Skip to main content

ರಾಜಕೀಯ ಪಕ್ಷಗಳ ವಿರುದ್ಧ ತಿಗಳ ಸಮುದಾಯ ಆಕ್ರೋಶ..! 10 ಟಿಕೆಟ್ ನೀಡುವಂತೆ ಒತ್ತಾಯ

 

ಬೆಂಗಳೂರು: ಮೂರು ರಾಜಕೀಯ ಪಕ್ಷಗಳ ವಿರುದ್ಧ ತಿಗಳ ಸಮುದಾಯ ಆಕ್ರೋಶ ಹೊರ ಹಾಕಿದ್ದು, 3 ಪಕ್ಷಗಳಲ್ಲಿ ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಿ ಎಂದು ಒತ್ತಾಯ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ 10ಟಿಕೆಟ್ ನೀಡಬೇಕು. 10 ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರೇ ನಿರ್ಣಾಯಕ ಮತದಾರರು. ರಾಜ್ಯದಲ್ಲಿ ನಮ್ಮ‌ ಸಮುದಾಯದ 40 ಲಕ್ಷ ಮತದಾರರಿದ್ದೇವೆ. ನಮ್ಮ ಸಮುದಾಯದವರಿಗೆ ಯಾವ ಪಕ್ಷ ಟಿಕೆಟ್ ಕೊಡುತ್ತೋ. ಅವರ ಜೊತೆ 40 ಲಕ್ಷ ತಿಗಳ ಸಮುದಾಯದವರು ಇರುತ್ತೆವೆ.

ರಾಜಕೀಯವಾಗಿ ನಮಗೆ ಸ್ಥಾನಮಾನ ಸಿಕ್ಕರೆ ನಮ್ಮ ಸಮುದಾಯದ ಅಭಿವೃದ್ಧಿಯಾಗುತ್ತದೆ. ಹೀಗಾಗಿ ನಮ್ಮ ಸಮುದಾಯಕ್ಕೆ ಮೂರು ಪಕ್ಷಗಳು ಟಿಕೆಟ್ ಕೊಡಬೇಕೆಂದು ವಿಶ್ವ ಕ್ಷತ್ರೀಯ ಮಹಾ ಸಂಸ್ಥಾನದ ಅಧ್ಯಕ್ಷ ಸೂರ್ಯಪ್ರಕಾಶ್ ಆಗ್ರಹಿಸಿದ್ದಾರೆ. ಅಲ್ಲದೇ ಚಿಕ್ಕಪೇಟೆ ಯಿಂದ PR ರಮೇಶ್ ಗೆ ಕಾಂಗ್ರೆಸ್ ಟಿಕೆಟ್, ರಾಜಾಜಿನಗರ ದಿಂದ ನೆ.ಲ ನರೇಂದ್ರ ಬಾಬುಗೆ ಬಿಜೆಪಿ ಟಿಕೆಟ್, ಹಾಗೂ ರಾಮನಗರದಲ್ಲಿ ಡಿ.ನರೇಂದ್ರಗೆ ಬಿಜೆಪಿ ಟಿಕೆಟ್, ಮಾಲೂರಿನಿಂದ ಹೂಡಿ ವಿಜಯ್ ಕುಮಾರ್ ಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮಾಧ್ಯಮಗಳ ಮೂಲಕ ಒತ್ತಾಯ ಮಾಡಿದ್ದಾರೆ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation