ಆನೆ ಕಾರಿಡಾರ್ ಯೋಜನೆಗೆ ಸೂಕ್ತ ಅರಣ್ಯ ಪ್ರದೇಶ ಗುರುತಿಗೆ ಮಾತೃ ಭೂಮಿ ಕನ್ನಡ ಸಂಘ ಆಗ್ರಹ
, ಆನೆ ಕಾರಿಡಾರ್ ಯೋಜನೆಗೆ ಸೂಕ್ತ ಅರಣ್ಯ ಪ್ರದೇಶ ಗುರುತಿಗೆ ಮಾತೃ ಭೂಮಿ ಕನ್ನಡ ಸಂಘ ಆಗ್ರಹ
ಬೆಂಗಳೂರು ಜನಮ 26; ಮಲೆನಾಡು ಭಾಗದ ಹಾಸನ ಚಿಕ್ಕಮಗಳೂರು ಭಾಗದಲ್ಲಿ ಆನೆಗಳ ಹಾವಳಿಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು.ಆನೆ ಕಾರಿಡಾರ್ ನಿರ್ಮಾಣಕ್ಕೆ ಸೂಕ್ತ ಆರಣ್ಯ ಪ್ರದೇಶವನ್ನು ಗುರುತಿಸಬೇಕೆಂದು ಜೈ ಕರುನಾಡು ಮಾತೃ ಭೂಮಿ ಸಂಘ ಆಗ್ರಹಿಸಿದೆ.
ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವಿರೂಪಾಕ್ಷ ಈ.ಈ.ಆನೆ ಕಾರಿಡಾರ್ ಯೋಜನೆ ಸರಿಯಾದ ರೀತಿ ಇದುವರೆಗೂ ಅನುಷ್ಠಾನಗೊಳಿಸಿಲ್ಲ ಇದಕ್ಕಾಗಿ ಬಿಡುಗಡೆ ಮಾಡಿರುವ ಸರಿಯಾದ ರೀತಿ ಬಳಕೆಯಾಗಿದ್ದೇಯೆ ಎಂದು ಪ್ರಶ್ನಿಸಿದ ಅವರು ಆನೆ ಕಾರಿಡಾರ್ ಪ್ರದೇಶ ಸೂಕ್ತ ಆರಣ್ಯ ಪ್ರದೇಶವನ್ನು ಗುರುತಿಸಬೇಕಿದೆ ಎಂದು ಹೇಳಿದರು.
ಕನ್ನಡ ಶಾಲೆಗಳು ಅವನತಿಯ ಹಾದಿಯಲ್ಲಿದ್ದು ಅವುಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿದೆ ರಾಜ್ಯ ರಾಜ್ಯ, ಸರ್ಕಾರದ ಈ ದೋರಣೆ ವಿರುದ್ಧ ಹೋರಾಟ ಮಾಡಲಾಗುವುದು. ಕನ್ನಡ ಶಾಲೆಗಳನ್ನು ಉಳಿಸಿ ಬೆಳಸುವುದು ಅಗತ್ಯವಾಗಿದೆ.ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ತಮಿಳುನಾಡಿನಲ್ಲಿ ಅಯ್ಯಪ್ಪದಾರಿ ಕನ್ನಡಿಗರ ಮೇಲೆ ನಡೆದಿರುವ ದಾಳಿ ಅತ್ಯಂತ ಖಂಡನೀಯ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ರಕ್ಷಣೆ ನೀಡುವುದು ಅಗತ್ಯವಾಗಿದೆ ಎಂದರು.
ಜೈ ಕರುನಾಡು ಮಾತೃ ಭೂಮಿ ಸಂಘ ಆನೇಕ ಕನ್ನಡ ಪರ ವಿಷಯಗಳನ್ನು ಇಟ್ಟುಕೊಂಡು ಉದಯಿಸಿದೆ.ಕನ್ನಡ ಭಾಷೆನೆಲ,ಜಲ ವಿಚಾರದಲ್ಲಿ ಯಾವುದೇ ತೊಂದರೆಯಾದಗ ಹೋರಾಟ ನಡೆಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ನಿರಂಜನ್ ಕುಮಾರ್, ನೆಲಮಂಗಲ ಅಧ್ಯಕ್ಷರಾದ ಮಂಜುನಾಥ್ ಮತ್ತಿತರರು ಹಾಜರಿದ್ದರು.

Comments
Post a Comment