇಶನದಾರೆ ಹಿರಿಯ ನಾಗರಿಕ ರೆಡ್ಡಿ ರಾಮಾನುಜೇಶ್ವರಿ ಆರೋಪಿಸಿದರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಿರಿಯ ನಾಗರಿಕರಾಗಿರುವ ಶ್ರೀ ರೆಡ್ಡಿ ರಾಮಾನುಜಶ್ವೇರಿ ಅವರಿಗೆ ನಿವೇಶನ ಕಬಳಿಸಲು ಆರ್.ಅಶೋಕ್ ಅವರ ಕಡೆಯಿಂದ ಅಕಾನೂನಾತ್ಮಕ ಹಾಗೂ ಜೀವಬೇದರಿಕೆ, ಕಿರುಕುಳ ನೀಡಲಾಗುತ್ತದೆ.ರಾಮಾನುಜೇಶ್ವರಿ ಎಂಬುವವರಿಗೆ ಸೇರಿದ ನಿವೇಶನದಲ್ಲಿ 25ಗುಂಟೆ ಜಾಗ ತಮ್ಮ ಕುಟುಂಬಕ್ಕೆ ಸೇರಿದ್ದು ನಮಗೆ ಸೇರಬೇಕಿದೆ ಎಂದು ನ್ಯಾಯಾಲಯದಲ್ಲಿ ಆರ್.ಅಶೋಕ್ ಮೊಕದ್ದಮೆ ಹೂಡುವ ಮೂಲಕ ಮೂಲ ನಿವೇಶನದಾರರಿಗೆ ಕಿರುಕುಳ ನೀಡುತ್ತಿದ್ದಾರೆ.ಈ ಕುರಿತಂತೆ ಸಂಬಂಧಿಸಿದ ಪೋಲಿಸ್ ಠಾಣೆಗೆ ದೂರು ನೀಡಿದ್ದರೂ ರಾಜಕೀಯ ಪ್ರಭಾವದಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ತಾತ ಮುನಿಕೆಂಪಯ್ಯ ಎಂಬುವವರು ಕೊಡಿಗೆಹಳ್ಳಿಯಲ್ಲಿ 1955ರಲ್ಲಿ 1ಎಕರೆ 11ಗುಂಟೆ ಜಮೀನನ್ನು ಬೈಯ್ಯಣ್ಣ ಮತ್ತು ಅವರ ಮಕ್ಕಳಿಂದ ಖರೀದಿ ಮಾಡಿದ್ದು,ಬಳಿಕ ಅವರ ತಾತ...

ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ, ಏಪ್ರಿಲ್ 11 ಮತ್ತು ಏಪ್ರಿಲ್ 12ರಂದು

Image
 ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ, ಏಪ್ರಿಲ್ 11 ಮತ್ತು ಏಪ್ರಿಲ್ 12 ರಂದು  ಬೆಂಗಳೂರು, 08 ಏಪ್ರಿಲ್ 2026: ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಅಂತಿಮ ಘಟ್ಟ ತಲುಪಿದ್ದು ಫಿನಾಲೆ ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ. ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಡ್ಯಾನ್ಸರ್ ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ ಈ ಶೋನಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳು ಮತ್ತು ಥೀಮ್ ಗಳಿದ್ದಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಕಳೆದ ಕೆಲವು ವಾರಗಳಿಂದ ಚಾನೆಲ್‌ನ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಗವಾಗಿತ್ತು. ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವ್ರು ಡಾನ್ಸ್ ಕರ್ನಾಟಕ ಡಾನ್ಸ್ ಶೋನ ತೀರ್ಪುಗಾರಾಗಿದ್ದರು. ಇನ್ನು ಈ ಶೋನ ನಿರೂಪಣೆಯನ್ನು ಎಲ್ಲರ ಅಚ್ಚುಮೆಚ್ಚಿನ ಅನುಶ್ರೀ ಮಾಡುತ್ತಿದ್ದಾರೆ.  ಈ ಸೀಸನ್ ನಲ್ಲಿ ತೀರ್ಪುಗಾರರು ಸ್ಪರ್ಧಿಗಳ ಪರ್ಫಾಮನ್ಸ್ ನು  ಹಾವ, ಭಾವ, ಕಾರ್ಡಿನೇಷನ್, ಓವರ್ ಆಲ್ ಪ್ರೆಸೆಂಟೇಷನ್ ಗಳನ್ನು  ನೋಡಿ ತಮ್ಮ ತೀರ್ಪನ್ನು ನೀಡಿರುವುದು ಸ್ಪರ್ಧಿಗಳ ಮತ್ತಷ್ಟು ಇಂಪ್ರೂವ್ಮೆಂಟ್ ಗೆ ಕಾರಣಾವಾಯಿತು. ಈ ಶೋನಲ್ಲಿ ನೃತ್ಯದ ಮೂಲಕ ಕಥೆ ಹೇಳುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇಲ್ಲಿ...