Posts

Showing posts from June, 2023

ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

Image
 *ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು:* ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಹಸಿವು ಮುಕ್ತ ರಾಜ್ಯ ಮಾಡಲು ನಾವು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಅಡ್ಡಿಪಡಿಸಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ನಾವು ಬೇರೆ ರಾಜ್ಯಗಳಿಂದ ಖರೀದಿ ಮಾಡಿ ನೀಡುತ್ತೇವೆ.  ಅದಕ್ಕೆ ಸರ್ಕಾರ ಹಾಗೂ ಮಂತ್ರಿಗಳು ಬೇರೆ ರಾಜ್ಯಗಳ ಜೊತೆ ಸಂಪರ್ಕ ಮಾಡುತ್ತಿದ್ದಾರೆ.  5 ಕೆ.ಜಿ ಯಷ್ಟು ನೀಡಲು ನಮ್ಮ ಬಳಿ ಅಕ್ಕಿ ಇದೆ. ಉಳಿದ 5 ಕೆ ಜಿಗೆ ಹೊಂದಿಸುತ್ತಿದ್ದೇವೆ. ಕೆಲವರು ನಮಗೆ ಅಕ್ಕಿ ಬದಲು ರಾಗಿ, ಜೋಳ ಕೇಳುತ್ತಿದ್ದಾರೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಬಡವರ ಅನ್ನದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನ ಮುಂಬರುವ ಸಂಸತ್, ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ನಾವು ಪುಕ್ಸಟ್ಟೆ ಅಕ್ಕಿ ನೀಡಿ ಎಂದು ಕೇಳುತ್ತಿಲ್ಲ. ಆದರೂ ಅವರು ತಮ್ಮ ನೀತಿ ಬದಲಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ನಮ್ಮ ಮೇಲೆ ಜನರನ್ನು ಎತ್ತಿಕಟ್ಟಲು ಕೇಂದ್ರ ಈ ರೀತಿ ಮಾಡಿದ್ದಾರೆ. ಜನ ಕೇಂದ್ರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಯಡಿಯೂರಪ್ಪ ಅ...

ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ.. 2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?

Image
  ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ.. 2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?   ಬೆಂಗಳೂರು :   ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಮಹಿಳೆಯರೇ ಬಂತು ಬಂಪರ್​ ಟೈಂ, 2000 ರೂ.ಗೆ ನಾಳೆಯೇ ಅರ್ಜಿ ಸಲ್ಲಿಸಿ. ನಾಳೆ ಮಧ್ಯಾಹ್ನ 1.30ರಿಂದಲೇ ಅರ್ಜಿ ಹಾಕ್ಬೋದು.  ಸಿಎಂ ಸಿದ್ದರಾಮಯ್ಯನವರು ನಾಳೆ ಶಕ್ತಿ ಭವನದಲ್ಲಿ ಚಾಲನೆ ಕೊಡುತ್ತಾರೆ.  2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..? ನಾಳೆ ಮಧ್ಯಾಹ್ನ 1.30ಕ್ಕೆ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದ್ದಾರೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಚಾಲನೆ ನೀಡಲಿದ್ದಾರೆ. ಶಕ್ತಿಭವನದಲ್ಲಿ ಸೇವಾ ಸಿಂಧು ವೆಬ್​ಪೋರ್ಟಲ್​ ಸಿಎಂರಿಂದ ಲಾಂಚ್ ಮಾಡಲಿದ್ದಾರೆ. ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇಲ್ಲ,ಯಾವಾಗ ಬೇಕಾದ್ರೂ ಅರ್ಜಿ ಸಲ್ಲಿಸಬಹುದು. ಅರ್ಜಿಯ ಸಲ್ಲಿಕೆಗೆ ಯಾವುದೇ ಶುಲ್ಕ ಇಲ್ಲ , ಆ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಿದ್ಧಾರೆ.   BPL, APL, ಅಂತ್ಯೋದಯ ಕಾರ್ಡ್​ದಾರರಿಗೆ ಲಾಭ ಪಡೆಯುತ್ತಾರೆ.  ಬರೋಬ್ಬರಿ 1.23 ಕೋಟಿ ಮಹಿಳೆಯರಿಗೆ  ಲಾಭ ...

ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ

Image
  ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಡಿಗನಹಳ್ಳಿ* ಇವರ ಸಂಯುಕ್ತ ಆಶ್ರಯದಲ್ಲಿ  ಚೊಕ್ಕಹಳ್ಳಿ  ಕೈಗಾರಿಕಾ ಪ್ರದೇಶದ  ಫೈಕಾಂ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ 2023 ರ " *ವಿಶ್ವ ಪರಿಸರ ದಿನ* " ದ ಅಂಗವಾಗಿ " *ರಕ್ತದಾನ ಶಿಬಿರ* " ವನ್ನು ಆಯೋಜಿಸಲಾಗಿತ್ತು.  ರಕ್ತದಾನ ಶಿಬಿರವನ್ನು  ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ನ ಅಧ್ಯಕ್ಷರಾದ *ಶ್ರೀ ಕೃಷ್ಣಪ್ಪ* ರವರು ಹಾಗೂ ಸದಸ್ಯರುಗಳು , *ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್* ರವರು ಜಂಟಿಯಾಗಿ ಸಸಿಗಳಿಗೆ ನೀರು ಉಣಿಸುವುದರ ಮೂಲಕ  ಉದ್ಘಾಟಿಸಿದರು.  ಶಿಬಿರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಮಾತನಾಡುತ್ತಾ ಜಗತ್ತಿನ *ವೈದ್ಯಕೀಯ ರಂಗದಲ್ಲಿ ಒಬ್ಬರ ರಕ್ತವನ್ನು ಇನ್ನೊಬ್ಬರ ದೇಹಕ್ಕೆ ವರ್ಗಾಯಿಸುವ ಪ್ರಕ್ರಿಯೆಯೇ ಮಹತ್ತರವಾದ ಅನ್ವೇಷಣೆ* ಮತ್ತು *ರಕ್ತದಾನ - ಶ್ರೇಷ್ಠದಾನ*  ಎಂದೂ, ರಕ್ತಕ್ಕೆ ಪರ್ಯಾಯವಾದ ಇನ್ನೊಂದು ವಸ್ತುವಿಲ್ಲವೆಂದು ಹಾಗಾಗಿ ಸಾರ್ವಜನಿಕರು  ಮುಕ್ತವಾಗಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತರಾಗಿ  ...

ಎಚ್.ಎಸ್.ಆರ್ ಬಡಾವಣೆಯಲ್ಲಿ “ಶ್ರೀ ಗಣೇಶ್ ಡೈಮಂಡ್ ಅಂಡ್ ಜುವೆಲ್ಲರಿ” ಆಭರಣ ಮಳಿಗೆ ಶುಭಾರಂಭ: ಮಹಿಳಾ ಗ್ರಾಹಕರಿಗೆ ಉದ್ಘಾಟನೆ

Image
 ಎಚ್.ಎಸ್.ಆರ್ ಬಡಾವಣೆಯಲ್ಲಿ “ಶ್ರೀ ಗಣೇಶ್ ಡೈಮಂಡ್ ಅಂಡ್ ಜುವೆಲ್ಲರಿ” ಆಭರಣ ಮಳಿಗೆ ಶುಭಾರಂಭ: ಮಹಿಳಾ ಗ್ರಾಹಕರಿಗೆ ಉದ್ಘಾಟನೆ ಬೆಂಗಳೂರು, ಜೂ, 3; ನಗರದ ಎಚ್.ಎಸ್.ಆರ್. ಬಡಾವಣೆಯಲ್ಲಿ ನವ ನವೀನ ವಿನ್ಯಾಸಗಳು, ಹಲವು ವಿಭಿನ್ನ ವಿನ್ಯಾಸಗಳ ವೈಶಿಷ್ಟ್ಯಗಳನ್ನೊಳಗೊಂಡ “ಶ್ರೀ ಗಣೇಶ ಡೈಮಂಡ್ ಅಂಡ್ ಜುವೆಲ್ಲರಿ” ಆಭರಣ ಮಳಿಗೆ ಶುಭಾರಂಭವಾಗಿದೆ. ಎಚ್.ಎಸ್.ಆರ್. ಬಡಾವಣೆಯ 7 ನೇ ಸೆಕ್ಟರ್ ನ 17 ನೇ ಅಡ್ಡ ರಸ್ತೆಯಲ್ಲಿ ಮಹಿಳಾ ಗ್ರಾಹಕರಾದ ಸವಿತಾ ರೆಡ್ಡಿ, ವಿಜಯ ಲಕ್ಷ್ಮಿ ಆನಂದ್, ರಾಧಾ ಕೊಲ್ಲಿ ಅವರು ಆಭರಣ ಮಳಿಗೆಗೆ ಚಾಲನೆ ನೀಡಿದರು. ಶುಭಾರಂಭದ ಸಂದರ್ಭದಲ್ಲಿ 50 ಸಾವಿರ ರೂ ಗೆ ಅಧಿಕ ಮೊತ್ತದ ಆಭರಣ ಖರೀದಿ ಮಾಡಿದರೆ ಒಂದು ಗ್ರಾಂ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡುವುದಾಗಿ ಆಭರಣ ಮಳಿಗೆ ಮಾಲೀಕರಾದ ವಿಮಲ್ ಜೈನ್ ಮತ್ತು ಮನಿಶಾ ಜೈನ್ ಘೋಷಿಸಿದರು. ಪ್ರಾಚೀನ ಕಾಲದ, ಮದುವೆ ಮತ್ತಿತರ ಆಧುನಿಕ ವಿನ್ಯಾಸಗಳ ಆಭರಣಗಳನ್ನು  ಈ ಮಳಿಗೆ ಒಳಗೊಂಡಿದೆ. “ಶ್ರೀ ಗಣೇಶ ಡೈಮಂಡ್ ಅಂಡ್ ಜುವೆಲ್ಲರಿ” ಮಳಿಗೆ 1969 ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ರಾಜಾಜಿನಗರ, ಸದಾಶಿವ ನಗರ, ಬಸವೇಶ್ವರ ನಗರ ಮತ್ತಿತರ ಕಡೆಗಳಲ್ಲಿ ಅತ್ಯುತ್ತಮ ಗ್ರಾಹಕ ಸ್ನೇಹಿಯಾಗಿ ಆಭರಣ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.

BJP : ಮಾತಿಗೆ ತಪ್ಪಿರುವ ಕಾಂಗ್ರೆಸ್, ಗ್ಯಾರೆಂಟಿಯಲ್ಲಿ ದೊಖಾ….!

Image
BJP : ಮಾತಿಗೆ ತಪ್ಪಿರುವ ಕಾಂಗ್ರೆಸ್, ಗ್ಯಾರೆಂಟಿಯಲ್ಲಿ ದೊಖಾ….! POLATICAL   STATE June 2, 2023 Web Desk Leave A Comment On BJP : ಮಾತಿಗೆ ತಪ್ಪಿರುವ ಕಾಂಗ್ರೆಸ್, ಗ್ಯಾರೆಂಟಿಯಲ್ಲಿ ದೊಖಾ….! ಮಾತಿಗೆ ತಪ್ಪಿರುವ ಕಾಂಗ್ರೆಸ್, ಗ್ಯಾರೆಂಟಿಯಲ್ಲಿ ದೊಖಾ: ಬಸರಾಜ ಬೊಮ್ಮಾಯಿ ಕಾಂಗ್ರೆಸ್ ನಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ : ಬೆಂಗಳೂರು: ಉಚಿತ ಗ್ಯಾರೆಂಟಿ ಯೋಜನೆಗಳ ಜಾರಿಗೊಳಿಸುವ ವಿಚಾರದಲ್ಲಿ ಮಾತಿಗೆ ತಪ್ಪಿರುವ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಗಿದ್ದು, ಗ್ಯಾರೆಂಟಿ ಯೋಜನೆ ಜಾರಿ ಮಾಡಲು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಜನರಿಗೆ ಬಹಳಷ್ಟು ಭರವಸೆ ತೋರಿಸಿತ್ತು. ಆದರೆ, ಜನರ ನಿರೀಕ್ಷೆಗಳನ್ನು ದೊಡ್ಡ ಮಟ್ಟದಲ್ಲಿರಿಸಿಕೊಂಡು ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ, ಚುನಾವಣೆ ಪೂರ್ವ ಮಾತಿಗೂ ಚುನಾವಣೆ ನಂತರದ ಮಾತಿಗೂ ಬಹಳ ವ್ಯತ್ಯಾಸ ಇದೆ. ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಅಂತ ಹೇಳಿದ್ದಾರೆ. ಗ್ಯಾರೆಂಟಿ ಕಾರ್ಡ್ ನಲ್ಲಿಯೂ ಅದೇ ರೀತಿ ಹೇಳಿದ್ದಾರೆ. ಒಂದು ಮನೆಯಲ್ಲಿ 70 ಯೂನಿಟ್ ಅಥವಾ 80 ಯೂನಿಟ್ ಬಳಕೆ ಮಾಡಬಹುದು. 200 ಯೂನಿಟ್ ಬಳಕೆ ಮಾಡಿದರೆ ಉಚಿತ ಕೊಡಬೇಕು. ಆದರೆ, ಇವತ್ತಿನ ಮುಖ್ಯ...

ವೀರಶೈವ ಲಿಂಗಾಯಿತ ಉಪಪಂಗಡಗಳಿಗೆ ಕೇಂದ್ರ ಒಬಿಸಿ ಮೀಸಲಾತಿಗೆ ಅಗ್ರಹಿಸಿ ಮಠಾಧೀಶರಿಂದ ಒತ್ತಾಯ*

Image
 * ವೀರಶೈವ ಲಿಂಗಾಯಿತ ಉಪಪಂಗಡಗಳಿಗೆ ಕೇಂದ್ರ ಒಬಿಸಿ ಮೀಸಲಾತಿಗೆ ಅಗ್ರಹಿಸಿ ಮಠಾಧೀಶರಿಂದ ಒತ್ತಾಯ* ಬೆಂಗಳೂರು,ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಕೇಂದ್ರ ಒಬಿಸಿ ಮೀಸಲಾತಿಯಲ್ಲಿ ಎಲ್ಲ ವೀರಶೈವ ಲಿಂಗಾಯಿತ ಉಪಪಂಗಡಗಳನ್ನು ಒಟ್ಟಾಗಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವ ಸಲ್ಲಿಸುವ ಕುರಿತು ವೀರಶೈವ ಲಿಂಗಾಯಿತ ಮಠಾಧೀಶರ ವೇದಿಕೆ ವತಿಯಿಂದ ಬೃಹತ್ ಮಾಧ್ಯಮಗೋಷ್ಟಿ *ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚನ್ನಸಿದ್ದರಾಮ ಪಂಡಿತರಾಧ್ಯ ಸ್ವಾಮೀಜಿಗಳು, ಕಾಶಿ ಪೀಠದ  ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ವಿಭೂತಿಪುರಮಠದ ಶ್ರೀ ಶ್ರೀ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವೀರಶೈವ ಲಿಂಗಾಯಿತ ನಿಗಮದ ಮಾಜಿ ಅಧ್ಯಕ್ಷರಾದ ಪರಮಶಿವಯ್ಯ,ನ್ಯಾಯವಾಧಿ ಗಂಗಾಧರ್ ಗುರುಮಠ್ ರವರು* ದೀಪ ಬೆಳಗಿಸಿ ಮಾಧ್ಯಮಗೋಷ್ಟಿಗೆ ಚಾಲನೆ ನೀಡಿದರು. 100ಕ್ಕೂ ಹೆಚ್ಚು ಮಠಾದೀಶರುಗಳು ಪಾಲ್ಗೊಂಡಿದ್ದರು. *ಶ್ರೀ ಶ್ರೀ ಶ್ರೀ ಚನ್ನಸಿದ್ದರಾಮ ಪಂಡಿತರಾದ್ಯ ಸ್ವಾಮೀಜಿರವರು* ಮಾತನಾಡಿ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯಿತ ಸಮಾಜದ ಉಪಪಂಗಡಗಳನ್ನು ಸೇರಿಸಲು ಕೇಂದ್ರ ಸರ್ಕಾರ ಒತ್ತಾಯಿಸಲು ಸಭೆಯನ್ನು ಆಯೋಜಿಸಲಾಗಿದೆ.  ವೀರಶೈವ ಲಿಂಗಾಯಿತ ಧರ್ಮ ವೃತ್ತಿ ಆಧಾರಿತ ಉಪಪಂಗಡಗಳ ಇರುವ ಧರ್ಮ. ಸಾಮಾಜಿಕ ಮತ್ತು ಆರ್ಥಿಕ,ಶೈಕ್ಷಣಿಕ ವ್ಯವಸ್ಥೆ ಹೇಗಿದೆ ಚಿನ್ನಪ್ಪರೆಡ್ಡಿ ಆಯೋಗ ವರ...