ಸುಮಂಗಲಿ ಸೇವ ಆಶ್ರಮದ 50 ವರ್ಷದ ಪಯಣದ ಸಂಕ್ಷಿಪ್ತ ಮಾಹಿ

 ಸುಮಂಗಲಿ ಸೇವ ಆಶ್ರಮದ 50 ವರ್ಷದ ಪಯಣದ ಸಂಕ್ಷಿಪ್ತ ಮಾಹಿ



ತಾವು ಸುಮಂಗಲಿ ಸೇವ ಆಶ್ರಮದ 50ನೇ ಸಂಭ್ರಮ" ದ ಉದ್ಘಾಟನೆಗೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಅಪಾರ ವರ್ಷದಾಚರಣೆ "ಸುವರ್ಣ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಸುಮಂಗಲಿ ಸೇವ ಆಶ್ರಮದ ಸಂಕ್ಷಿಪ್ತ ಮಾಹಿತಿಯನ್ನು ಸಲ್ಲಿಸುತ್ತಿದ್ದೇವೆ.

ಬೆಂಗಳೂರು ನಗರದ ಹೆಬ್ಬಾಳದ ಹತ್ತಿರದ ಚೋಳನಾಯಕನ ಹಳ್ಳಿಯಲ್ಲಿರುವ “ಸುಮಂಗಲಿ ಸೇವ ಆಶ್ರಮ " ದಿನಾಂಕ 16-10-1975 ರಲ್ಲಿ ಆರಂಭವಾಗಿತ್ತು. ಈ ಸಂಸ್ಥೆಯು ಮಹಿಳೆಯರು, ಮಕ್ಕಳು ಹಿರಿಯ ನಾಗರೀಕರು ದುರ್ಬಲರು ಅಸಹಾಯಕರ ಆಶ್ರಯ ತಾಣವಾಗಿದೆ. ఇల్ల ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಸಾಹಿತ್ಯಕ ಕಾರ್ಯಗಳಿಗೆ ಎಲ್ಲರ ಉನ್ನತಿಗಾಗಿ ಆಧ್ಯಾತ್ಮಿಕ ಕೈಂಕರ್ಯಗಳು ಚಿಂತನೆಗಳು ಸದಾಕಾಲ ನಡೆಯುತ್ತಿರುತ್ತದೆ.

ಅಬಲರು, ಅನಾಥರು, ವಿಕಲಚೇತನರು, ಅಕ್ಷರ-ಆಹಾರ ಆಶ್ರಯ ಪಡೆಯುವ ನೆಲೆವೀಡಾಗಿದೆ. ಈ ಆಶ್ರಮವನ್ನು ಡಾ|| ಎಸ್.ಜಿ.ಸುಶೀಲಮ್ಮ ಮತ್ತು ಶ್ರೀಮತಿ. ಎಂ.ಕಾಂತಮ್ಮ ಅವರು 1975ರಲ್ಲಿ ಉದಾತ್ತ ಆಶಯಗಳನ್ನಿಟ್ಟುಕೊಂಡು ಒಂದಿಬ್ಬರು ಗೆಳತಿಯರ ನೆರವಿನೊಂದಿಗೆ, ಹುಲ್ಲು ಚಾವಣಿಯ ಕಿರು ಕೊಠಡಿಯಲ್ಲಿ ಆರಂಭಿಸಿದ್ದರು. ಆ ಎಲ್ಲ ಉದಾತ್ತ ಆಶಯಗಳು ಅನುಷ್ಠಾನಗೊಳ್ಳಲು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಾ, ಹಗಲಿರುಳು ಶ್ರಮಿಸುತ್ತಾ, ನೂರಾರು ಜನರ ಸಲಹೆ ಸೂಚನೆಗಳನ್ನು ಪಡೆಯುತ್ತಾ, ಸಾವಿರಾರು ಜನರನ್ನು ಒಗ್ಗೂಡಿಸುತ್ತಾ ಸಾಗುತ್ತಿದೆ.

ಶಿಕ್ಷಣ ಮಂದಿರ:

ಈ ಆಶ್ರಮದಲ್ಲಿ, ಬಸವಾನಂದ ನರ್ಸರಿ ಶಾಲೆ ಬಸವಾನಂದ ಹೈಯರ್ ಪ್ರೈಮರಿ ಶಾಲೆ ಮತ್ತು ಸುಮಂಗಲಿ ಸೇವಾ ಆಶ್ರಮ ಬಾಲಕಿಯರ ಪ್ರೌಡಶಾಲೆ ನಡೆಯುತ್ತಿದೆ. ಅದರೊಂದಿಗೆ ಚಿಂದಿ ಆಯುವ ಮಕ್ಕಳ ಶಿಶುವಿಹಾರ, ಹೆಣ್ಣುಮಕ್ಕಳ ವಸತಿ ನಿಲಯ, ವಯಸ್ಕರ ಶಿಕ್ಷಣ, ಬೇಸಿಗೆ ಶಿಬಿರಗಳು, ಉನ್ನತ ವ್ಯಾಸಂಗದ ಇಂಟನ್‌ಶಿಪ್‌ಗೆ ಸಹಕಾರ, ಗ್ರಂಥಾಲಯ, ಕೌನ್ಸಿಲಿಂಗ್ ಸೆಂಟರ್ ಗಳನ್ನು ನಡೆಸಲಾಗುತ್ತಿದೆ. ಮಕ್ಕಳ ರಕ್ಷಣೆ, ಮಕ್ಕಳ ಶಿಕ್ಷಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ "ಮದರ್ ತೆರೇಸಾ '' ಎಂದೇ ಮನೆ ಮಾತಾಗಿದ್ದಾರೆ. ಬೆಂಗಳೂರು ನಗರ ಸಾಕ್ಷರತಾ ಸಮಿತಿಯ ಉಪಾಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಾಕ್ಷರತಾ ಸಮಿತಿ ಸದಸ್ಯೆಯಾಗಿ,

: ಅನುಪಮ ಸೇವೆ ಸಲ್ಲಿಸಿದ್ದಾರೆ. ಡಯಟ್ ಸಂಸ್ಥೆ

ಆಶ್ರಯ ಧಾಮ:

ಅಬಲೆಯರು ಮತ್ತು ನಿರಾಶ್ರಿತರಿಗಾಗಿ ಸೌಹಾರ್ದ ಆಶ್ರಯಧಾಮ ಮತ್ತು ನಿರ್ಲಕ್ಷಿತ ಮಕ್ಕಳಿಗಾಗಿ ಪ್ರೇಮಾನಂದ ಮಕ್ಕಳ ಕುಟೀರ, ಪುಣ್ಯಕೋಟಿ ವಾನಪ್ರಸ್ಥಾಶ್ರಮ ಇಲ್ಲದೆ. ಇದು ಗಾಂಧೀಜಿ ಅವರ ಸಬರಮತಿ ಆಶ್ರಮ. ಸ್ವಾಮಿ ರಾಮಕೃಷ್ಣಾ ಅವರ ಶಾರದಾದೇವಿ ಆಶ್ರಮ ರೀತಿಯ ಮಾದರಿ ಆಶ್ರಮವಾಗಿದೆ. ಹಿರಿಯ ನಾಗರೀಕರ ನೆಮ್ಮದಿಯ ತಾಣ ಇದಾಗಿದೆ.

ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ:

ಕರ್ನಾಟಕದಲ್ಲಿರುವ ಗೃಹೋದ್ಯಮಿಗಳ ಸ್ವ ಉದ್ಯೋಗಿಗಳನ್ನು ಮತ್ತು ಕಿರು ಉದ್ದಿಮೆದಾರರನ್ನು ಒಗ್ಗೂಡಿಸಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟವನ್ನು ಆಶ್ರಮದ ನೇತೃತ್ವದಲ್ಲಿ ರಚಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿ ಸಲಹೆ, ಸಹಕಾರ ಸಾಲ ಸೌಲಭ್ಯ, ಸಿದ್ದ ಪಡಿಸಿದ ವಸ್ತುಗಳು, ಪದಾರ್ಥಗಳು, ಉಪಕರಣಗಳ ಪ್ರದರ್ಶನ ಏರ್ಪಡಿಸುವುದು. ಮಾರಾಟ ವ್ಯವಸ್ಥೆಗಳನ್ನು ಒಕ್ಕೂಟದಿಂದ ಮಾಡಲಾಗುತ್ತಿದೆ. ಮಹಿಳೆಯರು, ಉದ್ದಿಮೆದಾರರಾಗಲು 25 ರಿಂದ 30 ಜನ ಮಹಿಳಾ ತಂಡವನ್ನು ಒಗ್ಗೂಡಿಸಿ - 10 ದಿನಗಳ ದಿನಗಳ ತರಬೇತಿ ಶಿಬಿರಗಳು ಮತ್ತು ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು, ಆಡಿಟರ್ ಗಳು, ಕಾನೂನು ಸಲಹೆಗಾರರನ್ನು ಕರೆಯಿಸಿ ಸಂವಾದ ಸಂವಹನವನ್ನು ಏರ್ಪಡಿಸಲಾಗಿರುವುದರಿಂದ ಬಹಳಷ್ಟು ಮಹಿಳೆಯರು ಇಂದು ಉದ್ದಿಮೆದಾರರಾಗಿ ಹೆಸರು ಮಾಡುತ್ತಾ ಡಾ|| ಎಸ್.ಜಿ.ಸುಶೀಲಮ್ಮ ಅವರ ಹೆಸರು ಸದಾ ಸ್ಮರಿಸುತ್ತಾರೆ.

ಕೋ-ಆಪರೇಟಿವ್ ಸೊಸೈಟಿ ಮಾಡಲು ಕೌಶಲ್ಯಾಭಿವೃದ್ಧಿ ಯೋಜನೆಗಳ ತಿಳುವಳಿಕೆ ಕೊಡುವ ತರಬೇತಿಗಳನ್ನು ವರ್ಷಾವಾರು ಏರ್ಪಡಿಸಲಾಗುತ್ತದೆ.

ಆರೋಗ್ಯ ಭಾಗ್ಯ

ಆಶ್ರಮದ ಮಕ್ಕಳು. ಮಹಿಳೆಯರು ಹಾಗೂ ಸುತ್ತ ಮುತ್ತಲಿನ ಸಮುದಾಯದವರಿಗಾಗಿ “ಆರೋಗ್ಯ ಶಿಬಿರ"ಗಳನ್ನು ಕಳೆದ 40 ವರ್ಷಗಳಿಂದ ನಡೆಸಲಾಗುತ್ತಿದೆ. ಅದರೊಂದಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಶಾಲೆಗಳಲ್ಲಿ ಆರೋಗ್ಯ ಮತ್ತು ಅರಿವು ಕಾರ್ಯಗಳನ್ನು ನಡೆಸಲಾಗುತ್ತಿದೆ. ಭಾರತೀಯ ಜನಸಂಖ್ಯಾ ಯೋಜನೆಯ ಅಡಿಯಲ್ಲಿ ಲಯನ್ಸ್ ಕ್ಲಬ್ ಗಂಗಾನಗರ, ಗಣೇಶ ನರ್ಸಿಂರ್ಗ್ ಹೋಂ ನೆರವಿನಿಂದ ಆರೋಗ್ಯ

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims