ಶಾಸಕ ಎನ್.ಎ.ಹ್ಯಾರೀಸ್ ವಿರುದ್ದ ಬೃಹತ್ ಪ್ರತಿಭಟನೆ*

 *ಶಾಸಕ ಎನ್.ಎ.ಹ್ಯಾರೀಸ್ ವಿರುದ್ದ ಬೃಹತ್ ಪ್ರತಿಭಟನೆ*







ಶಾಂತಿನಗರ: ಜೋಗುಪಾಳ್ಯ ಹಲಸೂರು ಠಾಣೆ ಮುಂಭಾಗದಲ್ಲಿ ಹಿಂದೂಗಳ ಧಾರ್ಮಿಕ ಅಚರಣೆಯಾದ ಕರಗ ಮಹೋತ್ಸವ ಕುರಿತು ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎ.ಹ್ಯಾರೀಸ್ ರವರು ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಶಾಂತಿನಗರ ವಿಧಾನಸಭಾ ಬಿಜೆಪಿ ಮುಖಂಡರು ಮಾಜಿ ಮಹಾಪೌರರಾದ ಎಂ.ಗೌತಮ್ ಕುಮಾರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನಾರಾಯಣ್(ಗುಂಡಣ್ಣ) ಹಾಗೂ  ನೂರಾರು ಬಿಜೆಪಿ ಪ್ರಮುಖರು ಮುಖಂಡರು, ಕಾರ್ಯಕರ್ತರು, ಪಾದಯಾತ್ರೆ ಮೂಲಕ ಹಲಸೂರು ಪೊಲೀಸ್ ಬಳಿ ಠಾಣೆ ಬಳಿ ಬಂದು ಮೌನ ಪ್ರತಿಭಟನೆ ಮಾಡಿದರು.

*ಎಂ.ಗೌತಮ್ ಕುಮಾರ್ ರವರು* ಮಾತನಾಡಿ ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ದ ಬೆಂಗಳೂರು ಕರಗ ಹಿಂದೂಗಳ ಪಾಲಿಗೆ ಆರಾದ್ಯ ದೈವವಾಗಿದೆ.

ನಮ್ಮ ಕರಗ ನೋಡಲು ಎಲ್ಲ ಧರ್ಮ,ವರ್ಗದ ಜನರು ಆಗಮಿಸುತ್ತಾರೆ.

ಕರಗದ ದೈವದ ಮೊರೆ ಹೋದ  ಕೊಟ್ಯಂತರ ಜನರು ತಮ್ಮ ಜೀವನದಲ್ಲಿ ಸುಖ,ಶಾಂತಿ ನೆಮ್ಮದ್ದಿ ಕಂಡು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.

ಶಾಸಕ ಹ್ಯಾರೀಸ್ ರವರು ಸವಿತಾ ಸಮಾಜದ ಕುರಿತು ಮತ್ತು ಮೇರುನಟ ಡಾ.ರಾಜ್ ಕುಮಾರ್ ರವರ ಕುರಿತು ಇದೀಗ ಕರಗ ಮಹೋತ್ಸವದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಕಾಮಗಾರಿಗಳ ಸಂದರ್ಭದಲ್ಲಿ ಪೂಜೆ ಮಾಡಬಾರದು ಹೀಗೆ ಹಲವಾರು ಹಿಂದೂ ವಿರೋಧಿ ನಿಲುವು ತಾಳಿದ್ದಾರೆ.

ಸತತವಾಗಿ ಹಿಂದೂಗಳ ವಿರುದ್ದ ಹೇಳಿಕೆ ನೀಡುತ್ತಿರುವ ಹ್ಯಾರೀಸ್ ರವರ ನಿಜಬಣ್ಣ ಬಯಲು ಮಾಡಲು ಪ್ರತಿಯೊಬ್ಬ ಹಿಂದುಗಳ ಮನೆಗಳಿಗೆ  ವಿಷಯ ತಲುಪಿಸಲಾಗುತ್ತದೆ

ಕರಗದ ದೈವ ಮಹಿಮೆ ಇತಿಹಾಸದ ಕುರಿತು ಅರಿವು ಇಲ್ಲದ ಶಾಸಕ ಎನ್.ಎ.ಹ್ಯಾರೀಸ್ ಅವಹೇಳನಕಾರಿ ಮಾತನಾಡಿರುವುದು ಅಕ್ಷಮ್ಯ ಅಪರಾಧ.

ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಶಾಸಕರ ವಿರುದ್ದ ಕೇಸ್ ದಾಖಲಿಸಿ ಬಂಧಿಸಬೇಕು ಅಗ್ರಹಿಸುತ್ತೇವೆ ಎಂದು ಹೇಳಿದರು.

ಕೆ.ಎಸ್.ಎಸ್.ಅಧ್ಯತ್ಷರಾದ ಪ್ರಕಾಶ್ ರಾಜು,ಕೇಂದ್ರ ಜಿಲ್ಲಾ ಭಾಜಪ  ಕಾರ್ಯದರ್ಶಿಯದುಕುಮಾರ್ ಗೌಡ,,ಗೀತಾ ರಾಜಶೇಖರ್, ಕೋದಂಡ, ಕುಪ್ಪಸ್ವಾಮಿ ,ರವರು ಪಾಲ್ಗೊಂಡಿದ್ದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims