ನವದೆಹಲಿಯಲ್ಲಿ ಇದೇ17ರಿಂದ ಮೂರು ದಿನಗಳ ಕಾಲ 2ನೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾಗತಿಕ ಆರೋಗ್ಯ ಶೃಂಗಸಭೆ.
ನವದೆಹಲಿಯಲ್ಲಿ ಇದೇ17ರಿಂದ ಮೂರು ದಿನಗಳ ಕಾಲ 2ನೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾಗತಿಕ ಆರೋಗ್ಯ ಶೃಂಗಸಭೆ.
ಬೆಂಗಳೂರು ಡಿಸೆಂಬರ್ 13; ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ಜಾಗತಿಕ ಶೃಂಗಸಭೆ ಡಿಸೆಂಬರ್ 17-19ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ಧ ವೈದ್ಯ ಸಂಶೋಧನಾ ಘಟಕದ ಸಂಶೋಧನಾ ಅಧಿಕಾರಿ ವಿಜ್ಞಾನಿ ಉಸ್ತುವಾರಿ,ಡಾ.ಕಣ್ಣನ್ ಡಿಸೆಂಬರ್ 17 ರಿಂದ 19 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ 2 ನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯನ್ನು ಕೇಂದ್ರ ಸಚಿವ ಜಾಧವ್ ಚಾಲನೆ ನೀಡಲಿದ್ದು,ಕಳೆದ 2023 ರಲ್ಲಿ ಗುಜರಾತ್ನಲ್ಲಿ ನಡೆದ ಮೊದಲ ಆವೃತ್ತಿಯ ಯಶಸ್ವಿ ನಂತರ, ಭಾರತವು ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಆಯುಷ್ ರಾಜ್ಯ ಸಚಿವ ಪ್ರತಾಪ್ರಾವ್ ಜಾಧವ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ, "ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಃ” ಎಂಬ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಮಾನವೀಯತೆಯ ಆರೋಗ್ಯ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಸಾಂಪ್ರದಾಯಿಕ ಔಷಧವನ್ನು ಮುಖ್ಯವಾಹಿನಿಗೆ ತರುವ ಸಾಮೂಹಿಕ ಜಾಗತಿಕ ಪ್ರಯತ್ನದಲ್ಲಿ ಈ ಶೃಂಗಸಭೆ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಸಚಿವರು ಹೇಳಿದ್ದಾರೆ ಎಂದರು.
ಈ ವರ್ಷದ ಶೃಂಗಸಭೆ "ಸಮತೋಲನವನ್ನು ಪುನಃಸ್ಥಾಪಿಸುವುದು: ಆರೋಗ್ಯ ಮತ್ತು ಯೋಗಕ್ಷೇಮದ ವಿಜ್ಞಾನ ಮತ್ತು ಅಭ್ಯಾಸ" ಎಂಬ ವಿಷಯವನ್ನು ಹೊಂದಿದೆ ನೀತಿ ನಿರೂಪಕರು, ಜಾಗತಿಕ ಆರೋಗ್ಯ ನಾಯಕರು, ಸಂಶೋಧಕರು, ತಜ್ಞರು, ಉದ್ಯಮ ಪ್ರತಿನಿಧಿಗಳು ಮತ್ತು ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ 100 ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆಯಿದೆ, ಶೃಂಗಸಭೆಯಿಂದ ಹೊರಹೊಮ್ಮುವ ಚರ್ಚೆಗಳು ಮತ್ತು ಸಹಯೋಗಗಳು ಆರೋಗ್ಯ ರಕ್ಷಣೆಯ ಹೆಚ್ಚು ಸಮಗ್ರ ಸಮಗ್ರ ಮತ್ತು ಸುಸ್ಥಿರ ಭವಿಷ್ಯದತ್ತ ಜಗತ್ತನ್ನು ಮಾರ್ಗದರ್ಶಿಸುತ್ತವೆ ಎಂದು ಹೇಳಿದರು.

Comments
Post a Comment