Posts

ಗಣೇಶ ಹಬ್ಬದ ಮುನ್ನ ಗಣೇಶ್ ದೇವಸ್ಥಾನದ ಗೋಪುರ ತೆರವು — ಮೇಣದಬತ್ತಿ ಪ್ರತಿಭಟನೆ

Image
ಗಣೇಶ ಹಬ್ಬದ ಮುನ್ನ ಗಣೇಶ್ ದೇವಸ್ಥಾನದ ಗೋಪುರ ತೆರವು — ಮೇಣದಬತ್ತಿ ಪ್ರತಿಭಟನೆ ನೋಟಿಸ್ ನೀಡದೇ ತೆರವುಗೊಳಿಸಿದ ಆರೋಪದ ವಿರುದ್ಧ ಆಕ್ರೋಶ: ಡಾ. ಎಸ್. ಸಂಗಮೇಶ್ ಬೆಂಗಳೂರು, ಆಗಸ್ಟ್ 22: ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ AECS Layoutನ ಗಣೇಶ್ ದೇವಸ್ಥಾನದ ಗೋಪುರವನ್ನು ಮುಂಚಿತ ನೋಟಿಸ್ ನೀಡದೇ ತೆರವುಗೊಳಿಸಲಾಗಿದೆ ಎಂಬ ಆರೋಪದ ವಿರುದ್ಧ ಕರ್ನಾಟಕ ರಾಜ್ಯ ಯುವ ಸಮೂಹದ ವತಿಯಿಂದ ಮೇಣದಬತ್ತಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಹಲವಾರು ಸ್ಥಳೀಯರು ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾರ್ವಜನಿಕರು ಭಾಗವಹಿಸಿ, ದೇವಸ್ಥಾನ ತೆರವು ಕಾರ್ಯಾಚರಣೆಯ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನುಬದ್ಧ ಪ್ರಕ್ರಿಯೆ ಪಾಲಿಸಬೇಕು ಮತ್ತು ಪ್ರಕರಣದ ಸತ್ಯಾಂಶವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್, ದೇವಸ್ಥಾನವು ಸರ್ಕಾರಿ ಅಥವಾ BDA ಜಾಗದಲ್ಲಿದ್ದು ಅತಿಕ್ರಮಣವಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ನ್ಯಾಯಾಲಯದ ಆದೇಶಕ್ಕೂ ಸಂಪೂರ್ಣ ಗೌರವವಿದೆ. ಆದರೆ, ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೇ ತೆರವು ಕಾರ್ಯಾಚರಣೆ ನಡೆಸಿರುವುದಾದರೆ ಅದನ್ನು ಪ್ರಶ್ನಿಸುವುದು ನಮ್ಮ ಹಕ್ಕು ಎಂದು ಅವರು ಹೇಳಿದರು. “ದೇವಸ್ಥಾನಕ್ಕೆ ನೋಟಿಸ್ ನೀಡಲಾಗಿತ್ತೇ?” “...

ಬೆಂಗಳೂರಿನ ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026: ದಾಖಲೆಯ 1,093 ಸ್ಪರ್ಧಿಗಳೊಂದಿಗೆ ಹೊಸ ಮೈಲಿಗಲ್ಲು

Image
 ಬೆಂಗಳೂರಿನ ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026: ದಾಖಲೆಯ 1,093 ಸ್ಪರ್ಧಿಗಳೊಂದಿಗೆ ಹೊಸ ಮೈಲಿಗಲ್ಲು ಬೆಂಗಳೂರು, ಕರ್ನಾಟಕ – ಆಗಸ್ಟ್ 16, 2026 ಬೆಂಗಳೂರಿನ ನೆಕ್ಸಸ್ ಕೊರಮಂಗಲ ಮಾಲ್‌ನಲ್ಲಿ ಸಜ್ಜನ್ ಅಕಾಡೆಮಿ ಆಯೋಜಿಸಿದ್ದ “ಬೆಂಗಳೂರು ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026” ಭರ್ಜರಿ ಯಶಸ್ಸು ಕಂಡಿದ್ದು, ಒಟ್ಟು 1,093 ಸ್ಪರ್ಧಿಗಳು ಭಾಗವಹಿಸುವ ಮೂಲಕ ಕರ್ನಾಟಕದ ಚೆಸ್ ಟೂರ್ನಮೆಂಟ್ ಇತಿಹಾಸದಲ್ಲೇ ಅತಿ ಹೆಚ್ಚು ಭಾಗವಹಿಸುವಿಕೆಯ ದಾಖಲೆಯನ್ನು ನಿರ್ಮಿಸಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ದೇಶದ ಹಲವು ರಾಜ್ಯಗಳಿಂದ ಚೆಸ್ ಆಟಗಾರರು ಆಗಮಿಸಿ ಈ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದರು. ಆರಂಭಿಕ ಹಂತದ ಆಟಗಾರರಿಂದ ಹಿಡಿದು ರೇಟೆಡ್ ಆಟಗಾರರು, ರಾಜ್ಯ ಚಾಂಪಿಯನ್‌ಗಳು, ರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಹಾಗೂ ಅಂತರರಾಷ್ಟ್ರೀಯ ರೇಟಿಂಗ್ ಹೊಂದಿರುವ ಆಟಗಾರರು ಕೂಡ ಪಾಲ್ಗೊಂಡಿದ್ದು, ಟೂರ್ನಮೆಂಟ್‌ಗೆ ಹೆಚ್ಚಿನ ಸ್ಪರ್ಧಾತ್ಮಕತೆ ಮತ್ತು ಉತ್ಸಾಹವನ್ನು ತಂದಿತು. ಟೂರ್ನಮೆಂಟ್‌ನಲ್ಲಿ ಒಟ್ಟು ₹4 ಲಕ್ಷ ನಗದು ಬಹುಮಾನ ವಿತರಿಸಲಾಯಿತು. ವಿಶೇಷವಾಗಿ ವಿವಿಧ ವಯೋಮಿತಿ ಹಾಗೂ ಸಾಧನಾ ವಿಭಾಗಗಳಲ್ಲಿ ಬಹುಮಾನಗಳನ್ನು ನೀಡುವ ಮೂಲಕ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಪ್ರೋತ್ಸಾಹಿಸಲಾಯಿತು. ನೂರಾರು ಆಟಗಾರರನ್ನು ಅವರ ಸಾಧನೆಗಾಗಿ ಗುರುತಿಸಿ ಗೌರವಿಸಲಾಯಿತು. ಈ ಪಂದ್ಯಾವಳಿಯನ್ನು AICF, KSCA ಮತ...

ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನಾ

Image
 ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನ ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಮೈಸೂರು ಜಿಲ್ಲೆಯ ಲೋಕ ರಂಜನ್ ಮಹಲ್ ರೋಡ್, ಹಿಟ್ಟಿಗೆ ಗೂಡಿನ ಮೈಸೂರು ಶಾಖೆ ಯಲ್ಲಿ ಇಂದು16/08/2028 ನಡೆಯಿತು  ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ವೇದಶ್ರೀ, ರಾಷ್ಟ್ರೀಯ ಖಜಾಂಚಿ ಸಿದ್ದರಾಜು, ಮೈಸೂರು ಜಿಲ್ಲೆಯ ಅಧ್ಯಕ್ಷ ರಾದ ಮಾಣಿಕ್ಯಂ ,ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ, ಬೆಂಗಳೂರು ಜಿಲ್ಲೆಯ ಕಾರ್ಯದರ್ಶಿ ರಾಜಶೇಖರ್, ಮೈಸೂರು ಜಿಲ್ಲಾ ಸದಸ್ಯ ರಾದ  ತ್ಯಾಗರಾಜು,ಶ್ರೀಮತಿ ರೇವತಿ, ಶ್ರೀಮತಿ ರಾಧಾ,  ಚಂದ್ರಶೇಖರ, ವರಕೋಡು ಕೃಷ್ಣೇಗೌಡರು  ನಂದಕುಮಾರ, ಕುಮಾರ ,ಶ್ರೀಮತಿ ಭುವನೇಶ್ವರಿ  ರಮೇಶ್ ,ಹೇಮಂತ್ ಕುಮಾರ್, ಶೇಖರ್  ಹಾಗೂ ಸ್ಥಳೀಯರು ಭಾಗಿಯಾಗಿದ್ದರು

ಹಕ್ಕುಗಳ ಜೊತೆಗೆ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು: ಎಂ.ಎಸ್ ಸಂತೋಷ್

Image
ಹಕ್ಕುಗಳ ಜೊತೆಗೆ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು: ಎಂ.ಎಸ್ ಸಂತೋಷ್ ಬೆಂಗಳೂರು: ದೇಶಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಯ ವಾತಾವರಣ ನೆಲೆಸಿದ್ದು, ನಾವು 79 ವರ್ಷಗಳನ್ನು ಪೂರೈಸಿ 80ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳ ಜೊತೆಗೆ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ಅತ್ಯಗತ್ಯ ಎಂದು ಜೈನ್ ವಿಶ್ವವಿದ್ಯಾಲಯದ ಜಂಟಿ ರಿಜಿಸ್ಟ್ರಾರ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕದ ಕಮಿಷನರ್ ಎಂ.ಎಸ್ ಸಂತೋಷ್ ಅಭಿಪ್ರಾಯಪಟ್ಟರು. ಶನಿವಾರ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ವತಿಯಿಂದ ಸ್ವಾತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯವನ್ನು ಅನುಭವಿಸುವ ರೀತಿಯಲ್ಲಿಯೇ ದೇಶಕ್ಕೆ ಒಳಿತಾಗುವಂತಹ ಜವಾಬ್ದಾರಿಯುತ ನಡೆಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಎನ್.ಸಿ.ಸಿ ಯಂತಹ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಕೊಳ್ಳುವುದರಿಂದ ಅವರಲ್ಲಿ ಸದ್ಗುಣಗಳು ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ. ಅವರನ್ನು ದೇಶದ ಸದೃಢ ಪ್ರಜೆಗಳನ್ನಾಗಿ ರೂಪಿಸಲು ನೆರವಾಗುತ್ತದೆ ಎಂದರು. ಇಲ್ಲಿ ಒಬ್ಬ ವಿದ್ಯಾರ್ಥಿನಿ ದೇಶವನ್ನು ಸ್ವಚ್ಛವಾಗಿಡಲು ಪ್ರಧಾನಿಯಾಗುವ ಆಸೆ ವ್ಯಕ್ತಪಡಿಸಿದ್ದನ್ನು ನೋಡಿ ಸಂತಸವಾಯಿತು. ಆದರೆ ದುರದೃಷ್ಟವ...

ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಸಮ್ಮುಖದಲ್ಲಿ ತಂಡದ ಅನಾವರಣ; JPL ಸೀಸನ್ 1ಕ್ಕಾಗಿ ಜೈನ್ ಸ್ಪೋರ್ಟ್ಸ್ ತಂಡದ ಪ್ರಮುಖ ಪಾಲುದಾರ*

Image
ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಸಮ್ಮುಖದಲ್ಲಿ ತಂಡದ ಅನಾವರಣ; JPL ಸೀಸನ್ 1ಕ್ಕಾಗಿ ಜೈನ್ ಸ್ಪೋರ್ಟ್ಸ್ ತಂಡದ ಪ್ರಮುಖ ಪಾಲುದಾರ*  *JITO ಪ್ರೀಮಿಯರ್ ಲೀಗ್ಗಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಅನಾವರಣಗೊಳಿಸಿದ ನವ್ರತನ್ ಜ್ಯುವೆಲ್ಲರ್ಸ್ ಮತ್ತು ಜೈನ್ ಸ್ಪೋರ್ಟ್ಸ್* *ಬೆಂಗಳೂರು, ಆಗಸ್ಟ್ 11, 2026:* ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರಾದ ನವ್ರತನ್ ಜ್ಯುವೆಲ್ಲರ್ಸ್, ಪ್ರಪ್ರಥಮ JITO ಪ್ರೀಮಿಯರ್ ಲೀಗ್ (JPL) ಸೀಸನ್ 1ಕ್ಕೂ ಮುನ್ನ ಇಂದು ತಂಡವನ್ನು ಅಧಿಕೃತವಾಗಿ ಅನಾವರಣಗೊಳಿಸಿತು. ಕ್ರಿಕೆಟ್, ಸಮುದಾಯ, ಉದ್ಯಮಶೀಲತೆ ಹಾಗೂ ಶ್ರೇಷ್ಠತೆಯ ಬದ್ಧತೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರೀಡಾ ಪಯಣಕ್ಕೆ ಇದು ಚಾಲನೆ ನೀಡಿದೆ. ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ಸಮ್ಮುಖದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಪಿಲ್ ದೇವ್ ತಂಡದ ಆಟಗಾರರು ಮತ್ತು ಸದಸ್ಯರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. IPL ತಾರೆ ವೈಶಾಕ್ ವಿಜಯ್ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಪ್ರಥಮ JITO ಪ್ರೀಮಿಯರ್ ಲೀಗ್ ಆಗಸ್ಟ್ 24ರಿಂದ ಸೆಪ್ಟೆಂಬರ್ 5, 2026ರವರೆಗೆ ಶ್ರೀಲಂಕಾದ ಕೊಲಂಬೊದಲ್ಲಿರುವ CCC ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದೆ. ಆಗಸ್ಟ್ 24ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ನವ್ರತನ್ ಜ್ಯುವೆಲ್ಲರ್ಸ್ಗೆ ಬೆಂ...

ಶಾಸಕಿ ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಲು ಒತ್ತಾಯ.

Image
 ಶಾಸಕಿ ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಲು ಒತ್ತಾಯ.    ಸುದ್ದಿ. ಬೆಂಗಳೂರು ಆಗಸ್ಟ್ 6;  ಡಿ.ಕೆ. ಶಿವಕುಮಾರ್ ಮುಖ್ಯ ಮಂತ್ರಿಗಳ ಸಂಪುಟದಲ್ಲಿ ಮಹಿಳೆಯರಿಗೆ ಒಂದು ಸ್ಥಾನವನ್ನು ಕೊಟ್ಟಿಲ್ಲ ಕಾರಣದಿಂದ ಇವರು ಕಾಂಗ್ರೇಸ್ ಪಕ್ಷದ ಶಿಸ್ತು ಮತ್ತು ಕೆಲಸದಲ್ಲಿ ಕ್ಷೇತ್ರದಲ್ಲಿ ಜನ ಮೆಚ್ಚಿದ ನಾಯಕಿಯಾಗಿ ಕೆಲಸ ಮಾಡಿದ ನಯನ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸೇನೆ ಒತ್ತಾಯಿಸಿದೆ. ಬೆಂಗಳೂರು ಕಬ್ಬನ್ ಉದ್ಯಾನದಲ್ಲಿ ಸರಳ ಪ್ರತಿಭಟನೆ ನಡೆಸಿ ಸುದ್ದಿಗೋಷ್ಠಿ ನಡೆಸಿದ ಬಿ.ಸುಮಾ ಬಸವಲಿಂಗಯ್ಯ, ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು. ಎಂಬಂತೆ ತಾಯಿ ಮೋಟಮ್ಮನವರು ಸಚಿವರಾಗಿ ಸ್ತ್ರೀ ಶಕ್ತಿ ಗುಂಪನ್ನು 2 ಲಕ್ಷಕ್ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ ಮತ್ತು ಎ.ಐ.ಸಿ.ಸಿಯಲ್ಲಿ ಕಾರ್ಯಕಾರಣಿ ಸದಸ್ಯರಾಗಿ ಮತ್ತು ವಿಧಾನಪರಿಷತ್‌ನಲ್ಲಿ ವಿರೋಧಪಕ್ಷದ ನಾಯಕಿಯಾಗಿ ರಾಜ್ಯ ಕಂಡ ದಕ್ಷ ಆಡಳಿತ ನೀಡಿದ್ದಾರೆ.ನಯನ ಮೋಟಮ್ಮ ವಿದ್ಯಾರ್ಹತೆ, ಸೌಮ್ಯತೆ, ಪಕ್ಷದಲ್ಲಿ ಶಿಸ್ತಿನ ಶಿಫಾಯಿ ಇರುವುದರಿಂದ ಪಕ್ಷದ ಯುವ ತರುಣೆ ರಾಜ್ಯದಲ್ಲಿ ಕೆಲಸ ಮಾಡುವುದಕ್ಕೆ ಆಸಕ್ತಿ ಇರುವ ಹಿನ್ನಲೆಯಲ್ಲಿ ಡಿ.ಕೆ.ಸಂಪುಟದಲ್ಲಿ ಮಹಿಳೆಯರಾದ ನಯನ ಮೋಟಮ್ಮರವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.

ಕ್ರಿಶ್ಚಿಯನ್ ನಿಗಮ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಜಾಕ್ಕೆ ಒತ್ತಾಯ.

Image
 ಕ್ರಿಶ್ಚಿಯನ್ ನಿಗಮ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಜಾಕ್ಕೆ ಒತ್ತಾಯ ಆರೋಪಗಳಲ್ಲಿ ಆಧಾರವಿಲ್ಲ.ಪಾರದರ್ಶವಾಗಿ ಎಲ್ಲವೂ ನಡೆದಿದೆ; ಉಪಾಧ್ಯಕ್ಷ ಸಂಜಯ್ ಜಾಗೀರ್ದಾರ್. ಬೆಂಗಳೂರು ಆಗಸ್ಟ್ 4;    ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ  ನಿಗಮದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಅವರ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ಕ್ರೈಸ್ತ ಮಹಾಸಭಾವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಹಾಸಭಾ ರಾಜ್ಯಾಧ್ಯಕ್ಷ     ಪ್ರಜ್ವಲ್ ಸ್ವಾಮಿ ಮಾತನಾಡಿ,   ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅಂದಾಜು 1.5ವರ್ಷರ ಗತಿಸಿದರೂ  ಸಮುದಾಯದ ಅಭಿವೃದ್ಧಿಗೆ ಮೀಸಲಾಗಿರಿಸಿರುವ 250ಕೋಟಿ ಅನುದಾನದಲ್ಲಿ ಇಲ್ಲಿಯವರಗೆ ಕೇವಲ 85ಕೋಟಿ ರೂಪಾಯಿ ಅನುದಾನ ಮಾತ್ರ ಖರ್ಚು ಮಾಡಲಾಗಿದೆ. ಅದೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡದೇ ಹೆಚ್ಚಾಗಿ ಕೇವಲ ಲೋನ್‌ಗಳಿಗೆ ಮಾತ್ರ ಬಿಡುಗಡೆ ಮಾಡಿದ್ದಾರೆ ಇಂತಹ ಅಧ್ಯಕ್ಷರು,ಉಪಾಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಅಸಮರ್ಪಕ ಬೇಜವಾಬ್ದಾರಿಯುತ ಹಾಗೂ ಇಂತಹ ಪದವಿಗಳಿಗೆ ತರಲವಲ್ಲದ ರೀತಿಯಿ ಕಾರ್ಯನಿರ್ವಹಣೆಯಿಂದಾಗಿ ಸಕಾಲದಲ್ಲಿ ಅನುದಾನ ಬಳಕೆ ಮಾಡದೇ ಇರುವುದರಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು  ಕ್ರಿಶ್ಚಿಯನ...