ಕರ್ನಾಟಕದಲ್ಲಿ ಶಿಕ್ಷಣ ಸಬಲೀಕರಣ ಉಪಕ್ರಮ, ಈಝಿ ಆಕ್ಸೆಸ್ ಸರ್ವೀಸಸ್ ವತಿಯಿಂದ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ
ಕರ್ನಾಟಕದಲ್ಲಿ ಶಿಕ್ಷಣ ಸಬಲೀಕರಣ ಉಪಕ್ರಮ, ಈಝಿ ಆಕ್ಸೆಸ್ ಸರ್ವೀಸಸ್ ವತಿಯಿಂದ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ ಭಾರತೀಯ ಆಡಳಿತ ಒಕ್ಕೂಟ(ಜಿಎಫ್ಐ)ದ ಸಹಯೋಗದೊಂದಿಗೆ ಈಝಿ ಆಕ್ಸೆಸ್ ಸರ್ವೀಸಸ್ ಸಂಸ್ಥೆಯು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ), ಎಪಿಎಎಆರ್ ಮತ್ತು ಹೊಸ ಡಿಜಿಟಲ್ ಶಿಕ್ಷಣ ಸುಧಾರಣೆಗಳ ಕುರಿತು ರಾಜ್ಯಾದ್ಯಂತ ಸಾರ್ವಜನಿಕ ಜಾಗೃತಿ ಉಪಕ್ರಮದ ನೇತೃತ್ವ ವಹಿಸಲಿವೆ ಎಂದು ತಿಳಿಸಿದ್ದಾರೆ. ಬೆಂಗಳೂರು, ಜುಲೈ 3, 2026 : ಈಝಿ ಆಕ್ಸೆಸ್ ಸರ್ವೀಸಸ್ ಕರ್ನಾಟಕದ ಎಲ್ಲೆಡೆ ಶಿಕ್ಷಣ ಜಾಗೃತಿ ಅಭಿಯಾನ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ರಾಜ್ಯಮಟ್ಟದ ಪತ್ರಿಕಾಗೋಷ್ಠಿಯೊಂದಿಗೆ ಈ ಅಭಿಯಾನ ಅಧಿಕೃತವಾಗಿ ಪ್ರಾರಂಭವಾಗಿದ್ದು. ಮಾಧ್ಯಮ ಸಂಸ್ಥೆಗಳು, ಶಿಕ್ಷಣ ವೃತ್ತಿಪರರು, ಶೈಕ್ಷಣಿಕ ಸಂಸ್ಥೆಗಳು. ಸಾಮಾಜಿಕ ಸಂಸ್ಥೆಗಳು, ನೀತಿ ತಜ್ಞರು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಡಿಜಿಟಲ್ ಶಿಕ್ಷಣ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸುಧಾರಣೆಗಳ ಭವಿಷ್ಯ ಕುರಿತು ಈ ಅಭಿಯಾನ ಚರ್ಚಿಸಲಿದ್ದು, ಪ್ರಮುಖ ಶೈಕ್ಷಣಿಕ ಸುಧಾರಣೆಗಳು ಮತ್ತು ಭಾರತ ಸರ್ಕಾರದ ಉಪಕ್ರಮಗಳ ಬಗ್ಗೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿರುವವರಲ್ಲಿ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸುವುದು ಈ ಉ...