Posts

1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ

Image
1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ 1,000 ಮಕ್ಕಳ ಕಾಂಡಕೋಶ ಕಸಿ ಮೈಲಿಗಲ್ಲು ಸಾಧನೆ; ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ವಿಶೇಷ ಆಚರಣೆ ಬೆಂಗಳೂರು, ಸೆಪ್ಟೆಂಬರ್ 4, 2026: ತಲಸೇಮಿಯಾ ಸೇರಿದಂತೆ ತೀವ್ರ ಅನುವಂಶಿಕ ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್ 1,000 ಮಕ್ಕಳಿಗೆ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ (ಕಾಂಡಕೋಶ ಕಸಿ) ಯಶಸ್ವಿಯಾಗಿ ನೆರವೇರಿಸಿದ್ದು, ಸಾವಿರಾರು ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಈ ಸಾಧನೆಯನ್ನು “1,000 ಹೊಸ ಆರಂಭಗಳು” ಎಂಬ ಪರಿಕಲ್ಪನೆಯಡಿ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆ DKMS ಹಾಗೂ ವೈದ್ಯಕೀಯ ಮತ್ತು ಜ್ಞಾನ ಪಾಲುದಾರ ಸಂಸ್ಥೆ ಕ್ಯೂರ್2ಚಿಲ್ಡ್ರನ್ ಫೌಂಡೇಶನ್ ನಡುವಿನ ದಶಕಕ್ಕೂ ಅಧಿಕ ಕಾಲದ ಸಹಭಾಗಿತ್ವದ ಪ್ರಮುಖ ಸಾಧನೆಯಾಗಿ ಈ ಮೈಲಿಗಲ್ಲು ಗುರುತಿಸಿಕೊಂಡಿದೆ. ತೀವ್ರ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ರಕ್ತಪೂರಣ ಮತ್ತು ದೀರ್ಘಕಾಲದ ಚಿಕಿತ್ಸೆಯ ಅವಲಂಬನೆಯಿಂದ ಹೊರಬಂದು ಆರೋಗ್ಯಕರ ಜೀವನ ನಡೆಸುವ ಅವಕಾಶವನ್ನು ಈ ಟ್ರಾನ್ಸ್‌ಪ್ಲಾಂಟೇಶನ್ ಕಾರ್ಯಕ್ರಮ ಒದಗಿಸುತ್ತಿದೆ. 820ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸೆಗೆ DK...

ಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ, ಪ್ರಾಮಾಣಿಕವಾಗಿ ಆಯ್ಕೆಯಾದ ಪಶುವೈದ್ಯಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಮನವಿ*

Image
 *ಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ, ಪ್ರಾಮಾಣಿಕವಾಗಿ ಆಯ್ಕೆಯಾದ ಪಶುವೈದ್ಯಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಮನವಿ* ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಸಮಿತಿ ವತಿಯಿಂದ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು. ಡಾ||ಹನುಂತಪ್ಪ ಕಳಾಸಪುರ, ಡಾ.ಗುರುಬಸವರಾಜ್, ಡಾ.ಪೂಜ್.ಹೆಚ್., ಡಾ.ಅವಿನಾಶ್ ಬಿರಡಿ, ಡಾ.ಸುನೀಲ್,ಡಾ.ಚಾಂದಿನಿ.ಎನ್.ಡಾ.ಶ್ರೀಶೈಲ್, ಡಾ.ತನ್ವಿತ್, ಡಾ.ಪ್ರಿಯಾಂಕ, ಡಾ.ವಿಕಾಸ್ ರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ||ಹನುಮಂತಪ್ಪ ಕಳಸಾಪುರರವರು ಮಾತನಾಡಿ ರಾಜ್ಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಸೇವೆಗಳು ಅತ್ಯಂತ ಅಗತ್ಯ ಸೇವೆಗಳು ಆಗಿದೆ. ಇತ್ತಿಚೇಗೆ 329 ಪಶುವೈದ್ಯಾಧಿಕಾರಿ ಪೈಕಿ 29ಪಶುವೈದ್ಯಾಧಿಕಾರಿ ಮೇಲೆ ಪರೀಕ್ಷೆಯಲ್ಲಿ ವಂಚನೆ, ಕಾಪಿ ಮಾಡಿ ಆಯ್ಕೆಯಾಗಿದ್ದಾರೆ ಎಂದು ಸಿಐಡಿ ಎಫ್.ಐ.ಆರ್.ದಾಖಲಿಸಿದ್ದಾರೆ. ಸುಪ್ರಿಂಕೋರ್ಟ್ ನಲ್ಲಿ ಹಲವಾರು ಪ್ರಕರಣದಲ್ಲಿ ಕಳಂಕಿತರ ಮೇಲೆ ಕ್ರಮ ಮತ್ತು ಪ್ರಾಮಾಣಿಕ ಪಾಸಾದ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿ ಎಂದು ತೀರ್ಪು ನೀಡಿದ್ದಾರೆ ಅದೇ ಮಾದರಿಯಲ್ಲಿ ಇಲ್ಲಿ ಕ್ರಮ ಕೈಗೊಳ್ಳಿ ಕಳಂಕಿತರ ಮೇಲೆ ಕ್ರಮ ನಮಗೆ ನೇಮಕಾತಿ ಆದೇಶ ಪತ್ರ ನೀಡಿ. ಸಿಐಡಿ ಕಛೇರಿ ನಮ್ಮನ್ನ ಕರೆದರೆ ಹೋಗುತ್ತೇವೆ ನಮಗೆ ಯಾವುದೇ ಆಳುಕಿಲ್ಲ, ಭಯವಿಲ್ಲ. ನಾವು ತನಿಖೆಯನ್ನ ವಿರೋಧಿಸುವುದಿಲ್ಲ. ವಿನಾ...

ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಎಸ್‌ಐಆರ್ ಹಂತ-2 ತರಬೇತಿ ಶಿಬಿರ

Image
 ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಎಸ್‌ಐಆರ್ ಹಂತ-2 ತರಬೇತಿ ಶಿಬಿರ     ಆಗಸ್ಟ್ 28  : ಜಯನಗರ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಹಂತ-2 ರ ತರಬೇತಿ ಶಿಬಿರವನ್ನು ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಬಿಎಲ್‌ಒ, ಬಿಎಲ್‌ಒ ಮೇಲ್ವಿಚಾರಕರು, ಎಇಆರ್‌ಒ ಹಾಗೂ ಇಆರ್‌ಒ ಅಧಿಕಾರಿಗಳು ಭಾಗವಹಿಸಿದ್ದರು.  ಸೌತ್ ಸಿಟಿ ಕಾರ್ಪೊರೇಷನ್‌ನ ಎಲೆಕ್ಷನ್ ತಹಶೀಲ್ದಾರ್ ರಶ್ಮಿ, ಕಂದಾಯಾಧಿಕಾರಿ ಈಶ್ವರ್ ಎಸ್ ರಾಯುಡು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಈ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅಗತ್ಯ ಮಾರ್ಗದರ್ಶನಗಳನ್ನು ನೀಡಿದರು.  ಹೊಸ ಮತದಾರರನ್ನು ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಸೇರ್ಪಡೆಯಾಗದಂತೆ ತಡೆದು ಸರಿಯಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ನಮ್ಮ ಉದ್ದೇಶವಾಗಿದೆ,ಪ್ರತಿಯೊಬ್ಬ ವಿದ್ಯಾರ್ಥಿ,ವಯೋಮಿತಿ ಅರ್ಹ ಹೊಂದಿರುವವರು ಮತದಾನದಾನದಿಂದ ದೂರ ಉಳಿಯದಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುನೀಲ್ ಕುಮಾರಿ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಹೇಮಲತಾ,ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು, ನೌಕರರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ಉತ್ತರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಿ: ಮಾನ್ವಿ ಗ್ರೋತ್ ಸೆಂಟರ್ ಕೈಗಾರಿಕಾ ಸಂಘದ ಆಗ್ರಹ

Image
 ಉತ್ತರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಿ: ಮಾನ್ವಿ ಗ್ರೋತ್ ಸೆಂಟರ್ ಕೈಗಾರಿಕಾ ಸಂಘದ ಆಗ್ರಹ ಬೆಂಗಳೂರು, ಆ.27: ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಸರ್ಕಾರ ಮುಂದಾಗಬೇಕು ಎಂದು ಮಾನ್ವಿ ಗ್ರೋತ್ ಸೆಂಟರ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಆಗ್ರಹಿಸಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಕೈಗಾರಿಕಾ ಪ್ರದೇಶಗಳಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಸರ್ಕಾರಕ್ಕೆ ತೆರಿಗೆ ಆದಾಯ ಹೆಚ್ಚಿಸುವಲ್ಲಿ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಆದರೆ ಕೈಗಾರಿಕೆಗಳಿಗೆ ಸಂಬಂಧಿಸಿದ ಭೂಮಿ ದರ, ಬ್ಯಾಂಕ್ ಸಾಲ, ಮೂಲಸೌಕರ್ಯ ಹಾಗೂ ಸರ್ಕಾರದ ತೆರಿಗೆ ಸೇರಿದಂತೆ ಹಲವು ಸಮಸ್ಯೆಗಳಿಂದ ಉದ್ಯಮಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು. ಮಾನ್ವಿ ಗ್ರೋತ್ ಸೆಂಟರ್‌ನಲ್ಲಿ ಸುಮಾರು 10 ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ₹20 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದ್ದು, ಸುಮಾರು 50 ಸಣ್ಣ ಕೈಗಾರಿಕೆಗಳು ಮತ್ತು ವರ್ಕ್‌ಶಾಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಭೂಮಿ → ಕೈಗಾರಿಕೆ → ಉದ್ಯೋಗ → ತೆರಿಗೆ → ಸಂಪತ್ತು ಸೃಷ್ಟಿಯ ಸರಪಳಿ ನಿರ್ಮಾಣವಾಗುತ್ತಿದೆ. ಹೀಗಾಗಿ ಈಗಾಗಲೇ ಹೂಡಿಕೆ ಮಾಡಿರುವ ಉದ್ಯಮಿಗಳ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯವಿದೆ...

NHCE to Host 48-Hour International Hackathon ‘Smart Horizon 2026’

Image
  NHCE to Host 48-Hour International Hackathon ‘Smart Horizon 2026’ Bengaluru : New Horizon College of Engineering (NHCE) will host Smart Horizon 2026, a 48-hour international hackathon, from September 3 to 5 as part of its Silver Jubilee Year celebrations. The event is being jointly organised by the Department of Artificial Intelligence and Machine Learning (AIML) and the Department of Computer Science and Engineering (CSE). The hackathon is designed to promote innovation, interdisciplinary problem-solving, entrepreneurship and stronger collaboration between academia, industry and government. It is also aligned with the vision of Viksit Bharat@2047, encouraging students to develop technology-driven solutions to real-world challenges. Smart Horizon 2026 has attracted a strong response, with 287 teams registering initially and 118 teams qualifying for the Grand Finale. The finalist teams represent 62 institutions across 11 Indian states, along with participation from the United Stat...

ಗಣೇಶ ಹಬ್ಬದ ಮುನ್ನ ಗಣೇಶ್ ದೇವಸ್ಥಾನದ ಗೋಪುರ ತೆರವು — ಮೇಣದಬತ್ತಿ ಪ್ರತಿಭಟನೆ

Image
ಗಣೇಶ ಹಬ್ಬದ ಮುನ್ನ ಗಣೇಶ್ ದೇವಸ್ಥಾನದ ಗೋಪುರ ತೆರವು — ಮೇಣದಬತ್ತಿ ಪ್ರತಿಭಟನೆ ನೋಟಿಸ್ ನೀಡದೇ ತೆರವುಗೊಳಿಸಿದ ಆರೋಪದ ವಿರುದ್ಧ ಆಕ್ರೋಶ: ಡಾ. ಎಸ್. ಸಂಗಮೇಶ್ ಬೆಂಗಳೂರು, ಆಗಸ್ಟ್ 22: ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ AECS Layoutನ ಗಣೇಶ್ ದೇವಸ್ಥಾನದ ಗೋಪುರವನ್ನು ಮುಂಚಿತ ನೋಟಿಸ್ ನೀಡದೇ ತೆರವುಗೊಳಿಸಲಾಗಿದೆ ಎಂಬ ಆರೋಪದ ವಿರುದ್ಧ ಕರ್ನಾಟಕ ರಾಜ್ಯ ಯುವ ಸಮೂಹದ ವತಿಯಿಂದ ಮೇಣದಬತ್ತಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಹಲವಾರು ಸ್ಥಳೀಯರು ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾರ್ವಜನಿಕರು ಭಾಗವಹಿಸಿ, ದೇವಸ್ಥಾನ ತೆರವು ಕಾರ್ಯಾಚರಣೆಯ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನುಬದ್ಧ ಪ್ರಕ್ರಿಯೆ ಪಾಲಿಸಬೇಕು ಮತ್ತು ಪ್ರಕರಣದ ಸತ್ಯಾಂಶವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್, ದೇವಸ್ಥಾನವು ಸರ್ಕಾರಿ ಅಥವಾ BDA ಜಾಗದಲ್ಲಿದ್ದು ಅತಿಕ್ರಮಣವಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ನ್ಯಾಯಾಲಯದ ಆದೇಶಕ್ಕೂ ಸಂಪೂರ್ಣ ಗೌರವವಿದೆ. ಆದರೆ, ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೇ ತೆರವು ಕಾರ್ಯಾಚರಣೆ ನಡೆಸಿರುವುದಾದರೆ ಅದನ್ನು ಪ್ರಶ್ನಿಸುವುದು ನಮ್ಮ ಹಕ್ಕು ಎಂದು ಅವರು ಹೇಳಿದರು. “ದೇವಸ್ಥಾನಕ್ಕೆ ನೋಟಿಸ್ ನೀಡಲಾಗಿತ್ತೇ?” “...

ಬೆಂಗಳೂರಿನ ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026: ದಾಖಲೆಯ 1,093 ಸ್ಪರ್ಧಿಗಳೊಂದಿಗೆ ಹೊಸ ಮೈಲಿಗಲ್ಲು

Image
 ಬೆಂಗಳೂರಿನ ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026: ದಾಖಲೆಯ 1,093 ಸ್ಪರ್ಧಿಗಳೊಂದಿಗೆ ಹೊಸ ಮೈಲಿಗಲ್ಲು ಬೆಂಗಳೂರು, ಕರ್ನಾಟಕ – ಆಗಸ್ಟ್ 16, 2026 ಬೆಂಗಳೂರಿನ ನೆಕ್ಸಸ್ ಕೊರಮಂಗಲ ಮಾಲ್‌ನಲ್ಲಿ ಸಜ್ಜನ್ ಅಕಾಡೆಮಿ ಆಯೋಜಿಸಿದ್ದ “ಬೆಂಗಳೂರು ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026” ಭರ್ಜರಿ ಯಶಸ್ಸು ಕಂಡಿದ್ದು, ಒಟ್ಟು 1,093 ಸ್ಪರ್ಧಿಗಳು ಭಾಗವಹಿಸುವ ಮೂಲಕ ಕರ್ನಾಟಕದ ಚೆಸ್ ಟೂರ್ನಮೆಂಟ್ ಇತಿಹಾಸದಲ್ಲೇ ಅತಿ ಹೆಚ್ಚು ಭಾಗವಹಿಸುವಿಕೆಯ ದಾಖಲೆಯನ್ನು ನಿರ್ಮಿಸಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ದೇಶದ ಹಲವು ರಾಜ್ಯಗಳಿಂದ ಚೆಸ್ ಆಟಗಾರರು ಆಗಮಿಸಿ ಈ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದರು. ಆರಂಭಿಕ ಹಂತದ ಆಟಗಾರರಿಂದ ಹಿಡಿದು ರೇಟೆಡ್ ಆಟಗಾರರು, ರಾಜ್ಯ ಚಾಂಪಿಯನ್‌ಗಳು, ರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಹಾಗೂ ಅಂತರರಾಷ್ಟ್ರೀಯ ರೇಟಿಂಗ್ ಹೊಂದಿರುವ ಆಟಗಾರರು ಕೂಡ ಪಾಲ್ಗೊಂಡಿದ್ದು, ಟೂರ್ನಮೆಂಟ್‌ಗೆ ಹೆಚ್ಚಿನ ಸ್ಪರ್ಧಾತ್ಮಕತೆ ಮತ್ತು ಉತ್ಸಾಹವನ್ನು ತಂದಿತು. ಟೂರ್ನಮೆಂಟ್‌ನಲ್ಲಿ ಒಟ್ಟು ₹4 ಲಕ್ಷ ನಗದು ಬಹುಮಾನ ವಿತರಿಸಲಾಯಿತು. ವಿಶೇಷವಾಗಿ ವಿವಿಧ ವಯೋಮಿತಿ ಹಾಗೂ ಸಾಧನಾ ವಿಭಾಗಗಳಲ್ಲಿ ಬಹುಮಾನಗಳನ್ನು ನೀಡುವ ಮೂಲಕ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಪ್ರೋತ್ಸಾಹಿಸಲಾಯಿತು. ನೂರಾರು ಆಟಗಾರರನ್ನು ಅವರ ಸಾಧನೆಗಾಗಿ ಗುರುತಿಸಿ ಗೌರವಿಸಲಾಯಿತು. ಈ ಪಂದ್ಯಾವಳಿಯನ್ನು AICF, KSCA ಮತ...