Skip to main content

ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ.. 2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?

 

ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ.. 2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?


ಬೆಂಗಳೂರು :  ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಮಹಿಳೆಯರೇ ಬಂತು ಬಂಪರ್​ ಟೈಂ, 2000 ರೂ.ಗೆ ನಾಳೆಯೇ ಅರ್ಜಿ ಸಲ್ಲಿಸಿ. ನಾಳೆ ಮಧ್ಯಾಹ್ನ 1.30ರಿಂದಲೇ ಅರ್ಜಿ ಹಾಕ್ಬೋದು.  ಸಿಎಂ ಸಿದ್ದರಾಮಯ್ಯನವರು ನಾಳೆ ಶಕ್ತಿ ಭವನದಲ್ಲಿ ಚಾಲನೆ ಕೊಡುತ್ತಾರೆ.  2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?

ನಾಳೆ ಮಧ್ಯಾಹ್ನ 1.30ಕ್ಕೆ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದ್ದಾರೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಚಾಲನೆ ನೀಡಲಿದ್ದಾರೆ. ಶಕ್ತಿಭವನದಲ್ಲಿ ಸೇವಾ ಸಿಂಧು ವೆಬ್​ಪೋರ್ಟಲ್​ ಸಿಎಂರಿಂದ ಲಾಂಚ್ ಮಾಡಲಿದ್ದಾರೆ. ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇಲ್ಲ,ಯಾವಾಗ ಬೇಕಾದ್ರೂ ಅರ್ಜಿ ಸಲ್ಲಿಸಬಹುದು. ಅರ್ಜಿಯ ಸಲ್ಲಿಕೆಗೆ ಯಾವುದೇ ಶುಲ್ಕ ಇಲ್ಲ , ಆ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಿದ್ಧಾರೆ.  

BPL, APL, ಅಂತ್ಯೋದಯ ಕಾರ್ಡ್​ದಾರರಿಗೆ ಲಾಭ ಪಡೆಯುತ್ತಾರೆ.  ಬರೋಬ್ಬರಿ 1.23 ಕೋಟಿ ಮಹಿಳೆಯರಿಗೆ  ಲಾಭ  ಸಿಗಲಿದೆ. ವರ್ಷಕ್ಕೆ 30,000 ಕೋಟಿ ಗೃಹಲಕ್ಷ್ಮಿಗೆ ಬೇಕಾಗಬಹುದು.  ಆಧಾರ್​​ ಕಾರ್ಡ್​, ರೇಷನ್​ ಕಾರ್ಡ್ ಇದ್ದರೆ ಸಾಕು, ಆನ್​ಲೈನ್​​ನಲ್ಲಾದ್ರೂ ಅರ್ಜಿ ಹಾಕಿ. ಖುದ್ದಾಗಿ ಹೋಗಿ ಬೇಕಾದ್ರೂ ಅರ್ಜಿ ಸಲ್ಲಿಸಬಹುದು. 

ಏನ್​​ ದಾಖಲೆ ಬೇಕು..?

  • ನಾಳೆ ಮಧ್ಯಾಹ್ನದಿಂದಲೇ ಅರ್ಜಿ ಹಾಕಬಹುದು.
  • ಅರ್ಜಿ ಆನ್​​ಲೈನ್​​​​, ಆಫ್​ಲೈನ್​​​​ನಲ್ಲಿ ಹಾಕಬೇಕು.
  • ಸೇವಾ ಸಿಂಧು ಪೋರ್ಟಲ್​​, ಗ್ರಾಮ ಒನ್​​, ಬೆಂಗಳೂರು ಒನ್​​​ನಲ್ಲಿ ಅರ್ಜಿ.
  • ನಿಮ್ಮ ಮೊಬೈಲ್​​ನಲ್ಲೂ ಆಟೋ ಜನರೇಟ್ ಸ್ವೀಕೃತಿ ಲಭ್ಯ.
  • ಅರ್ಜಿದಾರರು, ಪತಿಯ ಆಧಾರ್​ ಕಾರ್ಡ್ ಬೇಕು.
  • ಆಧಾರ್​ ಲಿಂಕ್​ ಇರುವ ಮೊಬೈಲ್​ ಸಮೇತ ಸೆಂಟರ್​ಗೆ ಹೋಗಿ.
  • ಮಂಜೂರಾತಿ ನಂತರ DBT ಮೂಲಕ ಹಣ ವರ್ಗಾವಣೆ.
  • ಅರ್ಜಿ ಸಲ್ಲಿಕೆಗೆ ಹಣ ಪಾವತಿ ಮಾಡುವಂತಿಲ್ಲ.
  • ಮಹಿಳೆಯು ತನ್ನ ಬ್ಯಾಂಕ್​ ಖಾತೆ ವಿವರ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಲ್ಲವೇ ಇಲ್ಲ.
  • ಹೆಲ್ಪ್​ಲೈನ್​​ 1902ಗೆ ಸಂಪರ್ಕಿಸಿ ಮಾಹಿತಿ ತಿಳಿಯಿರಿ.
  • ವರ್ಷ ಪೂರ್ತಿ ಅರ್ಜಿ ಸಲ್ಲಿಕೆ ಮಾಡಬಹುದು.
  •  ಅರ್ಜಿ ಸ್ವೀಕಾರ ಆದ ಕೂಡಲೇ ಅಕೌಂಟ್​ಗೆ ಹಣ.
  •  ಆಗಸ್ಟ್​​​ 17 ಅಥವಾ 18ರಂದು ಚಾಲನೆ.
  • ಟ್ಯಾಕ್ಸ್ ಕಟ್ಟುವವರು ಬಿಟ್ಟು ಎಲ್ಲರಿಗೂ ಸೌಲಭ್ಯ.
  • ಪತಿ ತೆರಿಗೆದಾರರಾಗಿದ್ದರೆ ಪತ್ನಿಗೆ 2000 ಹಣ ಸಿಗಲ್ಲ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims