ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ

 ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ

ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಡಿಗನಹಳ್ಳಿ* ಇವರ ಸಂಯುಕ್ತ ಆಶ್ರಯದಲ್ಲಿ  ಚೊಕ್ಕಹಳ್ಳಿ  ಕೈಗಾರಿಕಾ ಪ್ರದೇಶದ  ಫೈಕಾಂ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ 2023 ರ " *ವಿಶ್ವ ಪರಿಸರ ದಿನ* " ದ ಅಂಗವಾಗಿ " *ರಕ್ತದಾನ ಶಿಬಿರ* " ವನ್ನು ಆಯೋಜಿಸಲಾಗಿತ್ತು.


 ರಕ್ತದಾನ ಶಿಬಿರವನ್ನು  ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ನ ಅಧ್ಯಕ್ಷರಾದ *ಶ್ರೀ ಕೃಷ್ಣಪ್ಪ* ರವರು ಹಾಗೂ ಸದಸ್ಯರುಗಳು , *ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್* ರವರು ಜಂಟಿಯಾಗಿ ಸಸಿಗಳಿಗೆ ನೀರು ಉಣಿಸುವುದರ ಮೂಲಕ  ಉದ್ಘಾಟಿಸಿದರು.


 ಶಿಬಿರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಮಾತನಾಡುತ್ತಾ ಜಗತ್ತಿನ *ವೈದ್ಯಕೀಯ ರಂಗದಲ್ಲಿ ಒಬ್ಬರ ರಕ್ತವನ್ನು ಇನ್ನೊಬ್ಬರ ದೇಹಕ್ಕೆ ವರ್ಗಾಯಿಸುವ ಪ್ರಕ್ರಿಯೆಯೇ ಮಹತ್ತರವಾದ ಅನ್ವೇಷಣೆ* ಮತ್ತು *ರಕ್ತದಾನ - ಶ್ರೇಷ್ಠದಾನ*  ಎಂದೂ, ರಕ್ತಕ್ಕೆ ಪರ್ಯಾಯವಾದ ಇನ್ನೊಂದು ವಸ್ತುವಿಲ್ಲವೆಂದು ಹಾಗಾಗಿ ಸಾರ್ವಜನಿಕರು  ಮುಕ್ತವಾಗಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತರಾಗಿ  ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತ ಇಂದಿನ ಮತ್ತು *ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ* ಎಂದು ತಿಳಿಸುತ್ತಾ, *ಪ್ಲಾಸ್ಟಿಕ್ ಮುಕ್ತ ಸಮಾಜ* ಕ್ಕಾಗಿ ಕರೆ ನೀಡಿದರು.


 ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫೋರಂ ನ ಅಧ್ಯಕ್ಷರಾದ *ಶ್ರೀ ಕೃಷ್ಣಪ್ಪರವರು*    ತಾಲೂಕು ಆರೋಗ್ಯ ಇಲಾಖೆ  ಕಾರ್ಯಕ್ಷಮತೆಯನ್ನು ಪ್ರಶಂಸಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳುವ  ಆರೋಗ್ಯ ಇಲಾಖೆ ಯ ಯಾವುದೇ ಕಾರ್ಯಕ್ರಮಗಳಿಗೆ ತಾವು *ಶೇಕಡ 100 ರಷ್ಟು*  ಸಹಕರಿಸುವುದಾಗಿ ಭರವಸೆ ನೀಡಿದರು.


 ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಬೆಂಡಿಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಶಿವಕುಮಾರ್* ರವರು ರಕ್ತದಾನದ ಬಗ್ಗೆ ಸಾರ್ವಜನಿಕರಿಗೆ ಇರುವ ತಪ್ಪು ಕಲ್ಪನೆ ಹಾಗೂ ರಕ್ತದಾನಕ್ಕೆ ಬೇಕಾದ  *ವೈದ್ಯಕೀಯ ಅರ್ಹತೆ* ವಿಷಯಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು.


 ಸದರಿ ರಕ್ತದಾನ ಶಿಬಿರಕ್ಕೆ  ಬೆಂಗಳೂರು ಸರ್ ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ  ವಿಭಾಗದ ಮುಖ್ಯಸ್ಥರಾದ  *ಡಾ. ಶೀಲಾ  ಮತ್ತು ಸುನಿಲ್ ಆಚಾರ್ಯರ* ತಂಡ ಆಂಬುಲೆನ್ಸ್ ವಾಹನದೊಂದಿಗೆ ಆಗಮಿಸಿ, ಶಿಷ್ಟಾಚಾರದಂತೆ ಕ್ರಮಬದ್ಧವಾಗಿ  ರಕ್ತ ಸಂಗ್ರಹಿಸಿ, ಅಭಿನಂದನ  ಪ್ರಮಾಣ ಪತ್ರವನ್ನು ರಕ್ತ ದಾನಿಗಳಿಗೆ  ನೀಡಿ ಗೌರವಿಸಿದರು.


 ಕಾರ್ಯಕ್ರಮದಲ್ಲಿ   ಹೊಸಕೋಟೆ ತಾಲೂಕು ಕ್ಷಯ ರೋಗ ವಿಭಾಗದ ಮುಖ್ಯಸ್ಥರಾದ *ಶ್ರೀ ಸುದೀಪ್* ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ *ಶ್ರೀಮತಿ ಸುಧಾ, ಶ್ರೀಮತಿ ಶಿವಗಂಗಾ, ಶ್ರೀಮತಿ ಕುಮಾರಿ*  ಆಶಾ ಕಾರ್ಯಕರ್ತೆಯರಾದ *ಶ್ರೀಮತಿ ಜಯಮ್ಮ ಶ್ರೀಮತಿ ಶೈಲ* ಸೇರಿದಂತೆ  ಹೊಸಕೋಟೆ  ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ಸದಸ್ಯರುಗಳಾದ   *ಶ್ರೀ ಗಣೇಶ್ ಪೈ, ಶ್ರೀಮತಿ ವಿನುತಾ,  ಶ್ರೀ ಚಂದ್ರಶೇಖರ್, ಶ್ರೀ ಸುರೇಶ ನಾಥ್* ಹಾಜರಿದ್ದರು.


 ಸದರಿ ರಕ್ತದಾನ ಶಿಬಿರದಲ್ಲಿ *ಒಟ್ಟು 54( ಐವತ್ತ ನಾಲ್ಕು ) ಯೂನಿಟ್*  (350 ಎಮ್ ಲ್ ರಂತೆ  ) ರಕ್ತ ಸಂಗ್ರಹಿಸಲಾಯಿತು.


 ಶಿಬಿರದಲ್ಲಿ ಪಾಲ್ಗೊಂಡ ಸರ್ವರಿಗೂ *ಹಣ್ಣುಗಳು, ಬಾದಾಮಿ ಹಾಲು  ಮತ್ತು ಊಟ* ದ ವ್ಯವಸ್ಥೆಯನ್ನು  ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫೋರಂ ರವರು ಆಯೋಜಿಸಿದ್ದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims