ವಚನ ದನಿ- ಶಬ್ದದಿಂದ ನಿಶ್ಯಬ್ದದೆಡೆಗೆ' ಏಕವ್ಯಕ್ತಿ ಪ್ರಯೋಗ ಸಂಗೀತದ ಅಂತರಯಾನ

 ವಚನ ದನಿ- ಶಬ್ದದಿಂದ ನಿಶ್ಯಬ್ದದೆಡೆಗೆ' ಏಕವ್ಯಕ್ತಿ ಪ್ರಯೋಗ ಸಂಗೀತದ ಅಂತರಯಾನ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಹಾಗೂ ಕೊಳಲು ವಾದಕ ಬಾಪು ಪದ್ಮನಾಭ ಅವರಿಂದ 'ವಚನ ದನಿ -ಶಬ್ದದಿಂದ ನಿಶ್ಯಬ್ದದೆಡೆಗೆ' ಎಂಬ ಏಕವ್ಯಕ್ತಿ ಪ್ರಯೋಗವನ್ನು 'ಬೆನಕ' ತಂಡದಿಂದ ಆಯೋಜಿಸಲಾಗಿದೆ. ಈ ಪ್ರಯೋಗವು ವಚನಗಳ ಅಂತರಿಕ ಆಧ್ಯಾತ್ಮಿಕ ತಾತ್ವಿಕತೆಯನ್ನು ಧ್ಯಾನಾತ್ಮಕ ವಚನ ಗಾಯನದ ಮೂಲಕ ಪ್ರಸ್ತುತಪಡಿಸುತ್ತದೆ, ಶಬ್ದದಿಂದ ನಿಶ್ಯಬ್ದದತ್ತ ಸಾಗುವ ಈ ಯಾನವು ಭಾವನಾತ್ಮಕ ಸುಸ್ಥಿತಿ. ಮಾನಸಿಕ ಶಾಂತಿ ಮತ್ತು ಅಂತರಿಕ ಅರಿವಿಗೆ ಅನುವು ಮಾಡಿಕೊಡುತ್ತದೆ. ವಚನಗಳ ಅಂತರಾರ್ಥವನ್ನು ಸಂಗೀತದ ಮೂಲಕ ಆವಿಷ್ಕರಿಸುವ ಬಾಪು ಪದ್ಮನಾಭ ಅವರ ಈ ಪ್ರಯೋಗವು ಶರಣರ ತಾತ್ವಿಕ ಸಂದೇಶವನ್ನು ಹೊಸ ರೀತಿಯಲ್ಲಿ ಜನರ ಹೃದಯಕ್ಕೆ ಹತ್ತಿರಗೊಳಿಸುವ ಒಂದು ಪ್ರಯತ್ನವಾಗಿದೆ.

'ವಚನ ದನಿ – ಶಬ್ದದಿಂದ ನಿಶ್ಯಬ್ದದೆಡೆಗೆ' – ರಂಗಪ್ರಸ್ತುತಿ

ಪರಿಕಲ್ಪನೆ, ಸಂಗೀತ, ಗಾಯನು ಬಾಪು ಪದ್ಮನಾಭ

ನಿರ್ದೇಶನ: ಟಿ.ಎಸ್. ನಾಗಭರಣ

ವಸ್ತ್ರ ವಿನ್ಯಾಸ: ನಾಗಿಣಿ ಭರಣ

ರಂಗ ವಿನ್ಯಾಸ: ವಿಶ್ವಲ್ ಬಿ. ಅಪ್ಪಯ್ಯ

ಸಮಯ: ಸಂಜೆ 6:00 ರಿಂದ

: 18 ໙ 2025

ಸ್ಥಳ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಕರ್

ಬಿ.ಪಿ. ವಾಡಿಯಾ ರಸ್ತೆ, ಬೆಂಗಳೂರು

ಈ ಕಾರ್ಯಕ್ರಮದ ಕುರಿತು ಮಾಧ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಪತ್ರಿಕಾಗೋಷ್ಠಿಯನ್ನು 6 ನವೆಂಬರ್ 2025 ಗುರುವಾರ ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಧ್ಯಾಹ್ನ 12 ರಿಂದ 12.30 ರ ಅವಧಿಯಲ್ಲಿ ಆಯೋಜಿಸಲಾಗಿದೆ. ತಾವು ದಯವಿಟ್ಟು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಬೇಕಾಗಿ ವಿನಂತಿ.


Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ