ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ‘ಸಂಸ್ಕೃತಿ ಸಂಗಮ’- 2024 ಪ್ರಶಸ್ತಿ ಪ್ರದಾನ ಸಮಾರಂಭ

 

ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ‘ಸಂಸ್ಕೃತಿ ಸಂಗಮ’- 2024 ಪ್ರಶಸ್ತಿ ಪ್ರದಾನ ಸಮಾರಂಭ

ರಾಜ್ಯ ಸರ್ಕಾರದ ಹಲವಾರು ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ, ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತನಾದ ನನಗೆ ಆಡಳಿತ ಅವಧಿಯಲ್ಲಿ ನನ್ನ ಆಡಳಿತ ನಿರ್ವಹಣೆಯಲ್ಲಿ ಮತ್ತು ಮಾನವೀಯ ಸಂಬಂಧಗಳಲ್ಲಿ ಮಾರ್ಗದರ್ಶನ ನೀಡಿದ್ದು ದಾರ್ಶನಿಕರ ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ. ವಿಶೇಷವಾಗಿ ಆಡಳಿತ ಅವಧಿಯಲ್ಲಿ ನಾನು ಹೆಚ್ಚು ಪ್ರಭಾವಿತನಾಗಿದ್ದು ವಚನ ಸಾಹಿತ್ಯದ ಆದರ್ಶ ಮೌಲ್ಯಗಳಿಂದ. ಈಗಾಗಲೇ ಕಳೆದ 28 ವರ್ಷಗಳ ಹಿಂದೆ ಬಸವ ವೇದಿಕೆಯನ್ನು ಸ್ಥಾಪಿಸಿ ಈ ಸಂಸ್ಥೆಯ ಆಶ್ರಯದಲ್ಲಿ ಶರಣರ ಆದರ್ಶ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜನಮುಖಿ ಸೇವೆ ಸಲ್ಲಿಸಿದ ಹಿರಿಯ ಸಾಧಕರುಗಳಿಗೆ ಪ್ರತಿಷ್ಠಿತ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ. ಇದರೊಂದಿಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ಹಿರಿಯರನ್ನು ಗುರುತಿಸಿ ಗೌರವಿಸಬೇಕೆಂಬುದು ನನ್ನ ಬಹು ಕಾಲದ ಆಶಯವಾಗಿತ್ತು. ಈ ದಿಸೆಯಲ್ಲಿ ನನ್ನ ಸೇವಾ ನಿವೃತ್ತಿಯ ನಂತರ ನಾನು ಮತ್ತು ನನ್ನ ಪತ್ನಿ ಶ್ರೀಮತಿ. ಸರ್ವಮಂಗಳ ಜೊತೆಗೂಡಿ ಒಂದು ಸಾಹಿತ್ಯ ಸೇವಾ ಪ್ರತಿಷ್ಠಾನ ಪ್ರಾರಂಭಿಸಬೇಕೆಂಬ ಆಶಯ 2015ರಲ್ಲಿ ಸಾಕಾರಗೊಂಡಿದೆ. ನನ್ನ ಆಡಳಿತ ಅವಧಿಯಲ್ಲಿ ಮೊದಲಿನಿಂದಲೂ ಸಂಸ್ಕೃತಿ ಹಾಗೂ ಪ್ರಗತಿ ಒಂದು ನಾಣ್ಯದ ಎರಡು ಮುಖಗಳು ಎಂಬುದು ನನ್ನ ನಂಬಿಕೆಯಾಗಿದೆ. ಹಲವಾರು ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಯೋಜನೆಗಳನ್ನು ಈ ಪ್ರತಿಷ್ಠಾನದ ಮೂಲಕ ಅನುಷ್ಠಾನಗೊಳಿಸಬೇಕೆಂಬ ಹಂಬಲ ನಮ್ಮದಾಗಿದೆ.

ಇಂತಹ ಸಂಸ್ಕೃತಿ ಪರವಾದ ಉತ್ತಮ ಧೈಯೋದ್ದೇಶಗಳನ್ನು ಹೊಂದಿರುವ ಈ ಪ್ರತಿಷ್ಠಾನದ ಉದ್ಘಾಟನೆಯು

ದಿನಾಂಕ: 05.03.2015 ರಂದು ನೆರವೇರಿತು.

ಸಂಸ್ಕೃತಿ ಸಂಗಮ ಪ್ರಶಸ್ತಿ ಪುರಸ್ಕೃತರ ವಿವರ

2015ನೇ ಸಾಲಿನ “ಸಂಸ್ಕೃತಿ ಸಂಗಮ” ಪ್ರಶಸ್ತಿ ಪುರಸ್ಕೃತರುಃ

ಜಾನಪದ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಶ್ರೀ. ಹೆಚ್.ಜಿ. ಲಕ್ಕಪ್ಪಗೌಡರು

ವಚನ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಶ್ರೀ.ಗೊ.ರು. ಚನ್ನಬಸಪ್ಪ

ದಾಸ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಶ್ರೀ.ಬನ್ನಂಜೆ ಗೋವಿಂದಾಚಾರ್ಯರು

ಸಂಗೀತ ಕ್ಷೇತ್ರ :

ಸನ್ಮಾನ್ಯ ಡಾ. ಹೆಚ್.ಆ‌ರ್. ಲೀಲಾವತಿ

2016 ನೇ ಸಾಲಿನ “ಸಂಸ್ಕೃತಿ ಸಂಗಮ” ಪ್ರಶಸ್ತಿ ಪುರಸ್ಕೃತರುಃ

ಜಾನಪದ ಸಾಹಿತ್ಯ ಕ್ಷೇತ್ರ :

ಪದ್ಮಶ್ರೀ ಡಾ. ಚಂದ್ರಶೇಖರ ಕಂಬಾರ

ವಚನ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ಎಂ.ಚಿದಾನಂದಮೂರ್ತಿ

ದಾಸ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ಟಿ.ಎನ್. ನಾಗರತ್ನ

ಸಂಗೀತ ಕ್ಷೇತ್ರ :

ಶ್ರೀಮತಿ. ರತ್ನಮಾಲಾ ಪ್ರಕಾಶ್

2017ನೇ ಸಾಲಿನ “ಸಂಸ್ಕೃತಿ ಸಂಗಮ’ ಪ್ರಶಸ್ತಿ ಪುರಸ್ಕೃತರುಃ

ಜಾನಪದ ಸಾಹಿತ್ಯ ಕ್ಷೇತ್ರ :

‘ಸನ್ಮಾನ್ಯ ಡಾ. ವಿವೇಕ್ ರೈ

ವಚನ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ಗುರುಲಿಂಗ ಕಾಪಸೆ

ದಾಸ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಸಂಗೀತ ಕ್ಷೇತ್ರ :

ಶ್ರೀಮತಿ. ಎಂ.ಎಸ್. ಶೀಲಾ

2018ನೇ ಸಾಲಿನ “ಸಂಸ್ಕೃತಿ ಸಂಗಮ” ಪ್ರಶಸ್ತಿ ಪುರಸ್ಕೃತರುಃ

ಜಾನಪದ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ಪಿ.ಕೆ. ರಾಜಶೇಖರ

ವಚನ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ವೀರಣ್ಣ ರಾಜೂರ

ದಾಸ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ವಿದ್ಯಾಭೂಷಣರು

ಸಂಗೀತ ಕ್ಷೇತ್ರ :

ಸನ್ಮಾನ್ಯ ಪದ್ಮಶ್ರೀ ಪಂಡಿತ್ ಡಾ. ಎಂ. ವೆಂಕಟೇಶ್ ಕುಮಾರ್

2019ನೇ ಸಾಲಿನ ‘ಸಂಸ್ಕೃತಿ ಸಂಗಮ” ಪ್ರಶಸ್ತಿ ಪುರಸ್ಕೃತರುಃ

ಜಾನಪದ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ.ಓ.ಎಲ್. ನಾಗಭೂಷಣಸ್ವಾಮಿ

ವಚನ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಕಬ್ಬಿನಾಲೆ ವಸಂತ ಭಾರದ್ವಾಜ್

ದಾಸ ಸಾಹಿತ್ಯ ಕ್ಷೇತ್ರ :

ಶ್ರೀಮತಿ ಯಲ್ಲವ್ವದುರ್ಗಪ್ಪರೊಡ್ಡಪ್ಪನವರ

ಸಂಗೀತ ಕ್ಷೇತ್ರ :

ಸನ್ಮಾನ್ಯ ಶ್ರೀ ವೀರೇಶ್ ಕಿತ್ತೂರ

2023ನೇ ಸಾಲಿನ “ಸಂಸ್ಕೃತಿ ಸಂಗಮ” ಪ್ರಶಸ್ತಿ ಪುರಸ್ಕೃತರುಃ

ಜಾನಪದ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಡಾ. ಹೀ. ಚಿ. ಬೋರಲಿಂಗಯ್ಯ

ವಚನ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಶ್ರೀಮತಿ ಡಾ. ಶಾಂತ ಇಮ್ರಾಪುರ

ದಾಸ ಸಾಹಿತ್ಯ ಕ್ಷೇತ್ರ :

ಸನ್ಮಾನ್ಯ ಪ್ರೊ| ಎ.ವಿ. ನಾವಡ

ಸಂಗೀತ ಕ್ಷೇತ್ರ :

ಸನ್ಮಾನ್ಯ ಪಂಡಿತ್ ಡಾ. ನರಸಿಂಹ ವಡವಾಟಿ

2024ನೇ ಸಾಲಿನ ಸಂಸ್ಕೃತಿ – ಸಂಗಮ ಪ್ರಶಸ್ತಿ ಪ್ರದಾನ ಸಮಾರಂಭ

2024ನೇ ಸಾಲಿನ ವಚನ ಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಸನ್ಮಾನ್ಯ ಡಾ. ಬಸವರಾಜ ಸಬರದವರಿಗೆ, ದಾಸ ಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಸನ್ಮಾನ್ಯ ಡಾ. ಕೃಷ್ಣ ಕೊಲ್ದಾರಕುಲಕರ್ಣಿ ಅವರಿಗೆ, ಜಾನಪದ ಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಸನ್ಮಾನ್ಯ ಡಾ. ಬಸವರಾಜ ನೆಲ್ಲಿಸರ ಅವರಿಗೆ, ಸಂಗೀತ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಶ್ರೀಮತಿ ಡಾ. ಜಯದೇವಿ ಜಂಗಮಶೆಟ್ಟಿ ಅವರಿಗೆ ದಿನಾಂಕ 20ನೇ ಅಕ್ಟೋಬರ್ 2024 ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಿತ “ ಸಂಸ್ಕೃತಿ – ಸಂಗಮ” ಪ್ರಶಸ್ತಿ 4 ನೀಡಿ ಗೌರವಿಸಲಾಗುವುದು. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಳಗಾವಿ ಜಿಲ್ಲೆಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ಪರಮ ಪೂಜ್ಯರಾದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಲಿದ್ದಾರೆ. ನಾಡಿನ ಹಿರಿಯ ನಾಯಕರೂ ಕಲೆ ಸಾಹಿತ್ಯ ಸಂಸ್ಕೃತಿಯ ಮಹಾಪೋಷಕರಾದ ಕೇಂದ್ರದ ಜಲ ಶಕ್ತಿ ಹಾಗೂ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸನ್ಮಾನ್ಯ ವಿ.ಸೋಮಣ್ಣನವರು ಈ ಸಮಾರಂಭದ ಉದ್ಘಾಟನೆ ನೆರವೇರಿಸಿ ಪ್ರತಿಷ್ಠಿತ ಸಂಸ್ಕೃತಿ ಸಂಗಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ನಾಡಿನ ಹಿರಿಯ ಸಾಹಿತಿಗಳಾದ ಸನ್ಮಾನ್ಯ ನಾಡೋಜ ಡಾ. ಹಂ.ಪ.ನಾಗರಾಜಯ್ಯರವರು ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಈ ಸಾಲಿನ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಪ್ರಶಸ್ತಿ ಪುರಸ್ಕೃತರ ಬಗ್ಗೆ ಹಾಗೂ ಈ ಹಿಂದೆ ನಡೆದ ಪ್ರಶಸ್ತಿ ಸಮಾರಂಭಗಳ ಪರಿಚಯಾತ್ಮಕ “ಸಂಸ್ಕೃತಿ ಸಂಗಮ” ವಿಶೇಷ ಸಂಚಿಕೆಯನ್ನು ಪ್ರಖ್ಯಾತ ಕಿರುತರೆ ನಿರ್ದೇಶಕರಾದ ಟಿ. ಎನ್. ಸೀತಾರಂರವರು ಬಿಡುಗಡೆ ಮಾಡಲಿದ್ದಾರೆ.

ಈ ಸಮಾರಂಭಕ್ಕೆ ಮುನ್ನ ಬೆಳಗ್ಗೆ 10 ಗಂಟೆಗೆ ಪ್ರಖ್ಯಾತ ಹಿಂದುಸ್ತಾನಿ ಗಾಯಕಿಯಾದ ಡಾ. ಜಯದೇವಿ ಜಂಗಮಶೆಟ್ಟಿ ಅವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ..

ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆ, ಪ್ರಶಸ್ತಿ ಪುರಸ್ಕೃತರ ಪರಿಚಯವನ್ನೊಳಗೊಂಡಂತೆ ಅವರುಗಳ ಭಾವಚಿತ್ರಗಳನ್ನು ಹೆಚ್ಚಿನ ಮಾಹಿತಿಗಾಗಿ ತಮಗೆ ನೀಡಲಾಗಿದೆ.

ಪ್ರತಿ ಪುರಸ್ಕಾರವು ಹತ್ತು ಸಾವಿರ ರೂಪಾಯಿಗಳ ನಗದು, ಫಲತಾಂಬೂಲಗಳೊಂದಿಗೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ದಿನಾಂಕ: 20.10.2024 ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಗಾಂಧಿ ಭವನದಲ್ಲಿ ನಡೆಯಲಿರುವ “ಸಂಸ್ಕೃತಿ ಸಂಗಮ” ಪ್ರದಾನ ಸಮಾರಂಭಕ್ಕೆ ತಮ್ಮ ಪ್ರತಿಷ್ಠಿತ ಮಾಧ್ಯಮದ ಪ್ರತಿನಿಧಿಗಳನ್ನು ನಿಯೋಜಿಸಿ ಈ ಕಾರ್ಯಕ್ರಮದ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಸಮಗ್ರವಾಗಿ ಛಾಯಾಚಿತ್ರದೊಂದಿಗೆ ವರದಿಯಾಗುವಂತೆ ಸಹಕರಿಸಿ ಪ್ರೋತ್ಸಾಹಿಸಬೇಕೆಂದು ತಮ್ಮಲ್ಲಿ ಕೋರುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಡಾ. ಸಿ. ಸೋಮಶೇಖರ, ಭಾ.ಆ.ಸೇ (ನಿ) ಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation