ಡಿಸೆಂಬರ್ 25, 2024 ರಂದು ಜರುಗಲಿರುವ ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ ಕಾನ್ಸರೆನ್ಸ್ ಕಾರ್ಯಕ್ರಮ
ಡಿಸೆಂಬರ್ 25, 2024 ರಂದು ಜರುಗಲಿರುವ ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ ಕಾನ್ಸರೆನ್ಸ್ ಕಾರ್ಯಕ್ರಮ

ಈ ಮೇಲ್ಕಂಡ ವಿಷಯಕ್ಕೆ ಇದೇ ತಿಂಗಳ ಡಿಸೆಂಬರ್ 25, 2024 ರಂದು ಬೆಳಿಗ್ಗೆ 11 ಗಂಟೆಗೆ, ಅಂಬೇಡ್ಕರೈಟ್ ಯೂಣ ಫೆಡರೇಷನ್ ವತಿಯಿಂದ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ ಕಾನ್ಸರೆನ್ಸ್ -2024 ಎಂಬ ಕಾರ್ಯಕ್ರಮವನ್ನು ಶೋಷಿತ ಬಹುಜನ ಸಮುದಾಯಗಳಾದ ಎಸ್ಸಿ ಎಸ್ಟಿ .ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿ ಯುವಜನತೆಯ ಸಮಕಾಲಿನ ಸಮಸ್ಯೆಗಳು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರರು ತೋರಿದ ಪರಿಹಾರದ ಮಾರ್ಗಗಳು ಎಂಬ ವಿಷಯದ ಮೇಲೆ ಹಮ್ಮಿಕೊಳ್ಳಲಾಗಿದ್ದು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ಕಾರ್ಮಿಕ ಮಂತ್ರಿಗಳಾದ ಸಂತೋಷ್ ಲಾಡ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಹಿರಿಯ ಚಲನಚಿತ್ರ ನಾಯಕರ ನಟರಾದ ಶ್ರೀ ಅಶೋಕ್ ರವರು ವಹಿಸಲಿದ್ದು, ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ದಕ್ಷಿಣ ಭಾರತದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಪಾ. ರಂಜಿತ್ ಆಗಮಿಸಲಿದ್ದು, ನಾಡಿನ ಖ್ಯಾತ ಅಂಬೇಡ್ಕರ್ ವಾದಿಗಳಾದ ಡಾ. ಹ.ರಾ. ಮಹೇಶ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ದೇಶ ಮತ್ತು ಹಕ್ಕೊತ್ತಾಯವನ್ನು ಮಂಡನೆಯನ್ನು ನಾಡಿನ ಯುವ ಲೇಖಕರು ಹಾಗೂ ಅಂಬೇಡ್ಕರೈಟ್ ಯೂತ್ ಫೆಡರೇಷನ್ ಸಂಚಾಲಕರಾದ ರುದ್ರು ಪುನೀತ್ ಮಂಡಿಸಲಿದ್ದು, ಕಾರ್ಯಕ್ರಮದ ದಿಕ್ಕೂಚಿ ನುಡಿಗಳನ್ನು ಬಹುಜನ ಚಳುವಳಿಯ ಯುವ ಚಿಂತಕರು ಹಾಗೂ ಅಂಬೇಡ್ಕರೈಟ್ ಯೂತ್ ಫೆಡರೇಷನ್ನ ರಾಜ್ಯಪ್ರಧಾನ ಸಂಚಾಲಕರಾದ ಡಾ. ಸುರೇಶ್ ಗೌತಮ್ ಮಂಡಿಸಲಿದ್ದೂ, ನಾಡಿನ ಎಲ್ಲ ಜಿಲ್ಲೆಗಳಿಂದ ಹಲವು ಜನ ಖ್ಯಾತ ಅಂಬೇಡ್ಕರ್ ವಾದಿಗಳು ಭಾಗವಹಿಸುತ್ತಿದ್ದಾರೆ. ಸುಮಾರು ಎರಡು ಸಾವಿರ ಜನ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ 18 ಜನರಿಗೆ ರಾಜ್ಯಮಟ್ಟದ ಅಂಬೇಡ್ಕರೈಟ್ ಅವಾರ್ಡ್ ಪ್ರದಾನ ಮಾಡುತ್ತಿದ್ದು ಲಕ್ಷ್ಮಣ ರೆಡ್ಡಿ, ಬಿ.ಕೆ. ಉದಯ್ ಕುಮಾರ್, ಡಾ. ಮಂಜುನಾಥ್, ಪುಷ್ಪಲತ, ಪಿ. ಶೇಷಾದ್ರಿ, ಹರೀಶ್ ಸಿ.ಎಂ, ಅನೀಲ್ ಕುಮಾರ್, ಮಹೇಶ್ ಭರಣಿ, ಮಹ್ಮದ್ ಮೇತ್ರಿ, ಕುಮಾರ್ ಹೆಚ್.ಪಿ, ಬಿ.ಆರ್.ಭಾಸ್ಕರ್ ಪ್ರಸಾದ್, ಡಾ. ರಾಜನಾಯ್, ಎ.ಸಿ. ಚಿಕ್ಕಣ್ಣ, ಹನಸೋಗೆ ಸೋಮಶೇಖರ್, ಕೃಷ್ಣಮೂರ್ತಿ ಚಮರಂ, ಯಶೋಧ ಪಿ, ತುಂಬಲ ರಾಮಣ್ಣ, ಹರ್ಷಕುಮಾರ್ ಕುಪ್ಪೆ, ಜೊತೆಗೆ ನಾಡಿನ ಪ್ರಸಿದ್ದ ವಿಚಾರವಾದಿಗಳಿಂದ ಬಾಬಾ ಸಾಹೇಬರನ್ನು ಕುರಿತು ಚಿಂತನ -ಮಂಥನ ಕಾರ್ಯಕ್ರಮ ನೆರವೇರಲಿದೆ.
ಹಾಕ್ಕೋತ್ತಾಯಗಳು :
1. ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ದೊರೆಯುವಂತೆ ವಿದ್ಯಾರ್ಥಿನಿಲಯಗಳ ಸಂಖ್ಯೆ ಮತ್ತು ಕಟ್ಟಡಗಳ ವಿಸ್ತಾರವನ್ನು ಹೆಚ್ಚಿಸಬೇಕು.
2. ವಿದ್ಯಾರ್ಥಿವೇತನ ಪಡೆಯಲು SC/ST ವಿದ್ಯಾರ್ಥಿಗಳ ಪೋಷಕರಿಗೆ ನಿಗಧಿಗೊಳಿಸಿರುವ ಆದಾಯಮಿತಿಯನ್ನು ಹೆಚ್ಚಿಸಬೇಕು. ಮತ್ತು ವಿದ್ಯಾರ್ಥಿವೇತನ ಹಾಗು ಪ್ರೋತ್ಸಾಹ ಧನವನ್ನು ದ್ವಿಗುಣಗೊಳಿಸಬೇಕು. ಸಕಾಲಕ್ಕೆ ವಿತರಿಸಬೇಕು.
3. ಹಾಸ್ಟೆಲ್ ವಿದ್ಯಾರ್ಥಿಗಳ ದಿನಭತ್ಯೆಯನ್ನು ದ್ವಿಗುಣಗೊಳಿಸಬೇಕು.
4. ಹಾಸ್ಟೆಲ್ ಗಳಲ್ಲಿ ಪ್ರತ್ಯೇಕ ಸುಸಜ್ಜಿತ ಮತ್ತು ಸರ್ವಸೌಲಭ್ಯವಿರುವ ‘ಓದುವಮನೆ’ ಗ್ರಂಥಾಲಯ ಮತ್ತು ಧ್ಯಾನಮಂದಿರಗಳನ್ನು ನಿರ್ಮಿಸಬೇಕು.
5. ವಿದ್ಯಾರ್ಥಿನಿಲಯಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳು, ಕೆರೀರ್ ಗೈಡೆನ್ಸ್, ಪ್ರಮಾಣೀಕೃತ ವೃತ್ತಿಪರ ತರಬೇತಿಗಳು, ವಿದೇಶವ್ಯಾಸಂಗದ ಬಗ್ಗೆ ಅರಿವು, ಸ್ವಯಂ ಉದ್ಯೋಗಕ್ಕಿರುವ ಅವಕಾಶಗಳು, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮುಂತಾದವುಗಳನ್ನು ಪ್ರಾರಂಭಿಸಬೇಕು.
6. ಕರ್ನಾಟಕ ಸರ್ಕಾರದಲ್ಲಿ ಬಾಕಿಯಿರುವ SCSTOBCಗಳ ಸರ್ಕಾರಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದು, ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಖಾಯಂ ಉದ್ಯೋಗವನ್ನು ಸೃಷ್ಟಿಸುವುದು.
7. ಬಾಬಾಸಾಹೇಬರು ಬೌದ್ಧಧಮ್ಮ ಸ್ವೀಕರಿಸಿ 70 ವರ್ಷಗಳಾಗುತ್ತಿರುವ ಸ್ಮರಣೆಯಲ್ಲಿ ‘ಬೌದ್ಧ ಅಭಿವೃದ್ಧಿ ನಿಗಮ’ ಸ್ಥಾಪಿಸಿ ಕನಿಷ್ಠ 500 ಕೋಟಿ ಹಣವನ್ನು ಮೀಸಲಿಡಬೇಕು.
S. SCSP/TSP ಹಣದ ಸದುಪಯೋಗಕ್ಕೆ ತೊಡಕಾಗಿರುವ 7ಡಿ ಕಲಂ ಅನ್ನು ರದ್ದುಗೊಳಿಸಿ, SCSPTSP ಮೊತ್ತದಲ್ಲಿ ಪ್ರತಿವರ್ಷ ಕನಿಷ್ಟ 25% ಹಣವನ್ನು ಶಿಕ್ಷಣ ಸಂಬಂಧಿ ಕಾಯ್ದಿರಿಸಬೇಕು.
9. ಭಾರತ ಸಂವಿಧಾನಕ್ಕೆ 75 ತುಂಬುತ್ತಿರುವ ಸಂಭ್ರಮದ ಸ್ಮರಣೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್ ನಾಮಕರಣ ಮಾಡಬೇಕು. ಅಂಬೇಡ್ಕರ ಹೆಸರನ್ನು
10. ರಾಜಧಾನಿ ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಬಾಬಾಸಾಹೇಬರ 150 ಅಡಿ ಪ್ರತಿಮೆಯನ್ನು ನಿರ್ಮಿಸಿ ಅದರಡಿಯಲ್ಲಿ ವಿಶ್ವದರ್ಜೆಯ ಬೃಹತ್ ಗ್ರಂಥಾಲಯವನ್ನು ಸ್ಥಾಪಿಸಬೇಕು.
11. ಶಿಕ್ಷಣ ತಜ್ಞ ಮಹಾತ್ಮ ಜ್ಯೋತಿಬಾಫುಲೆಯವರ ಜನ್ಮದಿನವನ್ನು ‘ಶಿಕ್ಷಣ ದಿನ’ ಎಂದು ಘೋಷಿಸಿ ಆಚರಿಸಬೇಕು.
12. ಮೀಸಲಾತಿ ಜನಕ ಛತ್ರಪತಿ ಶಾಹುಮಹಾರಾಜರ ಹೆಸರಿನಲ್ಲಿ IAS, IPS, KAS ಪರೀಕ್ಷೆಗಳ ಬೃಹತ್ ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕು.
ಮೇಲಿನ ಹಾಕ್ಕೋತ್ತಾಯಗಳನ್ನು ಅಂಬೇಡ್ಕರೈಟ್ ಯೂತ್ ಫೆಡೆರೇಷನ್ ನ ಮುಖಂಡರುಗಳ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಲಾಯಿತು
Comments
Post a Comment