Posts

ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿ – ರಾಜ್ಯ ಲಾಟರಿ ಯೋಜನೆ ಮರು ಜಾರಿಗೊಳಿಸಿ: ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಆಗ್ರಹ*

Image
 *ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿ – ರಾಜ್ಯ ಲಾಟರಿ ಯೋಜನೆ ಮರು ಜಾರಿಗೊಳಿಸಿ: ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಆಗ್ರಹ* ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಅಕ್ರಮ ಲಾಟರಿ ಮಾರಾಟವನ್ನು ಸಂಪೂರ್ಣವಾಗಿ ತಡೆದು, ಶಾಸನಬದ್ಧ ಕರ್ನಾಟಕ ರಾಜ್ಯ ಲಾಟರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ (ರಿ.)  ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸಿ. ರಾಮಕೃಷ್ಣ, ವಕೀಲರಾದ ಭಾಸ್ಕರ್ ಬಾಬುರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.  ರಾಜ್ಯದಲ್ಲಿ ಅಕ್ರಮ ಲಾಟರಿಯಿಂದ ಉಂಟಾಗಿರುವ ಸಮಸ್ಯೆಗಳು, ಸರ್ಕಾರದ ನಿರ್ಲಕ್ಷ್ಯ ಹಾಗೂ ಸಾವಿರಾರು ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳು ಹಲವಾರು. ಸಂಘದ ಪ್ರಕಾರ, 1998ರಲ್ಲಿ ಕೇರಳ ಸರ್ಕಾರ ಆರಂಭಿಸಿದ ಲಾಟರಿ ಯೋಜನೆಯು ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಅಕ್ರಮವಾಗಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದು, ಪ್ರತಿದಿನ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುತ್ತಿದ್ದು. ಈ ಹಿಂದೆ ಕರ್ನಾಟಕ ಸರ್ಕಾರದ ಲಾಟರಿ ಯೋಜನೆಯ ಮೂಲಕ ಸುಮಾರು 5,000 ರಿಂದ 6,000 ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ರಾಜ್ಯದ ಖಜಾನೆಗೆ ಹರಿದು ಬರುತ್ತಿತ್...

Statewide Education Awareness Campaign on Digital Reforms Launched in Bengaluru

Image
  Statewide Education Awareness Campaign on Digital Reforms Launched in Bengaluru Bengaluru, July 3 : Easy Access Services, in association with the e-Governance Federation of India, formally launched its Karnataka-wide Education Awareness Campaign with a state-level press conference at the Bangalore Press Club on Friday. The initiative aims to create greater public awareness about key education reforms and digital initiatives of the Government of India, ensuring that students, parents, teachers and educational institutions are well-informed about the opportunities available under the evolving education ecosystem. During the programme, speakers highlighted the significance of the Automated Permanent Academic Account Registry (APAAR), Academic Bank of Credits (ABC), One Nation One Student ID, the National Education Policy (NEP), digital academic records, student credit transfer, academic mobility and technology-enabled educational governance. They stressed that wider awareness of the...

ಕರ್ನಾಟಕದಲ್ಲಿ ಶಿಕ್ಷಣ ಸಬಲೀಕರಣ ಉಪಕ್ರಮ, ಈಝಿ ಆಕ್ಸೆಸ್ ಸರ್ವೀಸಸ್ ವತಿಯಿಂದ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ

Image
  ಕರ್ನಾಟಕದಲ್ಲಿ ಶಿಕ್ಷಣ ಸಬಲೀಕರಣ ಉಪಕ್ರಮ, ಈಝಿ ಆಕ್ಸೆಸ್ ಸರ್ವೀಸಸ್ ವತಿಯಿಂದ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ ಭಾರತೀಯ ಆಡಳಿತ ಒಕ್ಕೂಟ(ಜಿಎಫ್‌ಐ)ದ ಸಹಯೋಗದೊಂದಿಗೆ ಈಝಿ ಆಕ್ಸೆಸ್ ಸರ್ವೀಸಸ್ ಸಂಸ್ಥೆಯು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ), ಎಪಿಎಎಆರ್ ಮತ್ತು ಹೊಸ ಡಿಜಿಟಲ್ ಶಿಕ್ಷಣ ಸುಧಾರಣೆಗಳ ಕುರಿತು ರಾಜ್ಯಾದ್ಯಂತ ಸಾರ್ವಜನಿಕ ಜಾಗೃತಿ ಉಪಕ್ರಮದ ನೇತೃತ್ವ ವಹಿಸಲಿವೆ ಎಂದು ತಿಳಿಸಿದ್ದಾರೆ. ಬೆಂಗಳೂರು, ಜುಲೈ 3, 2026 : ಈಝಿ ಆಕ್ಸೆಸ್ ಸರ್ವೀಸಸ್ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ರಾಜ್ಯಮಟ್ಟದ ಪತ್ರಿಕಾಗೋಷ್ಠಿಯೊಂದಿಗೆ ಈ ಅಭಿಯಾನ ಅಧಿಕೃತವಾಗಿ ಪ್ರಾರಂಭವಾಗಿದ್ದು. ಮಾಧ್ಯಮ ಸಂಸ್ಥೆಗಳು, ಶಿಕ್ಷಣ ವೃತ್ತಿಪರರು, ಶೈಕ್ಷಣಿಕ ಸಂಸ್ಥೆಗಳು. ಸಾಮಾಜಿಕ ಸಂಸ್ಥೆಗಳು, ನೀತಿ ತಜ್ಞರು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಡಿಜಿಟಲ್ ಶಿಕ್ಷಣ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸುಧಾರಣೆಗಳ ಭವಿಷ್ಯ ಕುರಿತು ಈ ಅಭಿಯಾನ ಚರ್ಚಿಸಲಿದ್ದು, ಪ್ರಮುಖ ಶೈಕ್ಷಣಿಕ ಸುಧಾರಣೆಗಳು ಮತ್ತು ಭಾರತ ಸರ್ಕಾರದ ಉಪಕ್ರಮಗಳ ಬಗ್ಗೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿರುವವರಲ್ಲಿ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸುವುದು ಈ ಉ...

ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮಾಡಿದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಟಿ. ಕೋನಪ್ಪರೆಡ್ಡಿ

Image
  ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮಾಡಿದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಟಿ. ಕೋನಪ್ಪರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ "ರಾಜ್ಯ ಒಕ್ಕಲಿಗರ ಸಂಘದ ಟಿ. ಕೋನಪ್ಪರೆಡ್ಡಿ"! 01, ಜುಲೈ, 2026, ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಬೆಂಗಳೂರು: ಇಂದು ಬೆಂಗಳೂರು ನಗರದ ಪ್ರೆಸ್ ಕ್ಲಬ್ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಟಿ. ಕೋನಪ್ಪರೆಡ್ಡಿ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದ ಪಧಾಧಿಕಾರಿಗಳು ದಿನಾಂಕ:25.06.2026 ರಂದು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪ ಶುದ್ಧ ಸುಳ್ಳು ಎಂದು ಹೇಳಿ, ಸ್ಪಷ್ಟಿಕರಣ ನೀಡಲು ಮಾಧ್ಯಮಗಳಿಗೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಸುಮಾರು 18 ವಿಚಾರಗಳಿಗೆ ಸವಿಸ್ತಾರವಾಗಿ ಉತ್ತರಿಸಿದ ರೆಡ್ಡಿಯವರು, ನಿಮಗೆ ನಾನು ಈಗ ಉತ್ತರಿಸಿದ ವಿಚಾರಗಳಿಗಷ್ಟೇ ದಾಖಲೆಗಳನ್ನು ನೀಡಿದ್ದೇನೆ, ನನ್ನ ಬಳಿ ಇನ್ನೂ ಅನೇಕ ವಿಚಾರಗಳಿಗೆ ಸಂಬಂಧಿಸಿದ ಪಾತ್ರಗಳು, ಸಾಕ್ಷಿಗಳು ಮತ್ತು ದಾಖಲೆಗಳಿವೆ ಎಂದು ಹೇಳಿದರು. ಮುಂದುವರಿದಂತೆ, ಸಂಘದಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಲೇ ಇವೆ. ಕೆಲವರು ತಮ್ಮ ಮಕ್ಕಳ ಖಾತೆಗೆ ದುಡ್ಡನ್ನು ಫೋನ್ ಪೇ ಮಾಡಿಸಿಕೊಂಡಿರುತ್ತಾರೆ, ನಾನು ಹಿರಿಯ ನಾಗರೀಕನಾದ ಕಾರಣ, ನನಗೆ ಜೀವನ ತಿಳಿದಿದೆ, ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಇಚ್ಚಿಸುವುದಿಲ್ಲ, ಹಾಗಾಗಿ ಆ ಚೇರ್ಮನ್ ಯಾರು ಮತ್ತು ಆತನ ಮಕ್ಕಳ ಹೆಸರೇನು ಎಂದು ಹೇಳುವುದಿಲ್ಲ ಎಂದರು. ಮುಂದುವರ...

The Vidyapeeth Corner Fest-2026 program was held today and will continue tomorrow too at the Gajendra Vilas Hotel, Vidyapeeth Circle, Katriguppe Road, Bangalore.

Image
 The Vidyapeeth Corner Fest-2026 program was held today and will continue tomorrow too at the Gajendra Vilas Hotel, Vidyapeeth Circle, Katriguppe Road, Bangalore. There was a mass recitation of Lalitha Sahasranama, Bhagavad Gita, cultural programs, such as Srinivasa Kalyana, a bridal conference, a bhajan program etc. Many  lady entrepreneurs put up stalls displaying home and hand made products. This event was inaugurated by Basavangudi MLA, Mr. L.A. Ravi Subramanium. A free basic health screening camp was organised by NU hospital,Mission Road. A lot of members participated in the health screening camp.This was inaugurated by Sr Vice President of AKBMS(Akila Karnataka Brahmana Maha Sabha ) and Sr. BJP leader Mr K.N. Chayapathi. The matrimony Conference was inaugurated by Sr Film Artist Mr Shankar Bhat. This program was organised by Mr Hanumesh K Yavagal,President of Karnataka State Digital News Media Association. The program was a successful one with lot of people participating...

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾಗಬೇಕು: ಕೆ ಬಸಪ್ಪ ಗೌಡ

Image
  ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾಗಬೇಕು: ಕೆ ಬಸಪ್ಪ ಗೌಡ   ಬೆಂಗಳೂರು : ಮಧ್ಯ ಕರ್ನಾಟಕದ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಶಿವಮೊಗ್ಗದಲ್ಲಿ ಸ್ಥಾಪನೆಯಾಗಬೇಕು ಎಂದು ಹೋರಾಟ ಸಮಿತಿಯ ಗೌರವಾಧ್ಯಕ್ಷ, ವಕೀಲರಾದ ಕೆ ಬಸಪ್ಪ ಗೌಡ ಆಗ್ರಹಿಸಿದರು. ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಕರ್ನಾಟಕದ ಜಿಲ್ಲೆಗಳು ಭೌಗೋಳಿಕವಾಗಿ ಹೊಂದಿಕೊಂಡಿರುವ ಜಿಲ್ಲೆಗಳಾಗಿವೆ. ಇವೆಲ್ಲಕ್ಕೆ ಶಿವಮೊಗ್ಗ ಜಿಲ್ಲೆ ಕೇಂದ್ರ ಸ್ಥಾನವಾಗಿದೆ. 1956 ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾದಾಗ, ಕರ್ನಾಟಕ ರಾಜ್ಯದ ಎಲ್ಲಾ ಆಡಳಿತಾತ್ಮಕ ಸಂಘ ಸಂಸ್ಥೆಗಳು, ಮಧ್ಯಸ್ಥಾನವಾದ ಶಿವಮೊಗ್ಗ ಅಥವಾ ಹರಿಹರಕ್ಕೆ ಸ್ಥಾಪಿತಗೊಳ್ಳಬೇಕು ಎಂದು ಮಧ್ಯ ಕರ್ನಾಟಕದ ಜನರ ಹಕ್ಕಾಗಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಹೈದರಾಬಾದ್- ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಜಸ್ವಂತ್ ಸಿಂಗ್ ಕಮಿಷನ್ ಸೂತ್ರಗಳನ್ನು ಗಮನಿಸಿ ಭೌಗೋಳಿಕ ದೂರವನ್ನು ಪ್ರಮುಖವಾಗಿ ಪರಿಗಣಿಸಿ, ಆ ಭಾಗ ಮಧ್ಯ ಭಾಗವಾದ ಗುಲ್ಬರ್ಗದಲ್ಲಿ ಸಂಚಾರಿ ಪೀಠ ಸ್ಥಾಪಿಸಲಾಗಿತ್ತು. ಈಗ ಅದು ಶಾಶ್ವತ ಪೀಠವಾಗಿ ಪರಿವರ್ತನೆಗೊಂಡಿದೆ. ಅದೇ ರೀತಿಯಾಗಿ ಉತ್ತರ ಕರ್ನಾಟಕದಲ್ಲಿ ಸಂಚಾರಿ ಪೀಠವನ್ನು 2008 ರಲ್ಲಿ ...

ಆದಿಚುಂಚನಗಿರಿ ವಿವಿಯಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ: ಕುಲಸಚಿವ ಡಾ.ಸಿ.ಕೆ ಸುಬ್ಬರಾಯ

Image
ಆದಿಚುಂಚನಗಿರಿ ವಿವಿಯಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ: ಕುಲಸಚಿವ ಡಾ.ಸಿ.ಕೆ ಸುಬ್ಬರಾಯ ಬೆಂಗಳೂರು : ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ಕಾಲೇಜಿನಲ್ಲಿ ಎರಡು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ವಿವಿ ಕುಲಸಚಿವ ಡಾ.ಸಿ.ಕೆ ಸುಬ್ಬರಾಯ ಮಾಹಿತಿ ನೀಡಿದರು. ಗುರುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿ ಪರಮಪೂಜ್ಯ ಜಗದ್ಗುರು ನಿರ್ಮಲಾನಂದನಾಥ ಮಹಾ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಸಲಿದ್ದಾರೆ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಶಾಸಕ ಹಾಗೂ ಮಾಜಿ ಕೃಷಿ ಸಚಿವ ಚೆಲುವರಾಯಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಎಸ್.ಇ.ಆರ್.ಬಿ ನ್ಯಾಷನಲ್ ಸೈನ್ಸ್ ಅಧ್ಯಕ್ಷ ಹಾಗೂ ಐ.ಐ.ಎಸ್‌.ಇ.ಆರ್ ತಿರುವತಿಯ ನಿಕಟಪೂರ್ವ ನಿರ್ದೇಶಕ ಪ್ರೊ ಕೆ ಎನ್ ಗಣೇಶ್ ಉಪಸ್ಥಿತರಿರಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಯ ವಿಶ್ರಾಂತ ಕುಲಪತಿ ಹಾಗೂ ಎನ್ಎಎಸ್ಐ ಪೀಠದ ಪ್ರಾಧ್ಯಾಪಕ ಪ್ರೊ ಕೆ ಎಸ್ ರಂಗಪ್ಪ, ಜಪಾ...