ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ 


ಬೆಂಗಳೂರು, ಡಿಸೆಂಬರ್ 6;

ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ  ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದು, ಅದರ ಸುವರ್ಣ ಮಹೋತ್ಸವದ ಅದ್ಧೂರಿ ಆಚರಣೆ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿ ಸಭಾಂಗಣದಲ್ಲಿ ನಡೆಸಲಾಯಿತು.


 ಸಾರಿಗೆ ಸಚಿವ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಮತ್ತು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ  ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಿ ಸುವರ್ಣ ಮಹೋತ್ಸವ ಸ್ಮಾರಕ ಅನಾವರಣಗೊಳಿಸಿ ಸೇಂಟ್‌ಗೆ ಸೇವೆ ಸಲ್ಲಿಸಿದ ಹಿರಿಯ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದರು.


 ಸೆಂಟ್ ಜಾನ್ ನಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ 

ಡಾ. ಜಾರ್ಜ್ ಡಿಸೋಜಾ, ಡೀನ್, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು,ಡಾ. ಎ. ಮೋಹನ್, ನರವಿಜ್ಞಾನ ವಿಭಾಗ,ಡಾ.ಚಂದ್ರಮೌಳಿ ಕೆ.ಎಸ್, ಜನರಲ್ ಮೆಡಿಸಿನ್ ವಿಭಾಗ, ಡಾ. ವಿಜಯ್ ಜೋಸೆಫ್, ಪ್ಲಾಸ್ಟಿಕ್ ಸರ್ಜರಿ ವಿಭಾಗ,ಡಾ. ರವೀಂದ್ರನ್ ಜಿ.ಡಿ, ಕುಟುಂಬ ವೈದ್ಯಕೀಯ ವಿಭಾಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.


 ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸೇಂಟ್ ಜಾನ್ಸ್ ಸ್ಟೋ ಹೀಲಿಂಗ್‌ನ ಸಹಾನುಭೂತಿಯಿಂದ ಕೂಡಿದ ಅಚಲ ಬದ್ಧತೆಯನ್ನು ಶ್ಲಾಘಿಸಿ, ಸಂಸ್ಥೆ ವಾಣಿಜ್ಯೀಕರಣ ಅಥವಾ  ಕಾರ್ಪೊರೇಟೀಕರಣವಿಲ್ಲದೆ ಆರೋಗ್ಯ ಸೇವೆಯನ್ನು ನೀಡುವಲ್ಲಿ ದೃಢವಾಗಿ ಉಳಿದಿದೆ ಎಂದು ಒತ್ತಿ ಹೇಳಿದರು.


 ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ಸಮರ್ಪಿತರಾದ ಭವಿಷ್ಯದ ಪೀಳಿಗೆಯ ಆರೋಗ್ಯ ವೃತ್ತಿಪರರನ್ನು ಪೋಷಿಸುವ ತನ್ನ ಆಸ್ಪತ್ರೆ ಸೇವೆಗಳ ಜೊತೆಗೆ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾ ವಿಭಾಗಗಳ ಮೂಲಕವೂ ಸೇಂಟ್ ಜಾನ್ ಸಮಾಜಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಒತ್ತಿ ಹೇಳಿದರು.

 ಆಂಡ್ರ್ಯೂಸ್ ಮಾರ್ ಥಾಜತ್, ಸಿಬಿಸಿಐ ಅಧ್ಯಕ್ಷರು ಮತ್ತು ತ್ರಿಶೂರ್‌ನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್, ಸಿಬಿಸಿಐ ವೈದ್ಯಕೀಯ ಶಿಕ್ಷಣ ಸೊಸೈಟಿ ಅಧ್ಯಕ್ಷರ ಮತ್ತು ರಾಯ್‌ಪುರದ ಆರ್ಚ್‌ಬಿಷಪ್ ವಿಕ್ಟರ್ ಹೆನ್ರಿ ಠಾಕೂರ್,ಬೆಂಗಳೂರಿನ ಆರ್ಚ್ ಬಿಷಪ್ ಅತಿ ವಂದನೀಯ ಪೀಟರ್ ಮಚಾಡೋ,ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿರ್ದೇಶಕ ರೆವರೆಂಡ್ ಫಾದರ್ ಜೇಸುದಾಸ್ ರಾಜಮಾಣಿಕಂ ಮತ್ತಿತರರು ಭಾಗವಹಿಸಿದ್ದರು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"