Posts

ಅಟ್ಲಾಂಟಿಕ್ ಸಮುದ್ರ ಈಜಿ ದಾಖಲೆ ನಿರ್ಮಿಸಿದ ಅನನ್ಯ ಪ್ರಸಾದ್ ಗೆ ಅಭಿನಂದನೆ

Image
 ಅಟ್ಲಾಂಟಿಕ್ ಸಮುದ್ರ ಈಜಿ ದಾಖಲೆ ನಿರ್ಮಿಸಿದ ಅನನ್ಯ ಪ್ರಸಾದ್ ಗೆ ಅಭಿನಂದನೆ   ಬೆಂಗಳೂರು: 52ದಿನಗಳಲ್ಲಿ ಅಟ್ಲಾಂಟಿಕ್ ಸಮುದ್ರದ ಮೂರು ಸಾವಿರ ಕಿಲೋಮೀಟರ್ ಕ್ರಮಿಸಿದ ಅಪರೂಪದ ದಾಖಲೆ ನಿರ್ಮಿಸಿರುವ ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು ಕುಮಾರಿ ಅನನ್ಯ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭವನ್ನು ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮುಖ್ಯ ಆಯುಕ್ತರಾದ ಡಾ.ಪಿ.ಜಿ.ಆರ್.ಸಿಂದ್ಯಾ, ಸಹಾಯಕ ಆಯುಕ್ತ ಮೋಹನ್ ಕುಮಾರ್ ಕೊಂಡಜ್ಜಿ, ದೂರದರ್ಶನದ ನಿವೃತ್ತ ಸಹಾಯಕ ನಿರ್ದೇಶಕಿ ಡಾ.ನಿರ್ಮಲಾ ಸಿ.ಯಲಿಗಾರ್, ಸ್ಕೌಟ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಅನನ್ಯ ಪ್ರಸಾದ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪಿಜಿಆರ್ ಸಿಂದ್ಯಾ ಮಾತನಾಡಿ, ಅನನ್ಯ ಪ್ರಸಾದ್ ಅವರು ಕೇವಲ 52 ದಿನಗಳಲ್ಲಿ ಅಟ್ಲಾಂಟಿಕ್ ಸಮುದ್ರವನ್ನು ದಾಟಿ ಭಾರತಕ್ಕೆ ಕೀರ್ತಿ ತಂದಿದ್ದಾರೆ ಇಂತಹವರನ್ನು ಸನ್ಮಾನಿಸಿ ಅಭಿನಂದಿಸುತ್ತಿರುವುದು ಶ್ಲಾಘನೀಯ, ವಿಶೇಷವಾಗಿ ರಾಷ್ಟಕವಿ ಶಿವರುದ್ರಪ್ಪ ಅವರ ಮೊಮ್ಮಗಳಾಗಿ ಇಂತಹ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು. ನಿರ್ಮಲಾ ಸಿ.ಯಲಿಗಾರ್ ಮಾತನಾಡಿ, ಜಿ.ಎಸ್.ಶಿವರುದ್ರಪ್ಪ ನವರ ಸಾಹಿತ್ಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸಾಹಿತ್ಯವಾಗಿದೆ. ಅವರ ಕುಡಿ ಇಂತಹ...

ಉಪ್ಪಾರ ಸಮಾಜದ ಏಕೈಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು: ಸುನೀಲ್ ಕುಮಾರ್ ಎನ್...

Image
 ಉಪ್ಪಾರ ಸಮಾಜದ ಏಕೈಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು: ಸುನೀಲ್ ಕುಮಾರ್ ಎನ್... ಬೆಂಗಳೂರು: ಉಪ್ಪಾರ ಸಮಾಜದ ಏಕೈಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಾಗಿದ್ದಾರೆ. ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಬೆಂಗಳೂರು ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮತ್ತು ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಎನ್ ಒತ್ತಾಯಿಸಿದರು. ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಆಯ್ಕೆಯಾಗಿರುವ ಹಿರಿಯ ಜನನಾಯಕ ಹಾಗೂ ಮುಖಂಡ ಪುಟ್ಟರಂಗಶೆಟ್ಟಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದ ಪ್ರಮುಖ ಸಮುದಾಯವಾದ ಉಪ್ಪಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಅವರು ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರೂ ಕೂಡ ಆಗಿದ್ದು, ಇದನ್ನು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಪರಿಗಣಿಸಬೇಕು ಎಂದು ಆಗ್ರಹಿಸಿದರು. ಶಾಸಕ ಪುಟ್ಟರಂಗಶೆಟ್ಟಿ ದೀರ್ಘಕಾಲದಿಂದ ಜನಸೇವೆ, ಪಕ್ಷ ಸಂಘಟನೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಜನರಿಂದ ಆಶೀರ್ವಾದ ಪಡೆದಿರುವುದು ಅವರ ಅಪಾರ ಜನಸೇವೆಗೆ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಡೀ ಹಿಂದುಳಿದ ವರ್ಗದ ನಾಯಕರಾಗಿ ಸಮಾಜದ ಪರವಾಗಿ ಸದಾ ಧ್ವನಿಯಾಗಿದ್ದಾರೆ. ಅವರಿಗೆ ಸಚಿವ ...

ತಿಪಟೂರು ಕ್ಷೇತ್ರದ ಶಾಸಕ ಕೆ. ಷಡಕ್ಷರಿಯವರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡವಂತೆ ಒತ್ತಾಯ.

Image
 ತಿಪಟೂರು ಕ್ಷೇತ್ರದ ಶಾಸಕ ಕೆ. ಷಡಕ್ಷರಿಯವರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡವಂತೆ ಒತ್ತಾಯ.   ಬೆಂಗಳೂರು ಮೇ 30;   ರಾಜ್ಯದಲ್ಲಿ ನಡೆದ 2030 ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ 39 ಶಾಸಕರ ವೀರಶೈವ ಲಿಂಗಾಯತ ಸಮಾಜ ಆಯ್ಕೆ ಮಾಡಿ ಕಳಿಸಿದ್ದು, ನೊಳಂಬ ಲಿಂಗಾಯತ ಸಮುದಾಯಕ್ಕೆ ಸೇರಿದ ಕೆ.ಷಡಕ್ಷರಿಯವರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕೆಂದು ನೊಳಂಬ ಲಿಂಗಾಯತ ಸಂಘ ಒತ್ತಾಯಿಸಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಗೌರವ ಕಾರ್ಯದರ್ಶಿ ಕೆ.ಬಿ.ಶಶಿಧರ್ ಕಾಮನಕೆರೆ,ಸಂಘದ ಅಧ್ಯಕ್ಷ  ಬಿಳಿಗೆರೆ ಕೆ.ಚಂದ್ರಶೇಖರ್, ಕಲ್ಪತರು ನಾಡು ತಿಪಟೂರು ಕ್ಷೇತ್ರದಿಂದ 4 ಬಾರಿ ಷಡಕ್ಷರಿಯವರು ಜಯಬೇರಿ ಬಾರಿಸಿದ್ದು ದಕ್ಷ ಹಾಗೂ ಪ್ರಮಾಣಿಕವಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಉತ್ತಮ  ಸಹಕಾರಿಗಳಾಗಿದ್ದಾರೆ, ರಾಜ್ಯದ ಭೂ ಅಭಿವೃದ್ಧಿ ಬ್ಯಾಂಕಿಗೆ 2 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜದ ಪ್ರಮುಖ ನಾಯಕರಾಗಿದ್ದಾರೆ, ಆದ್ದರಿಂದ ಅವರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡುವುದರ ಮೂಲಕ ಅವರ ಸೇವೆಯನ್ನು ರಾಜ್ಯದ ಉದ್ದಗಲಕ್ಕೂ ಬಳಸಿಕೊಳ್ಳಬೇಕು,ಕ್ಯಾಬಿನೆಟ್ ದರ್ಜೆಯ ಮಂತ್ರಿಯನ್ನಾಗಿ ಮಾಡಬೇಕು ಎಂದರು.  ಈ ಹಿಂದೆ ಈ ಕ್ಷೇತ್ರದ ಶಾಸಕರಾಗಿದ್ದ ನೊಳಂಬ  ಸಮಾಜದ ಟಿ. ಹೆಚ್. ಮಂಜುನಾಥ್‌ ಅವ...

ಪರಮೇಶ್ವರ್ ಸಿಎಂ ಮಾಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯ

Image
 ಪರಮೇಶ್ವರ್ ಸಿಎಂ ಮಾಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯ ಬೆಂಗಳೂರು: ದಲಿತ ಸಮುದಾಯಕ್ಕೆ ಸೇರಿದ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಿರಿಯರೊಬ್ಬರಿಗೆ ಇದೀಗ ಮುಖ್ಯಮಂತ್ರಿ ಪಟ್ಟ ನೀಡಬೇಕು ಇಲ್ಲವಾದರೆ ದಲಿತ ಸಂಘಟನೆಗಳ ವತಿಯಿಂದ ಭಾರಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಾಗುವುದು ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ  ಸುರೇಶ್ ರಾಜ್, ಸ್ವತಂತ್ರ ಭಾರತಕ್ಕೆ 80 ವರ್ಷ ತುಂಬುತ್ತಿದೆ. ಆಳುವ ಪಕ್ಷಗಳು ದಲಿತ ಜನಾಂಗಗಳನ್ನು ಇಂದಿಗೂ ತಮ್ಮ ಅಡಿಯಾಳುಗಳಂತೆ ಅತಂತ್ರ ಸ್ಥಿತಿಯಲ್ಲೇ ನಡೆಸಿಕೊಳ್ಳುತ್ತಿರುವ ದಲಿತ ದ್ರೋಹದ ನಡೆಯನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವು ಇದಕ್ಕೆ ಹೊರತಾಗಿಲ್ಲ ಎನ್ನುವುದಕ್ಕೆ ಇದೀಗ ರಾಜ್ಯದಲ್ಲಿ ಉದ್ಭವವಾಗಿರುವ ರಾಜಕೀಯ ಬೆಳವಣಿಗೆಯಾಗಿದೆ, ಪ್ರಸ್ತುತ ರಾಜಕೀಯ ಬಿಕ್ಕಟ್ಟಿನಲ್ಲಿ ದಲಿತ ಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಾದರೂ ದಲಿತರೊಬ್ಬರನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಮಾಡಲಾಗಲಿಲ್ಲವೆಂದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಯಾವ ಮುಖವನ್ನು ತೋರಿಸಿ ದಲಿತರ ಮತಗಳನ್ನು ಯಾಚಿಸಬೇಕು ಎನ್ನುವುದನ್ನು ಯೋಚಿಸಬೇಕು ಎಂದು ಹೇಳಿದರು. ಸಿದ್ದರಾ...

Bengaluru Gets World-Class Cancer Care Hub with Advanced MR-Linac Technology

Image
  Bengaluru Gets World-Class Cancer Care Hub with Advanced MR-Linac Technology HealthCare Global Enterprises (HCG)  has launched a new comprehensive cancer hospital at Hebbal in north Bengaluru, expanding access to advanced oncology care in the region. The facility, spread across 1.75 lakh sq. ft. with a capacity of up to 132 beds, brings together diagnosis, treatment and recovery services under one roof. A key highlight of the hospital is the introduction of Karnataka’s first Elekta Unity MR-Linac, an advanced radiation therapy system that combines MRI imaging with a linear accelerator. The technology enables real-time imaging of tumours during treatment, allowing doctors to deliver highly precise and adaptive radiation therapy while minimising damage to surrounding healthy tissue. The hospital was  inaugurated by Sandalwood actor and director Kichcha Sudeep,  who stressed the importance of timely diagnosis, awareness and access to advanced treatment facilities for ...

ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ತೆರೆದ ಲುಲು ಗ್ರೂಪ್ ಇಂಡಿಯಾ

Image
 ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ತೆರೆದ ಲುಲು ಗ್ರೂಪ್ ಇಂಡಿಯಾ ಬೆಂಗಳೂರು: ಲುಲು ಗ್ರೂಪ್ ಇಂಡಿಯಾ ಭಾನುವಾರ ಬೆಂಗಳೂರಿನ ತನ್ನ 6 ನೇ ಹೈಪರ್ ಮಾರ್ಕೆಟ್ ಮತ್ತು ಭಾರತದ 18ನೇ ಸ್ಟೋರ್ ಅನ್ನು ಉದ್ಘಾಟಿಸಿದೆ. ಹಳೆ ಮದ್ರಾಸ್ ರಸ್ತೆಯ ಸಿ ವಿ ರಾಮನ್ ನಗರದಲ್ಲಿರುವ ನಾಗವಾರ ಪಾಳ್ಯದ ಗೋಪಾಲನ್ ಗ್ರಾಂಡ್ ಮಾಲ್ ನಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿದೆ. ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲೂ ವಿಶ್ವದರ್ಜೆಯ ಹೈಪರ್ ಮಾರ್ಕೆಟ್ ರಿಟೇಲ್ ಸ್ಟೋರ್ ಅನ್ನು ತಲುಪಿಸುವ ಲುಲು ಬ್ರಾಂಡ್ ಪರಂಪರೆಯನ್ನು ಇದು ಮುಂದುವರಿಸಲಿದೆ. ನಗರದಲ್ಲಿ ಅಸ್ತಿತ್ವದಲ್ಲಿರುವ 5 ಸ್ಟೋರ್ ಗಳ ಯಶಸ್ಸು ಮತ್ತು ಬೆಂಗಳೂರಿನ ಗ್ರಾಹಕರಿಂದ ಸತತವಾಗಿ ಸಿಗುತ್ತಿರುವ ಪ್ರೋತ್ಸಾಹದ ಆಧಾರದ ಮೇಲೆ ಲುಲು ಗ್ರೂಪ್ ಇಂಡಿಯಾ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇನ್ನು ಈ ಹೊಸ ಹೈಪರ್ ಮಾರ್ಕೆಟ್ 58,516 ಚದರ ಅಡಿ ಇದ್ದು, 200 ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಸ್ಟೋರ್ ನಿಂದ 1,000 ಕ್ಕೂ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಕೂಡ ಸೃಷ್ಟಿಯಾಗಲಿದೆ. ಈ ಸಂದರ್ಭದಲ್ಲಿ ಲುಲು ಸಮೂಹದ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಯೂಸುಫ್ ಮಾತನಾಡಿ ಹೊಸ ಸ್ಟೋರ್ ಅನ್ನು ಹಳೆ ಮದ್ರಾಸ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮುದಾಯಕ್ಕ...

बेंगलुरु में LuLu Hypermarket की नई पहचान, 58 हजार वर्ग फुट में खुला मेगा स्टोर

Image
 बेंगलुरु में LuLu Hypermarket की नई पहचान, 58 हजार वर्ग फुट में खुला मेगा स्टोर LuLu Group International ने रविवार को बेंगलुरु में अपने छठे और देश में 18वें हाइपरमार्केट का उद्घाटन Gopalan Grand Mall, ओल्ड मद्रास रोड, सी.वी. रमन नगर में किया। इसके साथ ही कंपनी ने देश के तेजी से विकसित हो रहे रिटेल बाजारों में अपनी मौजूदगी और मजबूत की है। 58,516 वर्ग फुट में फैला नया LuLu Hypermarket आधुनिक रिटेल सुविधा के रूप में विकसित किया गया है, जहां ग्राहकों को दैनिक जरूरतों का सामान एक ही छत के नीचे उपलब्ध होगा। परिसर में 200 से अधिक वाहनों के लिए पार्किंग की सुविधा भी दी गई है। कंपनी के अनुसार, इस नए स्टोर से क्षेत्र में 1,000 से अधिक प्रत्यक्ष और अप्रत्यक्ष रोजगार के अवसर उत्पन्न होने की उम्मीद है। बेंगलुरु में पहले से संचालित पांच स्टोर्स को मिले सकारात्मक प्रतिसाद के बाद यह विस्तार किया गया है। उद्घाटन समारोह में Yusuff Ali M. A. ने कहा कि इस स्टोर की योजना ओल्ड मद्रास रोड और आसपास के क्षेत्रों की विविध आबादी की जरूरतों को ध्यान में रखकर तैयार की गई है। उन्होंने कहा कि ग्राहकों को अंतररा...