ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷ ಅನ್ವರ್ ಭಾಷಾ ಅವರಿಂದ ಬಾರೀ ಅವ್ಯವಹಾರ; ಉನ್ನತ ಮಟ್ಟದ ತನಿಖೆಗೆ ಮುಸ್ಲಿಂ ಯಂಗ್ ಅಸೋಸಿಯೇಶನ್ ಒತ್ತಾಯ.
ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷ ಅನ್ವರ್ ಭಾಷಾ ಅವರಿಂದ ಬಾರೀ ಅವ್ಯವಹಾರ; ಉನ್ನತ ಮಟ್ಟದ ತನಿಖೆಗೆ ಮುಸ್ಲಿಂ ಯಂಗ್ ಅಸೋಸಿಯೇಶನ್ ಒತ್ತಾಯ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಅನ್ವರ್ ಬಾಷ ಅವರು ಅನೇಕ ಅಕ್ರಮಗಳನ್ನು ಎಸಗಿದ್ದು ಅನ್ವರ್ ಬಾಷರವರ ವಿರುದ್ಧ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನಿಖೆಯನ್ನು ನಡೆಸಬೇಕೆಂದು ಮುಸ್ಲಿಂ ಯಂಗ್ ಅಸೋಸಿಯೇಶನ್ ನ ಸದಸ್ಯರು ಒತ್ತಾಯಿಸಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾದಾಪೀರ್, ಅಜ್ಮಲ್ ಅಹಮದ್, ರಾಜ್ಯ ವಕ್ಫ್ ಮಂಡಳಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅಧಿಕಾರ ದುರ್ಬಳಕೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ದುರ್ಬಳಕೆ ಮತ್ತು ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯ ಖಬರ್ ಸ್ಥಾನ ಜಮೀನನ್ನು ಸ್ವಂತಕ್ಕೆ ಕಬಳಿಸಿಕೊಂಡು ತಮ್ಮ ಸಂಸ್ಥೆಯ ವತಿಯಿಂದ ನಡೆಯುವ ರಮೀಜಾ ಮೈನಾರಿಟಿ ವೆಲ್ಸ್ವೇರ್ ಟ್ರಸ್ಟ್ ಬೃಹತ್ ಶಾಲಾ ಕಟ್ಟಡವನ್ನು ನಿರ್ಮಿಸಿಕೊಂಡಿದ್ದು, ಈ ಅಕ್ರಮಗಳಲ್ಲಿ ಅನ್ವರ್ ಭಾಷಾರವರು ನೇರವಾಗಿ ಭಾಗಿಯಾಗಿದ್ದು,ಅನ್ವರ್ ಬಾಷ ಅವರ ವಿರುದ್ಧ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ತನಿಖೆಯನ್ನು ನಡೆಸಬೇಕು ಎಂದು ಹೇಳಿದರು.
ಇಂತಹ ಆಕ್ರಮಣಗಳನ್ನು ನಡೆಸಿರುವ ಅನ್ವರ್ ಭಾಷ ಸದಸ್ಯತ್ವವನ್ನು ರದ್ದುಪಡಿಸಬೇಕು
ಇತ್ತೀಚೆಗೆ ನಡೆದಂತಹ ವಕ್ಸ್ ಮಂಡಳಿಯ ಸದಸ್ಯರ ಚುನಾವಣೆಯಲ್ಲಿ ಭಾರೀ ಅಕ್ರಮವೇ ನಡೆದಿದ್ದು, ರಾಜ್ಯದಲ್ಲಿ ಸುಮಾರು 32 ಸಾವಿರ ವಕ್ಪ್ ಗೆ ಸೇರಿದ ನೋಂದಾಯಿತಿ ಸಂಸ್ಥೆಗಳಿದ್ದು, ಈ ನೋಂದಾಯಿತ ಸಂಸ್ಥೆಗಳ ಮುತುವಲ್ಲಿಗಳು ಮತದಾನ ಮಾಡುವ ಮೂಲಕ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಈ ಸದಸ್ಯರನ್ನು ಆಯ್ಕೆ ಮಾಡಲು ಮತದಾನದ ಹಕ್ಕು ವುಳ್ಳವರು 1024 ಸಂಸ್ಥೆಗಳ ಮುತುವಲ್ಲಿಗಳು ಹಕ್ಕು ವುಳ್ಳವರಾಗಿರುತ್ತಾರೆ. ಇನ್ನು ಬಾಕಿ ಉಳಿದ 31 ಸಾವಿರ ಸಂಸ್ಥೆಗಳ ಸದಸ್ಯರಿಗೆ ಅವಕಾಶ ಇಲ್ಲದೇ ಇರುವುದು ಸಂಶಯಸ್ಪದವಾಗಿದೆ ಎಂದು ಹೇಳಿದರು.
ಮತದಾನ ಹಕ್ಕು ಚಲಾಯಿಸಲು ಆ ಸಂಸ್ಥೆಯ ವಾರ್ಷಿಕ ಆದಾಯ 2 ಲಕ್ಷ ಮೇಲ್ಪಟ್ಟಿರಬೇಕಾಗುತ್ತದೆ. ಆದರೆ ಯಾವುದೇ ಆದಾಯವಿಲ್ಲದ ಸಂಸ್ಥೆಗಳು ಹಾಗೂ ವಾರ್ಷಿಕ ಆದಾಯ ವರದಿಯನ್ನು ಸಂಬಂಧಪಟ್ಟ ಇಲಾಖೆಯ ಆಡಿಟರ್ಗಳಿಂದ ಸುಮಾರು 7-8 ವರ್ಷಗಳಿಂದಲೂ ಸಹ ಮಾಡಿಸದೇ ಇರುವ ಸಂಸ್ಥೆಗಳ ಅಧ್ಯಕ್ಷರುಗಳು ಮತದಾನ ಮಾಡಲು ಅರ್ಹರು ಎಂದು ದೃಢೀಕರಿಸಿದ್ದಾರೆ, ವಕ್ಪ್ ಕಾಯ್ದೆಯ ವಿರುದ್ಧವಾಗಿ ಕಾನೂನು ಬಾಹಿರವಾಗಿದೆ. ಮುತುವಲ್ಲಿಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಮುಂದಾಲೋಚನೆಯನ್ನು ಇಟ್ಟುಕೊಂಡು ಕೆ.ಅನ್ವರ್ ಬಾಷ ಷಡ್ಯಂತ್ರ ರಚಿಸಿ ಅರ್ಹ ಮತದಾರರನ್ನು ಕೈಬಿಟ್ಟಿದ್ದಾರೆ
ಈಗಾಗಲೇ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದ ಸಂಸ್ಥೆಗಳಿಂದ ವಾರ್ಷಿಕ ಶೇ.7% ಸೇವಾ ಶುಲ್ಕವನ್ನು ಪಡೆದು ವಕ್ಸ್ ವತಿಯಿಂದ ಸೌಲಭ್ಯಗಳಿಂದ ವಂಚಿತರಾಗಿರುವ ಸುಮಾರು ಸಂಸ್ಥೆಗಳಿದ್ದು ಗ್ರಾಮೀಣ ಪ್ರದೇಶಲ್ಲಿ ಇರುವಂತಹ ವಕ್ಪ್ ಸೇರಿಗೆ ಮಸೀದಿ, ಖಬ್ರಸ್ಥಾನ್ ಮದರಸಗಳ ರಕ್ಷಣೆಯ ಬಗ್ಗೆ ಕಿಂಚಿತ್ತು ವಕ್ಸ್ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವಾಗಿದೆ,ಈ ಬಗ್ಗೆ ಹಲವಾರು ಬಾರಿ ಅರ್ಜಿಗಳನ್ನು ಕೆ.ಅನ್ವರ್ ಬಾಷರವರಿಗೆ ನೀಡಿದ್ದರೂ ಸಹ ಇದರ ಬಗ್ಗೆ ಗಮನವನ್ನು ಹರಿಸದೇ ನಿರ್ಲಕ್ಷತನವನ್ನು ತೋರಿದ್ದಲ್ಲದೆ, ತಮ್ಮ ಹಿಂಬಾಲಕರ ಬೆಂಬಲಕ್ಕಾಗಿ ಅನೇಕ ಅಕ್ರಮಗಳನ್ನು ಎಸಗಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ವಕ್ಫ್ ಸಂಸ್ಥೆಗೆ ಸೇರಿರುವಂತಹ ಸುಮಾರು ಸಂಸ್ಥೆಗಳ ಸುಮಾರು 8ರಿಂದ10 ವರ್ಷಗಳಿಂದಲೂ ಆದಾಯ ವರದಿ ಆಡಿಟ್ನ್ನು ಮಾಡಿಸದೇ ಇಂತಹ ಸಂಸ್ಥೆಗಳ ಸಮಿತಿ ರಚನೆ ಮಾಡಿ ಅನುಮೋದನೆಯನ್ನು ಅಕ್ರಮವಾಗಿ ನೀಡಿದ್ದಾರೆ.ಇದರ ಬಗ್ಗೆ ಸುಮಾರು ಬಾರಿ ದೂರು ಅರ್ಜಿಗಳನ್ನು ನೀಡಿದ್ದರೂ ಸಹ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ, ಇಂತಹ ಸಂಸ್ಥೆಗಳ ಆಡಳಿತ ಮಂಡಳಿ ಅನುಮೋದನೆಯನ್ನು ರಾಜ್ಯ ವಕ್ಸ್ ಮಂಡಳಿಯ ಅಧಿಕಾರಿಗಳು ನೀಡಿದ್ದು, ಈ ಅಧಿಕಾರಿಗಳು ಕಾನೂನು ಬಾಹಿರವಾಗಿ ವಕ್ಫ್ ಕಾಯ್ದೆಯನ್ನು ಉಲ್ಲಂಘಿಸಿ ನೀಡಿರುವಂತಹ ಅನುಮೋದನೆಯನ್ನು ರದ್ದುಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಕ್ಪ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್ನ ಚುನಾವಣೆಯನ್ನು ನಡೆಸುತ್ತೇವೆಂದು ಸುಮಾರು 2040 ಸದಸ್ಯರಿಂದ 2 ಲಕ್ಷದ 4 ಸಾವಿರ ರೂ.ಗಳನ್ನು ಪಡೆದು ಸುಮಾರು 10 ವರ್ಷಗಳಿಂದಲೂ ಸಹ ಚುನಾವಣೆಯನ್ನು ನಡೆಸದೇ ಹಾಗೂ ಈ ಸಂಸ್ಥೆಯ ವಾರ್ಷಿಕ ಆದಾಯ ಆಡಿಟ್ ವರದಿಯನ್ನು ಸಹ ಮಾಡಿಸಿರುವುದಿಲ್ಲ. ಇದರ ಬಗ್ಗೆ ಸುಮಾರು ಬಾರಿ ದೂರು ಅರ್ಜಿಗಳನ್ನು ನೀಡಿದ್ದರೂ ಸಹ ಯಾವುದೇ ರೀತಿಯಾದ ಕ್ರಮ ಕೈಗೊಳ್ಳದೇ ಈ ಸಂಸ್ಥೆಯ ವತಿಯಿಂದ ವಾಣಿಜ್ಯ ಸಂಕೀರ್ಣಕ್ಕಾಗಿ ಸುಮಾರು 40 ಲಕ್ಷ ರೂಪಾಯಿಗಳನ್ನು 20 ವರ್ಷಗಳ ಹಿಂದೆಯೇ ಪಡೆದು ಹಾಗೂ ಬಾಡಿಗೆದಾರರಿಂದ ಒಂದು ಕೋಟಿ ರೂಪಾಯಿ ಅಡ್ವಾನ್ಸ್ ಹಣವನ್ನು ಸಹ ಪಡೆದು ಬಾಡಿಗೆದಾರರಿಗೆ ದೊರಕಬೇಕಾದಂತಹ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಅಪೂರ್ಣಗೊಳಿಸಿದ್ದಾರೆ ಈ ಸಂಸ್ಥೆಗೆ ತಮಗೆ ಬೇಕಾದಂತಹ ತಮ್ಮ ಹಿಂಬಾಲಕರನ್ನು ಅಧ್ಯಕ್ಷರನ್ನಾಗಿ ಸದಸ್ಯರನ್ನಾಗಿ ಮಾಡಿಕೊಂಡು ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.
2014-15 ರಲ್ಲಿ ಚಿತ್ರದುರ್ಗ ಜಿಲ್ಲಾ ವಕ್ಸ್ ಮಂಡಳಿಯ ಅಧ್ಯಕ್ಷರಾದಂತಹ ಸಮಯದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಉಮೇನ್ ಪೌಂಡೇಷನ್ ವತಿಯಿಂದ ಮುಸ್ಲಿಂ ಸಮಾಜದ ಬಡ ಹೆಣ್ಣು ಮಕ್ಕಳಿಗೆ ನಾನಾ ತರಬೇತಿಗಳನ್ನು ಒದಗಿಸುವ ಸಲುವಾಗಿ ಸಹಾಯಧವನ್ನು ಎನ್.ಜಿ.ಓ.ಸಂಸ್ಥೆಗಳ ಮುಖಾಂತರ ಸುಮಾರು ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಕೆ.ಅನ್ವರ್ ಬಾಷ ರವರು ತಮ್ಮ ವಂಶಸ್ಥರು, ಹಾಗೂ ತಮ್ಮ ಹಿಂಬಾಲಕರಿಗೆ ಎನ್.ಜಿ.ಓ.ಗಳ ಮುಖಾಂತರ ಹಣವನ್ನು ಬಿಡುಗಡೆ ಮಾಡಿಸಿ ತಮ್ಮ ಸ್ವಂತಕ್ಕಾಗಿ ಈ ಹಣವನ್ನು ದುರ್ಬಳಕ್ಕೆ ಮಾಡಿಕೊಂಡು ಯಾವುದೇ ರೀತಿಯಾದಂತಹ ತರಬೇತಿ ಕೇಂದ್ರಗಳನ್ನು ತೆರೆದಿರುವುದಿಲ್ಲ ಎಂದು ಹೇಳಿದರು.
Comments
Post a Comment