Posts

Showing posts from July, 2026

ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮಾಡಿದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಟಿ. ಕೋನಪ್ಪರೆಡ್ಡಿ

Image
  ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮಾಡಿದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಟಿ. ಕೋನಪ್ಪರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ "ರಾಜ್ಯ ಒಕ್ಕಲಿಗರ ಸಂಘದ ಟಿ. ಕೋನಪ್ಪರೆಡ್ಡಿ"! 01, ಜುಲೈ, 2026, ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಬೆಂಗಳೂರು: ಇಂದು ಬೆಂಗಳೂರು ನಗರದ ಪ್ರೆಸ್ ಕ್ಲಬ್ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಟಿ. ಕೋನಪ್ಪರೆಡ್ಡಿ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದ ಪಧಾಧಿಕಾರಿಗಳು ದಿನಾಂಕ:25.06.2026 ರಂದು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪ ಶುದ್ಧ ಸುಳ್ಳು ಎಂದು ಹೇಳಿ, ಸ್ಪಷ್ಟಿಕರಣ ನೀಡಲು ಮಾಧ್ಯಮಗಳಿಗೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಸುಮಾರು 18 ವಿಚಾರಗಳಿಗೆ ಸವಿಸ್ತಾರವಾಗಿ ಉತ್ತರಿಸಿದ ರೆಡ್ಡಿಯವರು, ನಿಮಗೆ ನಾನು ಈಗ ಉತ್ತರಿಸಿದ ವಿಚಾರಗಳಿಗಷ್ಟೇ ದಾಖಲೆಗಳನ್ನು ನೀಡಿದ್ದೇನೆ, ನನ್ನ ಬಳಿ ಇನ್ನೂ ಅನೇಕ ವಿಚಾರಗಳಿಗೆ ಸಂಬಂಧಿಸಿದ ಪಾತ್ರಗಳು, ಸಾಕ್ಷಿಗಳು ಮತ್ತು ದಾಖಲೆಗಳಿವೆ ಎಂದು ಹೇಳಿದರು. ಮುಂದುವರಿದಂತೆ, ಸಂಘದಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಲೇ ಇವೆ. ಕೆಲವರು ತಮ್ಮ ಮಕ್ಕಳ ಖಾತೆಗೆ ದುಡ್ಡನ್ನು ಫೋನ್ ಪೇ ಮಾಡಿಸಿಕೊಂಡಿರುತ್ತಾರೆ, ನಾನು ಹಿರಿಯ ನಾಗರೀಕನಾದ ಕಾರಣ, ನನಗೆ ಜೀವನ ತಿಳಿದಿದೆ, ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಇಚ್ಚಿಸುವುದಿಲ್ಲ, ಹಾಗಾಗಿ ಆ ಚೇರ್ಮನ್ ಯಾರು ಮತ್ತು ಆತನ ಮಕ್ಕಳ ಹೆಸರೇನು ಎಂದು ಹೇಳುವುದಿಲ್ಲ ಎಂದರು. ಮುಂದುವರ...