Posts

ಪಾಲ್ತು ನಾಯಿ “ಬೋಂಗೋ” ಕಾಣೆ;ಹುಡುಕಿ ಕೊಟ್ಟವರಿಗೆ 25ಸಾವಿರ ರೂ.ಬಹುಮಾನ ಘೋಷಣೆ.

Image
  ಪಾಲ್ತು ನಾಯಿ “ಬೋಂಗೋ” ಕಾಣೆ;ಹುಡುಕಿ ಕೊಟ್ಟವರಿಗೆ 25ಸಾವಿರ ರೂ.ಬಹುಮಾನ ಘೋಷಣೆ. ಬೆಂಗಳೂರು ಡಿಸೆಂಬರ್ 9; ಪಾಲ್ತು ನಾಯಿ “ಬೋಂಗೋ” ಅನುಮಾನಾಸ್ಪವಾಗಿ ಕಾಣೆಯಾಗಿದ್ದು,ಪತ್ತೆ ಹಚ್ಚಿದವರಿಗೆ 25ಸಾವಿರ ರೂಪಾಯಿ  ಎಂದು ನಾಯಿ ವಾರಸುದಾರೆ ಸ್ವರ್ಣಿಮಾ ನಿಶಾಂತ್  ಘೋಷಣೆ ಮಾಡಿದ್ದಾರೆ.   ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಪ್ರಕರಣವನ್ನು ಅಧಿಕೃತವಾಗಿ ಬೆಂಗಳೂರು ಪುಟ್ಟನಹಳ್ಳಿ ಪೊಲೀಸ್ ಠಾಣೆಯಲ್ಲಿ 0277/2025 ಅಡಿಯಲ್ಲಿ ದೂರು ದಾಖಲಿಸಲಾಗಿದೆ.ಬೋಂಗೋ  ಶಿಶುವಾಗಿದ್ದಾಗ ಭಾರೀ ಗಾಯಗೊಂಡಿದ್ದ ಸ್ಥಿತಿಯಲ್ಲಿ ರಕ್ಷಿಸಲಾಗಿತ್ತು ಹಾಗೂ 2021ರಲ್ಲಿಅನೂಭವ್ ಕಬ್ರಾ, ಕೀರ್ತಿ ಲಾಭ್  ಅವರು ದತ್ತು ಪಡೆದಿದ್ದರು, ಸುಮಾರು ಐದು ವರ್ಷ ಮನೆಯಲ್ಲಿ ಬೆಳೆಸಿದ ನಂತರ,ಕಳೆದ ಆಗಸ್ಟ್ ಒಂದರಂದು  ಬೋಂಗೋ ಅವರನ್ನು ತೊರೆದು ಹೋಗಿದೆ,ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ, ಗೊಟ್ಟಿಗೆರೆ, ರಾಯಲ್ ಕೌಂಟಿ ರಸ್ತೆಯಲ್ಲಿ ಬೋಂಗೋ ಕಾಣೆಯಾದ ಬಗ್ಗೆ ತಿಳಿಸಿದ್ದಾರೆ. ಆ ದಿನದಿಂದ ಇಂದಿಗೂ ಬೋಂಗೋ ಇದುವರೆಗೂ ಪತ್ತೆಯಾಗಿಲ್ಲ, ಇದರ ಪತ್ತೆಗಾಗಿ ಮೂರು ತಿಂಗಳಿಗಿಂತ ಹೆಚ್ಚು ಸಮಯವಾಗಿದ್ದು, ಸ್ವಯಂಸೇವಕರು ಮತ್ತು ರಕ್ಷಕರು ದಿನರಾತ್ರಿ ನಗರದೆಲ್ಲೆಡೆ ಹುಡುಕುತ್ತಿದ್ದಾರೆ. ಇಷ್ಟು ಸಮಯ ಕಳೆದಿರುವುದರಿಂದ, ಬೋಂಗೋ ಬೆಂಗಳೂರು ನಗರದಲ್ಲಿ ಯಾವುದೇ ಭಾಗದಲ್ಲಿ ಇರಬಹುದು, ದೂರಕ್ಕೆ ನಡೆದಿರಬಹುದು ಅಥ...

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ

Image
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ  ಬೆಂಗಳೂರು, ಡಿಸೆಂಬರ್ 6; ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ  ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದು, ಅದರ ಸುವರ್ಣ ಮಹೋತ್ಸವದ ಅದ್ಧೂರಿ ಆಚರಣೆ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿ ಸಭಾಂಗಣದಲ್ಲಿ ನಡೆಸಲಾಯಿತು.  ಸಾರಿಗೆ ಸಚಿವ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಮತ್ತು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ  ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಿ ಸುವರ್ಣ ಮಹೋತ್ಸವ ಸ್ಮಾರಕ ಅನಾವರಣಗೊಳಿಸಿ ಸೇಂಟ್‌ಗೆ ಸೇವೆ ಸಲ್ಲಿಸಿದ ಹಿರಿಯ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದರು.  ಸೆಂಟ್ ಜಾನ್ ನಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ  ಡಾ. ಜಾರ್ಜ್ ಡಿಸೋಜಾ, ಡೀನ್, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು,ಡಾ. ಎ. ಮೋಹನ್, ನರವಿಜ್ಞಾನ ವಿಭಾಗ,ಡಾ.ಚಂದ್ರಮೌಳಿ ಕೆ.ಎಸ್, ಜನರಲ್ ಮೆಡಿಸಿನ್ ವಿಭಾಗ, ಡಾ. ವಿಜಯ್ ಜೋಸೆಫ್, ಪ್ಲಾಸ್ಟಿಕ್ ಸರ್ಜರಿ ವಿಭಾಗ,ಡಾ. ರವೀಂದ್ರನ್ ಜಿ.ಡಿ, ಕುಟುಂಬ ವೈದ್ಯಕೀಯ ವಿಭಾಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.  ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸೇಂಟ್ ಜಾನ್ಸ್ ಸ್ಟೋ ಹೀಲಿಂಗ್‌ನ ಸಹಾನುಭೂತಿಯಿಂದ ಕೂಡಿದ ಅಚಲ ಬದ್ಧತೆಯನ್ನು ಶ್ಲಾಘಿಸಿ, ಸಂಸ್ಥೆ ವಾಣಿಜ್ಯೀಕರಣ ಅಥವಾ  ಕಾರ್ಪೊರೇಟೀಕರಣವಿಲ್ಲದೆ ಆರೋಗ್ಯ ಸೇವೆಯನ್ನು ನ...

ಕರ್ನಾಟಕದ ಚರ್ಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡ ಕಥೋಲಿಕರು ತಮ್ಮ ನೋವನ್ನು ಬಿಗಿಯಾಗಿ, ಸ್ಪಷ್ಟವಾಗಿ ಮತ್ತು ಸಾರ್ವಜನಿಕವಾಗಿ ಹೇಳಿಕೊಳ್ಳುವ ಪರಿಸ್ಥಿತಿ ಬಂದಿರುವುದು ನಮ್ಮೆಲ್ಲರಿಗಾಗಿ ಒಂದು ವಿಷಾದಕರ ಹಾಗೂ ಅಪಾಯಕಾರಿ ಹಂತವಾಗಿದೆ.

Image
   ಕರ್ನಾಟಕದ ಚರ್ಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡ ಕಥೋಲಿಕರು ತಮ್ಮ ನೋವನ್ನು ಬಿಗಿಯಾಗಿ, ಸ್ಪಷ್ಟವಾಗಿ ಮತ್ತು ಸಾರ್ವಜನಿಕವಾಗಿ ಹೇಳಿಕೊಳ್ಳುವ ಪರಿಸ್ಥಿತಿ ಬಂದಿರುವುದು ನಮ್ಮೆಲ್ಲರಿಗಾಗಿ ಒಂದು ವಿಷಾದಕರ ಹಾಗೂ ಅಪಾಯಕಾರಿ ಹಂತವಾಗಿದೆ. ಇದೆಲ್ಲ ನಡೆದಿದ್ದು ಎರಡು ವಾರಗಳ ಹಿಂದೆ ನಮ್ಮ ಬೆಂಗಳೂರು ಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷರಾದ ಕೊಂಕಣಿ ಮೂಲದ ಪೀಟರ್ ಮಚಾದೊ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡರು ಭೇಟಿ ಮಾಡಿ ಚರ್ಚುಗಳಲ್ಲಿ ಕನ್ನಡ ಪ್ರಾರ್ಥನೆ ನಡೆಯಬೇಕೆಂದು ಹೇಳಿದ್ದರು. ತಕ್ಷಣವೇ ಮಂಗಳೂರಿನ ಶ್ರೀ ರಾಯ್ ಕಾಸ್ಟಲಿನೊ. ಪತ್ರಿಕಾ ಹೇಳಿಕೆಯನ್ನು ನೀಡಿ ಬೇರೆಯವರು ನಮ್ಮ ಚರ್ಚಿನ ಭಾಷೆ ಕುರಿತು ಮಾತನಾಡುವಂತಿಲ್ಲ ನಾವು ನಿರ್ಧರಿಸಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಇಲ್ಲಿ ನಾವು ಎಂದರೆ ಯಾರು? ನಾವು ಎಂದರೆ ಕೊಂಕಣಿಗರನ್ನ ಅವರು ಪ್ರತಿನಿಧಿಸಿ ಮಾತನಾಡಿದ್ದಾರೆ. ಇದು ಹಲವು ದಶಕಗಳಿಂದ ನೋವುಂಡು ಕನ್ನಡ ಭಾಷೆ ಬೇಕೆಂದು ಬೇಡಿಕೊಳ್ಳುತ್ತಿರುವ ಕನ್ನಡಿಗರ ಸ್ವಾಭಿಮಾನಿ ಸ್ಮರದ ಮೇಲೆ ಬರೆ ಎಳೆದಂತಾಗಿದೆ.  ಮಂಗಳೂರು ಧರ್ಮಪ್ರಾಂತ್ಯದ ಪಿ.ಆರ್.ಓ ಆಗಿಯೂ ಕರ್ನಾಟಕ ಕಥೋಲಿಕ ಥಿಂಕ್ ಟ್ಯಾಂಕ್ ಅಧ್ಯಕ್ಷನಾಗಿಯೂ ಇರುವ ಶ್ರೀ ರಾಯ್ ಕ್ಯಾಸ್ಟಿಲಿನೋ ಅವರ ಇತ್ತೀಚಿನ ಸಾರ್ವಜನಿಕ ಹೇಳಿಕೆ ಕನ್ನಡ ಕಥೋಲಿಕ ಸಮುದಾಯದ ಸಹನಶೀಲತೆಗೆ ಮಿತಿ ಮೀರಿದ ಧಕ್ಕೆ ನೀಡಿದೆ. ಅವರ ಮಾತುಗಳು ಕೇವಲ ಅಭಿಪ್ರಾ...

ಕಾರ್ಮಿಕ ಬಂಧುಗಳನ್ನು ರದ್ದು ಮಾಡಿರುವ ಪ್ರಸ್ತಾವನೆಯನ್ನು ಹಿಂಪಡೆದು ಕಾರ್ಮಿಕ ಬಂಧುಗಳ ಕೆಲಸವನ್ನು ಮುಂದುವರಿಸುವ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಾಯಿತು

Image
 ಕಾರ್ಮಿಕ ಬಂಧುಗಳನ್ನು ರದ್ದು ಮಾಡಿರುವ ಪ್ರಸ್ತಾವನೆಯನ್ನು ಹಿಂಪಡೆದು ಕಾರ್ಮಿಕ ಬಂಧುಗಳ ಕೆಲಸವನ್ನು ಮುಂದುವರಿಸುವ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಾಯಿತು   ಸಂಬಂಧಿಸಿದಂತೆ ಕಾರ್ಮಿಕ ಬಂದುಗಳಾದ ನಾವು ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ 2.11.2017ರಲ್ಲಿ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇಂದ ಕಾರ್ಮಿಕ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳನ್ನು ಹಾಗೂ ಕಲ್ಯಾಣ ಕಾರ್ಮಿಕರ ಒಗ್ಗೂಡಿಸಿ ಅಂಬೇಡ್ಕರ್ ಸಹಾಯಹನ ಎಂಬ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಹಾಗು ಎರಡು ವಾರ್ಡ್ ಗಳಿಗೆ ಒಬ್ಬರಂತೆ ಕಮಿಷನ್ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಮಿಕ ಬಂಧು ಎಂಬ ಹೆಸರಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಚಿವರು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಹಾಗೂ ರಾಜ್ಯಪಾಲರ ಅನುಮತಿ ಮೇರೆಗೆ ನೇಮಕಾತಿ ಆದೇಶ ನೀಡಿ ನಿಯಮಾನುಸಾರ ನೇಮಕ ಸದರಿ ಕಾರ್ಮಿಕ ಬಂಧುಗಳನ್ನು ಅರು ವರ್ಷಗಳಕಾಲ ದುಡಿಸಿಕೊಂಡು ಮಾಸಿಕ 6,000 ಮತ್ತು 1,000 ಸಾರಿಗೆ ವೆಚ್ಚ ನೀಡುವುದಾಗಿ ಅನುಮೋದನೆ ಮಾಡಿ ಕೊನೆಗೆ ಗೌರವ ಧನವನ್ನು ನೀಡದೆ ಏಕಏಕಿ ದಿನಾಂಕ 25.09 2023 ರಂದು ಎಲ್ಲಾ ಕಾರ್ಮಿಕ ಬಂಧುಗಳನ್ನು ರದ್ದುಗೊಳಿಸಲು ಕ್ರಮವಹಿಸಬೇಕೆಂದು ಮಾನ್ಯ ಸರ್ಕಾರ ಸಚಿವರು ಕಾರ್ಯದರ್ಶಿ ಅವರಿಂದ ಆದೇಶ ಮಾಡಿತ...

ಡಿಸೆಂಬರ್ 4ರಂದು ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘ ಮಹಿಳಾ ನೌಕರರ ಸಮ್ಮೇಳನ*

Image
 *ಡಿಸೆಂಬರ್ 4ರಂದು ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘ ಮಹಿಳಾ ನೌಕರರ ಸಮ್ಮೇಳನ* *ಋತುಚಕ್ರ ರಜೆ ಘೋಷಣೆ ಮುಖ್ಯಮಂತ್ರಿ, ಸಂಪುಟ ಸಚಿವರಿಗೆ ಅಭಿನಂದನಾ ಸಮಾರಂಭ* ಬೆಂಗಳೂರು: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ(ರಿ)ವತಿಯಿಂದ ಡಿಸೆಂಬರ್ 4ರಂದು ಮಹಿಳಾ ಸಮ್ಮೇಳನ ಮತ್ತು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿರುವ ರಾಜ್ಯದ ಸರ್ಕಾರ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಪುಟ ಸಚಿವರಿಗೆ ಅಭಿನಂದನಾ ಸಮಾರಂಭ ಹಾಗೂ ಸಂಘ ಉದ್ದೇಶಗಳು ಮತ್ತು ಸ್ಥಾಪನೆಯಾಗಿ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದಿನ ಯೋಜನೆಗಳ ಕುರಿತು  ಮಾಧ್ಯಮಗೋಷ್ಟಿ. ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು,ರಾಜ್ಯ ಗೌರವಾಧ್ಯಕ್ಷರಾದ ಶ್ರೀಮತಿ ಗೀತಮಣಿ, ಉಪಾಧ್ಯಕ್ಷೆ ಮಲ್ಲಿಕಾ ಎಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಶಶಿಕಲಾ, ರಾಜ್ಯ ಖಜಾಂಚಿ ಡಾ||ವೀಣಾ ಕೃಷ್ಣಮೂರ್ತಿರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ *ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು* ಮಾತನಾಡಿ ಮಹಿಳೆಯರು ಅಬಲೆಯಲ್ಲ, ಸಬಲೆಯಾಗಿದ್ದಾಳೆ.  ಇಂದು ಸಮಾಜದಲ್ಲಿ ಪುರುಷರಷ್ಟೆ ಸರಿಸಮಾನವಾಗಿ ಕಾರ್ಯ ನಿರ್ವಹಿಸಿ ದಿಟ್ಟ ಮಹಿಳೆ ಎಂದು ರೂಪಿಸಿದ್ದಾಳೆ ಅದರು ಸರ್ಕಾರದಲ್ಲಿ ಮಹಿಳಾ ನೌಕರರು ಹಲವಾರು ಮಹಿಳೆಯರು ಸಂಕಷ್ಟ ಎದುರಿಸಿದ್ದಾರೆ ಸಮಸ್ಯೆಗಳ ನಿವಾರಣೆ ಮತ್ತು ಮಹಿಳಾ ನೌಕರರ ಪರ ಗಟ್ಟಿಯಾ...

ಭೂ ದಾಖಲೆ ಇಲಾಖೆಯಲ್ಲಿ 4 ಸಾವಿರ ಅರ್ಜಿಗಳು 4ಸಾವಿರ ನೆನಗುದ್ದಿಗೆ;ಬಾರೀ ಭ್ರಷ್ಟಚಾರ; ದಲಿತ ಕ್ರಿಯಾ ಸಮಿತಿ ಆರೋಪ

Image
 ಭೂ ದಾಖಲೆ ಇಲಾಖೆಯಲ್ಲಿ 4 ಸಾವಿರ ಅರ್ಜಿಗಳು 4ಸಾವಿರ ನೆನಗುದ್ದಿಗೆ;ಬಾರೀ ಭ್ರಷ್ಟಚಾರ; ದಲಿತ ಕ್ರಿಯಾ ಸಮಿತಿ ಆರೋಪ. ಬೆಂಗಳೂರು ನವೆಂಬರ್ 28; ಬೆಂಗಳೂರು ನಗರ ಜಿಲ್ಲೆ ಭೂದಾಖಲೆಗಳ ಉಪನಿರ್ದೇಶಕ ಸುಜಯ್ ಕುಮಾರ್ ಕರ್ತವ್ಯಕ್ಕೆ ಬಂದಾಗಿನಿಂದ ಸುಮಾರು 4000 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಜೈ ಬೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಆರೋಪಿಸಿದೆ.   ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಡಾ.ಬಿ.ಆರ್.ಮುನಿರಾಜು,ಸುಮಾರು 1 ಎಕರೆ ಪೋಡಿಗೆ 40 ರಿಂದ 50 ಲಕ್ಷಕ್ಕೆ ಬೇಡಿಕೆ ಇಟಿದ್ದು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಲು ಕೆಲವು ಭೂಗಳ್ಳರ ಜೊತೆ ಹಾಗೂ ಡೆವೆಲಪರ್‌ಗಳ ಜೊತೆ ಕೈ ಜೋಡಿಸಲು ಇವರ ಜೊತೆ ಶ್ರೀನಿವಾಸ್ ಹಾಗೂ ಭಾನುಪ್ರಕಾಶ್‌ ರವರನ್ನು ಬಳಸಿಕೊಂಡು ಅಕ್ರಮವಾಗಿ ಸಂಪಾದಿಸಿರುವ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಇವರ ವಿರುದ್ಧ ಲೋಕಾಯುಕ್ತ, ಸಿಓಡಿ, ಸಿಬಿಐ, ತೆರಿಗೆ ಇಲಾಖೆಗಳಿಂದ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅಮಾನತ್ತುಗೊಳಿಸಬೇಕು ಎಂದು ಹೇಳಿದರು. ಭೂದಾಖಲೆಗಳ ಇಲಾಖೆಯಲ್ಲಿ ಈಗಾಗಲೇ 4000 ಅರ್ಜಿಗಳು ವಿಲೇವಾರಿ ಇದ್ದು ಅವುಗಳನ್ನು ತುರ್ತಾಗಿ ಕರ್ತವ್ಯ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಫೈಲುಗಳನ್ನು ನೀಡಿ ಕೆಲವು ಸಾರ್ವಜನಿಕರು ಮಾಹಿತಿಗಳನ್ನು ಕೇಳಿರುವ ಅರ್ಜಿಗಳಿಗೆ ಉತ್ತರಗಳನ್ನು ...

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟ.:ಶ್ರೀ ಕೆ.ಹೆಚ್. ಮುನಿಯಪ್ಪ ರವರಿಗೆ ರಾಜ್ಯದಲ್ಲಿ ಅತ್ಯುನ್ನತ ಸ್ಥಾನಮಾನ (ಮುಖ್ಯಮಂತ್ರಿ/ಉಪಮುಖ್ಯಮಂತ್ರಿ) ಹಾಗೂ ಉತ್ತಮ ಖಾತೆ ನೀಡುವ ಕುರಿತು – ಸಮುದಾಯದ ಒಗ್ಗಟ್ಟಿನ ಹಕ್ಕೊತ್ತಾಯ.

Image
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟ.:ಶ್ರೀ ಕೆ.ಹೆಚ್. ಮುನಿಯಪ್ಪ ರವರಿಗೆ ರಾಜ್ಯದಲ್ಲಿ ಅತ್ಯುನ್ನತ ಸ್ಥಾನಮಾನ (ಮುಖ್ಯಮಂತ್ರಿ/ಉಪಮುಖ್ಯಮಂತ್ರಿ) ಹಾಗೂ ಉತ್ತಮ ಖಾತೆ ನೀಡುವ ಕುರಿತು – ಸಮುದಾಯದ ಒಗ್ಗಟ್ಟಿನ ಹಕ್ಕೊತ್ತಾಯ. ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಸಮುದಾಯದ ಹಿರಿಯ ಮುತ್ಸದ್ದಿ ಮತ್ತು ರಾಷ್ಟ್ರ ನಾಯಕ ಶ್ರೀ ಕೆ.ಹೆಚ್. ಮುನಿಯಪ್ಪ ರವರನ್ನು ಸಚಿವ ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಮಾದಿಗ ಸಮುದಾಯದಲ್ಲಿ  ಆತಂಕವನ್ನು ಉಂಟುಮಾಡಿದೆ. ಮಾದಿಗ ಸಮುದಾಯದ ಅದ್ವಿತೀಯ ಹಾಗೂ ಸರ್ವೋಚ್ಚ ನಾಯಕರಾದ ಶ್ರೀ ಕೆ. ಹೆಚ್.ಮುನಿಯಪ್ಪ ರವರು ಕೋಲಾರ ಜಿಲ್ಲೆಯಲ್ಲಿ ಸತತವಾಗಿ ಏಳು ಬಾರಿ ಸಂಸದರಾಗಿಯೂ, ಮೂರು ಬಾರಿ ಕೇಂದ್ರ ಸಚಿವರಾಗಿಯೂ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ. AICCಯ ಪರ್ಮೋಚ್ಚ ಸಮಿತಿಯಾದ CWC ಕಮಿಟಿಯಲ್ಲಿ ಕಾರ್ಯನಿರ್ವಹಿಸಿ, ಡಾ. ಬಾಬು ಜಗಜೀವನ್ ರಾಮ್ ರವರ ನಂತರ ಸಮುದಾಯದ ಸಮಸ್ಯೆಗಳನ್ನು ರಾಷ್ಟ್ರ/ರಾಜ್ಯ ಮಟ್ಟದಲ್ಲಿ ಬಲವಾಗಿ ಪ್ರಸ್ತಾಪಿಸಿದ ಕ್ರಿಯಾಶೀಲ ನಾಯಕರು. ಹಾಗೂ ದಕ್ಷಿಣ ಭಾರತದ ಮೇರು ನಾಯಕರಾಗಿದ್ದಾರೆ. ಶಾಸಕರು, ಸಂಸದರು, ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸಮುದಾಯದವರನ್ನು ಉತ್ತೇಜಿಸಿ ರಾಜಕೀಯ ಪ್ರಾತಿನಿದ್ಯ ಒದಗಿಸುವಲ್ಲಿ ಅವರು ವಹಿಸಿದ ಪಾತ್ರ ಅಪಾರ. ಅವರು ಕಾಂಗ್ರೆಸ್ ಪಕ್ಷದ ದೀರ್ಘಕಾಲದ ನಿಷ್ಠಾವಂತ ನಾಯಕರಾಗಿ....