ರೈತರ ಮಕ್ಕಳಿಗೆ ಹೆಣ್ಣು ಕೊಟ್ಟವರಿಗೆ 10ಲಕ್ಷ ರೂ.ವೆಚ್ಚದ ಮನೆ ಯೋಜನೆ ಜಾರಿಗೆ ಒತ್ತಾಯ.
ರೈತರ ಮಕ್ಕಳಿಗೆ ಹೆಣ್ಣು ಕೊಟ್ಟವರಿಗೆ 10ಲಕ್ಷ ರೂ.ವೆಚ್ಚದ ಮನೆ ಯೋಜನೆ ಜಾರಿಗೆ ಒತ್ತಾಯ.
ಬೆಂಗಳೂರು ಜನವರಿ 30; ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ
ರೈತರ ಮಕ್ಕಳಿಗೆ ಹೆಣ್ಣು ಕೊಟ್ಟರೆ ಮುಂದಿನ ದಿನಗಳಲ್ಲಿ 10 ಲಕ್ಷ ರೂಪಾಯಿ ಮನೆಯನ್ನು ನೀಡುತ್ತೇವೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್ ಪಕ್ಷದ ಮುಖಂಡ,ರಾಜ್ಯ ಉಪಾಧ್ಯಕ್ಷ ಎ. ಜಾಕೀರ್ ಹುಸೇನ್ ಮಾತನಾಡಿ,ರೈತರ ಗಂಡು ಮಕ್ಕಳಿಗೆ ಸರಿಯಾದ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ,ಈ ಹಿನ್ನಲೆಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರಿಗೆ 10ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕು, ರೈತರ ಜಮೀನುಗಳಿಗೆ ಉಚ್ಚಿತವಾಗಿ ವಿದ್ಯುತ್ ನೀಡಬೇಕು, ಉಚಿತವಾಗಿ ಎಲ್ಲಾ ವರ್ಗದ ಜನರಿಗೆ ವಸತಿಯನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡಬೇಕು ಉಚಿತವಾಗಿ ವಿದ್ಯಾಭ್ಯಾಸ ಕೊಡಬೇಕು, ಉಚಿತವಾಗಿ ಎಲ್ಲರಿಗೂ ವರ್ಗದ ಜನರಿಗೆ ಆರೋಗ್ಯ ಉಚಿತವಾಗಿ ಕೊಡಬೇಕು ಎಂದು ಒತ್ತಾಯಿಸಿದರು.
ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್,ಸಂಘಟನಾ ಕಾರ್ಯಾಧ್ಯಕ್ಷೆ ಜ್ಯೋತಿ ಸೇರಿದಂತೆ ನೂರಾರು ಮಂದಿ ರೈತ ಮಹಿಳೆಯರು, ಯುವಕರು ಭಾಗವಹಿಸಿದ್ದರು.

Comments
Post a Comment