ಮಂಗಳೂರಿನಲ್ಲಿ ಇಂಡಿಯನ್ ಓಪನ್ ಸರ್ಫಿಂಗ್ ಸ್ಪರ್ಧೆ,ಮಂಗಳೂರು ಬಂದರು ಪ್ರಾಧಿಕಾರದಿಂದಬೆಂಬಲ!
ಮಂಗಳೂರಿನಲ್ಲಿ ಇಂಡಿಯನ್ ಓಪನ್ ಸರ್ಫಿಂಗ್ ಸ್ಪರ್ಧೆ,ಮಂಗಳೂರು ಬಂದರು ಪ್ರಾಧಿಕಾರದಿಂದಬೆಂಬಲ!
ಮೇ 26, ಮಂಗಳೂರು: ಭಾರತ ಸರ್ಫಿಂಗ್ ಫೆಡರೇಷನ್ ಸಹಯೋಗದಲ್ಲಿ ಪ್ರಮುಖ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಾದ ಆರನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಯು ಇದೇ ಮೇ 30ರಿಂದ ಜೂನ್ 1ರ ವರೆಗೆ ಮಂಗಳೂರಿನ ತಣ್ಣೀರುಭಾವಿ ಎಕೋ ಬೀಚ್ ನಲ್ಲಿ ನಡೆಯಲಿದೆ. ಈ ಸ್ಪರ್ಧೆಯನ್ನು ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸುತ್ತಿದೆ.
ಈ ಸರ್ಫಿಂಗ್ ಸ್ಪರ್ಧೆಗೆ ಪ್ರಮುಖ ಪ್ರಾಯೋಜಕರು ನಿರಂತರ ಬೆಂಬಲವನ್ನು ಘೋಷಿಸಿದ್ದಾರೆ. ಸತತ ಎರಡನೇ ವರ್ಷವೂ ನ್ಯೂ ಮಂಗಳೂರು ಬಂದರು ಪ್ರಾಧಿಕಾರ (NMPA) ಟೈಟಲ್ ಸ್ಪಾನ್ಸರ್ ಆಗಿ ಮುಂದುವರೆದಿದೆ. ರಾಜ್ಯದಲ್ಲಿ ದೀರ್ಘಕಾಲದಿಂದ ಸರ್ಫಿಂಗ್ ಅನ್ನು ಬೆಂಬಲಿಸುತ್ತಿರುವ ಕರ್ನಾಟಕ ಪ್ರವಾಸೋದ್ಯಮವು ಸತತ ಆರನೇ ವರ್ಷವೂ 'ಪ್ರೆಸೆಂಟೆಡ್ ಬೈ' ಪಾಲುದಾರರಾಗಿ ಸೇರಿಕೊಂಡಿದ್ದು ಜೊತೆಗೆ ಸೈಕಲ್ ಪ್ಯೂರ್ ಅಗರಬತ್ತಿ 'ಪವರ್ಡ್ ಬೈ' ಆಗಿ ಬೆಂಬಲ ಸೂಚಿಸಿದೆ.
ಕಳೆದ ವರ್ಷ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸಂಚಲನ ಮೂಡಿಸಿದ ಪ್ರಮುಖ ಸ್ಪರ್ಧಿಗಳು NMPA ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಮರಳಲಿದ್ದಾರೆ. ಕಳೆದ ವರ್ಷ ಏಷ್ಯನ್ ಸರ್ಫಿಂಗ್ ಚಾಂಪಿಯನ್ ಶಿಪ್ ಮತ್ತು ಮಾರುಹಾಬಾಕಪ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಿಶೋರ್ ಕುಮಾರ್, ಹರೀಶ್ ಮುತ್ತು, ಕಮಲಿಪಿ, ಅಜೀಶ್ ಅಲಿ,ಶ್ರೀಕಾಂತ್ಡಿ, ಮತ್ತು ಸಂಜಯ್ ಸೆಲ್ವಮಣಿ ಈ ಆವೃತ್ತಿಯ ಪ್ರಮುಖ ಸರ್ಫರ್ ಗಳಾಗಿದ್ದಾರೆ.
ಈ ಸ್ಪರ್ಧೆಯ ಬಗ್ಗೆ ಮಾತನಾಡಿದ ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟ ರಮಣ ಅಕ್ಕರಾಜು 'ಇಂಡಿಯನ್ ಓಪನ್ ಆಫ್ ಸರ್ಫಿಂಗ್ ನ ಶೀರ್ಷಿಕೆ ಪ್ರಾಯೋಜಕರಾಗಿ ಮರಳಲು ನಮಗೆ ಅಪಾರ ಹೆಮ್ಮೆಯಿದೆ. ಮಂಗಳೂರನ್ನು ಸಮುದ್ರ ಕ್ರೀಡೆಗಳು ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಜಾಗತಿಕ ಗಮ್ಯಸ್ಥಳವನ್ನಾಗಿ ರೂಪಿಸಲು ಸರ್ಫಿಂಗ್ ಪ್ರಮುಖ ಪಾತ್ರವಹಿಸಬಹುದು ಎಂಬುದರಲ್ಲಿ ನಮಗೆ ದೃಢನಂಬಿಕೆಯಿದೆ. ಈ ಬಾರಿ ಮತ್ತೊಂದು ಪರಿಣಾಮಕಾರಿಆವೃತ್ತಿಗೆನಾವುಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದೇವೆ' ಎಂದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಮುಲೈ ಮುಹಿಲನ್ ಎಂ.ಪಿ., ಐಎಎಸ್, ಅವರು ಮಾತನಾಡಿ 'ಕರ್ನಾಟಕ ಪ್ರವಾಸೋದ್ಯಮವು ಇಂಡಿಯನ್ ಓಪನ್ ಆಫ್ ಸರ್ಫಿಂಗ್ ನೊಂದಿಗೆ ತನ್ನ ದೀರ್ಘಕಾಲದ ಸಂಬಂಧವನ್ನು ಮುಂದುವರಿಸಲು ಹೆಮ್ಮೆಪಡುತ್ತದೆ. ಸಾಹಸ ಪ್ರವಾಸೋದ್ಯಮ ಮತ್ತು ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸಲು ರಾಜ್ಯವು ಬದ್ಧವಾಗಿದೆ' ಎಂದು ಹೇಳಿದರು.
ಸೈಕಲ್ ಪ್ಯೂರ್ ಅಗರಬತ್ತಿಯ ಎನ್ ಆರ್ ಗ್ರೂಪ್ ನ ವ್ಯವಸ್ಥಾಪಕ ಪಾಲುದಾರ ಮತ್ತು ಎಂಡಿ ಶ್ರೀ ಅರ್ಜುನ್ ರಂಗ ಮಾತನಾಡಿ ಇಂಡಿಯನ್ಓಪನ್ ಆಫ್ ಸರ್ಫಿಂಗ್ ಗೆ ನಾವು ಬೆಂಬಲ ನೀಡುತ್ತಿರುವುದನ್ನು ಮುಂದುವರೆಸುತ್ತಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ. ಈ ಕ್ರೀಡೆ ನಮ್ಮ ಬ್ರಾಂಡ್ ನ ಮೌಲ್ಯಗಳು ಮತ್ತು ಸಮುದಾಯದ ಕಲ್ಯಾಣದೊಂದಿಗೆ ತೀವ್ರವಾಗಿ ಬೆಸೆದುಕೊಂಡಿದೆ. ರಾಷ್ಟ್ರ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವ ಭಾರತದ ಶ್ರೇಷ್ಠ ಸರ್ಫರ್ ಗಳಉತ್ಸಾಹ ಮತ್ತು ಶಕ್ತಿಯನ್ನು ನೋಡಿನಾವು ಖುಷಿಯಾಗಿದ್ದೇವೆ ಎಂದರು.
ಎನ್ ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್, ನ್ಯಾಷನಲ್ ಸರ್ಫಿಂಗ್ ಚಾಂಪಿಯನ್ ಶಿಪ್ ಸರಣಿಯ ಎರಡನೇ ಹಂತವಾಗಿದ್ದು ಪುರುಷರ ಓಪನ್, ಮಹಿಳೆಯರ ಓಪನ್, ಗೋಮ್ಸ್ (U-16) ಬಾಲಕರು ಮತ್ತು ಗೋಮ್ಸ್ (U-16) ಬಾಲಕಿಯರು ಎಂಬ ನಾಲ್ಕು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಸರ್ಫರ್ ಗಳು ಭಾಗವಹಿಸಲಿದ್ದಾರೆ. ಈ ಈವೆಂಟ್ ರಾಷ್ಟ್ರೀಯ ಶ್ರೇಯಾಂಕದಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ, ದೇಶಾದ್ಯಂತ ತೀವ್ರ ಪೈಪೋಟಿ ಮತ್ತು ಉನ್ನತ ಮಟ್ಟದ ಪ್ರದರ್ಶನಗಳನ್ನು ಸೆಳೆಯುವ ನಿರೀಕ್ಷೆಯಿದೆ.
ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ಮತ್ತು ಮಂತ್ರ ಸರ್ಫ್ ಕ್ಲಬ್ ನ ನಿರ್ದೇಶಕರಾದ ಶ್ರೀ ರಾಮಮೋಹನ್ ಪರಾಂಜಪೆ ಅವರು ಈ ಬಗ್ಗೆ ಮಾತನಾಡಿ "ಸರ್ಕಾರ ಮತ್ತು ಕಾರ್ಪೊರೇಟ್ ಪಾಲುದಾರರ ನಿರಂತರ ಬೆಂಬಲದಿಂದಾಗಿ NMPA ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಪ್ರತಿ ವರ್ಷವೂ ಎತ್ತರದಲ್ಲಿ ಬೆಳೆಯುತ್ತಿದೆ. ರಾಜ್ಯದ
ಸ್ಥಳೀಯ ಕಡಲತೀರಗಳಲ್ಲಿ ಇದನ್ನು ಆಯೋಜಿಸುವುದು ವಿಶ್ವ ದರ್ಜೆಯ ಕ್ರೀಡಾ ಅನುಭವವನ್ನು ನೀಡುವುದರ ಜೊತೆಗೆ ಸ್ಥಳೀಯ ಸರ್ಫ್ ಸಂಸ್ಕೃತಿಯನ್ನು ಪೋಷಿಸುವನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

Comments
Post a Comment