ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ಲೋಕಾಯುಕ್ತ ತನಿಖೆ ಮುಕ್ತಾಯವಾಗುವವರೆಗೆ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಆಗ್ರಹ
Get link
Facebook
X
Pinterest
Email
Other Apps
ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ಲೋಕಾಯುಕ್ತ ತನಿಖೆ ಮುಕ್ತಾಯವಾಗುವವರೆಗೆ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಆಗ್ರಹ
ಬೆಂಗಳೂರು, ಏಪ್ರಿಲ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿ.ಬಿ.ಎಂ.ಪಿ) 2005 ರಿಂದ 2017ರ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ ಪೌರಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ನಿಧಿಗಳ ಬಗ್ಗೆ ಉಂಟಾಗಿರುವ ಭಾರಿ ಅವ್ಯವಹಾರ ಕುರಿತು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು (ACB/ಬೆಂ.ನರಾ/ಮೊ.ಸಂಖ್ಯೆ 40/2017), ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುಮಾರು ₹384 ಕೋಟಿ ಮೌಲ್ಯದ ಇ.ಎಸ್.ಐ. ಮತ್ತು ಪಿ.ಎಫ್. ನಿಧಿ, ಹಾಗೂ 6,600 ನಕಲಿ ಪೌರಕಾರ್ಮಿಕರ ವೇತನದ ರೂಪದಲ್ಲಿ ₹550 ಕೋಟಿ ಮೊತ್ತದ ವಂಚನೆಯ ಆರೋಪ ಕೇಳಿಬಂದಿದೆ.
ಈ ಸಂಬಂಧ ಈಗಾಗಲೇ ಬಿ.ಬಿ.ಎಂ.ಪಿಯಿಂದ ತಾತ್ಕಾಲಿಕ ತನಿಖಾ ತಂಡ ರಚನೆಗೊಂಡಿದ್ದು, ತನಿಖೆಗೆ ಸಹಕಾರ ನೀಡಲಾಗುತ್ತಿದೆ. ಆದರೆ, ನಕಲಿ ಪೌರಕಾರ್ಮಿಕರ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದರೆ, ನೈಜವಾಗಿ ದುಡಿದ ಕಾರ್ಮಿಕರು ವಂಚಿತರಾಗುವ ಭೀತಿ ಇದೆ ಎಂದು ಕೆ.ಜಿ. ಶ್ರೀನಿವಾಸ್ ಅವರು ತಿಳಿಸಿದರು.
ಅವರು ಬೆಂಗ್ಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, “ಅನಧಿಕೃತವಾಗಿ ಗೈರುಹಾಜರಿರುವವರು ಮತ್ತು ಒಂದುವರ್ಷದೊಳಗಿನ ನೇರ ಪಾವತಿ ಪೌರಕಾರ್ಮಿಕರನ್ನೂ ಖಾಯಂಗೊಳಿಸುವ ಪ್ರಕ್ರಿಯೆಯಲ್ಲಿ ಪರಿಗಣಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ನ್ಯಾಯೋಚಿತವಲ್ಲ. ಪ್ರಕರಣದ ತನಿಖೆ ಮುಕ್ತಾಯವಾಗಿ, ನಕಲಿ ಪೌರಕಾರ್ಮಿಕರ ಪಟ್ಟಿ ಅಧಿಕೃತವಾಗಿ ಪ್ರಕಟವಾಗುವವರೆಗೆ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕು,” ಎಂದು ಆಗ್ರಹಿಸಿದರು.
ಇದಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ತನಿಖಾ ತಂಡ ಹಾಗೂ ಬಿ.ಬಿ.ಎಂ.ಪಿಯ ಕಾನೂನು ವಿಭಾಗದ ಮುಖ್ಯಸ್ಥರೊಂದಿಗೆ ತಕ್ಷಣ ಜಂಟಿ ಸಭೆ ಕರೆಯಬೇಕು ಮತ್ತು ಖಾಯಂಗೊಳಿಸುವ ಪ್ರಕ್ರಿಯೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಅವರು ಮನವಿ ಸಲ್ಲಿಸಿದರು.
ಬೆಂಗಳೂರು, ಏಪ್ರಿಲ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿ.ಬಿ.ಎಂ.ಪಿ) 2005 ರಿಂದ 2017ರ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ ಪೌರಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ನಿಧಿಗಳ ಬಗ್ಗೆ ಉಂಟಾಗಿರುವ ಭಾರಿ ಅವ್ಯವಹಾರ ಕುರಿತು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು (ACB/ಬೆಂ.ನರಾ/ಮೊ.ಸಂಖ್ಯೆ 40/2017), ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುಮಾರು ₹384 ಕೋಟಿ ಮೌಲ್ಯದ ಇ.ಎಸ್.ಐ. ಮತ್ತು ಪಿ.ಎಫ್. ನಿಧಿ, ಹಾಗೂ 6,600 ನಕಲಿ ಪೌರಕಾರ್ಮಿಕರ ವೇತನದ ರೂಪದಲ್ಲಿ ₹550 ಕೋಟಿ ಮೊತ್ತದ ವಂಚನೆಯ ಆರೋಪ ಕೇಳಿಬಂದಿದೆ.
ಈ ಸಂಬಂಧ ಈಗಾಗಲೇ ಬಿ.ಬಿ.ಎಂ.ಪಿಯಿಂದ ತಾತ್ಕಾಲಿಕ ತನಿಖಾ ತಂಡ ರಚನೆಗೊಂಡಿದ್ದು, ತನಿಖೆಗೆ ಸಹಕಾರ ನೀಡಲಾಗುತ್ತಿದೆ. ಆದರೆ, ನಕಲಿ ಪೌರಕಾರ್ಮಿಕರ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದರೆ, ನೈಜವಾಗಿ ದುಡಿದ ಕಾರ್ಮಿಕರು ವಂಚಿತರಾಗುವ ಭೀತಿ ಇದೆ ಎಂದು ಕೆ.ಜಿ. ಶ್ರೀನಿವಾಸ್ ಅವರು ತಿಳಿಸಿದರು.
ಅವರು ಬೆಂಗ್ಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, “ಅನಧಿಕೃತವಾಗಿ ಗೈರುಹಾಜರಿರುವವರು ಮತ್ತು ಒಂದುವರ್ಷದೊಳಗಿನ ನೇರ ಪಾವತಿ ಪೌರಕಾರ್ಮಿಕರನ್ನೂ ಖಾಯಂಗೊಳಿಸುವ ಪ್ರಕ್ರಿಯೆಯಲ್ಲಿ ಪರಿಗಣಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ನ್ಯಾಯೋಚಿತವಲ್ಲ. ಪ್ರಕರಣದ ತನಿಖೆ ಮುಕ್ತಾಯವಾಗಿ, ನಕಲಿ ಪೌರಕಾರ್ಮಿಕರ ಪಟ್ಟಿ ಅಧಿಕೃತವಾಗಿ ಪ್ರಕಟವಾಗುವವರೆಗೆ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕು,” ಎಂದು ಆಗ್ರಹಿಸಿದರು.
ಇದಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ತನಿಖಾ ತಂಡ ಹಾಗೂ ಬಿ.ಬಿ.ಎಂ.ಪಿಯ ಕಾನೂನು ವಿಭಾಗದ ಮುಖ್ಯಸ್ಥರೊಂದಿಗೆ ತಕ್ಷಣ ಜಂಟಿ ಸಭೆ ಕರೆಯಬೇಕು ಮತ್ತು ಖಾಯಂಗೊಳಿಸುವ ಪ್ರಕ್ರಿಯೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಅವರು ಮನವಿ ಸಲ್ಲಿಸಿದರು.
ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ಅನ್ವಯ ದಿನಾಂಕ:1/2/1963 ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ನಮ್ಮನ್ನು ಆಡಳಿ ತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಜಿಸಿ ಆಗಿಂದ್ದಾಗೆ ವೇತನ ಹೆಚ್ಚಳ ಮಾಡುತ್ತಾ ಬಂದು 2007ನೇ ಸಾಲಿನಲ್ಲಿ ಗ್ರಾಮಸಹಾಯಕರ ಹುದ್ದೆಗಳನ್ನು ಖಾಯಂಗೊಳಿಸಿ ಪ್ರಸ್ತುತ 15000/- ಮಿತವೇತನ ಮಾತ್ರ ಪಾವತಿಸಲಾಗುತ್ತಿರುತ್ತದೆ. ಆದರೆ ಯಾವುದೇ ಸೇವಾಭದ್ರತೆ ಕಲ್ಪಿಸಿರುವುದಿಲ್ಲ. ಸದರಿ ವೇತನದಿಂದ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ತಂದೆ ತಾಯಿಗಳ ಸಂಧ್ಯಾ ಕಾಲದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟ ಕರವಾಗಿರುತ್ತದೆ. ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ನಾವು ನಡೆಸಿದ ಮುಷ್ಕರದಲ್ಲಿ ಸರ್ಕಾರದ ಮಾನ್ಯ ಕಂದಾಯ ಸಚಿವರು ಮುಷ್ಕರದ ಸ್ಥಳಕ್ಕೆ ಆಗಮಿಸಿ ಗ್ರಾಮಸಹಾಯಕರಿಗೆ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸೇವಾಭದ...
ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ ಆಳವಾದ ದುಃಖ ಮತ್ತು ಗಂಭೀರ ಕಳವಳದಿಂದ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮುಲಖೇಡಾ ಗ್ರಾಮದ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಅವರು 13 ಅಕ್ಟೋಬರ್ 2025 ರಂದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆಯ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಅವರ ಅಕಾಲಿಕ ನಿಧನವು ರಾಜ್ಯದ ಗ್ರಂಥಾಲಯ ವಲಯದ ಜೊತೆಗೆ ಸಾರ್ವಜನಿಕ ಸೇವಾ ಸಮುದಾಯದೊಳಗೆ ಅಪಾರ ಆಘಾತವನ್ನುಂಟುಮಾಡಿದೆ. ಬೆರ್ಸ್ ಶ್ರೀಮತಿ ಭಾಗ್ಯವತಿ ಮಠ ಅವರು ಕಳೆದ ಆರು ವರ್ಷಗಳಿಂದ ಅನೇಕ ವೃತ್ತಿಜೀವನ ಹಾಗೂ ಆರ್ಥಿಕ ಸಂಕಷ್ಟಗಳ ನಡುವೆಯೂ ಅತ್ಯಂತ ಪ್ರಾಮಾಣಿಕತೆ. ನಿಷ್ಠೆ ಮತ್ತು ಬದ್ಧತೆಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳಿಂದ ಅವರಿಗೆ ವೇತನ ನೀಡದಿರುವುದು ಅತ್ಯಂತ ದುಃಖದ ವಿಷಯವಾಗಿದೆ. ಇದರಿಂದ ಅವರು ಮಾನಸಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಸಾಕ್ಷರತೆ ಮತ್ತು ಅಧ್ಯಯನವನ್ನು ಉತ್ತೇಜಿಸಲು ಸರ್ಕಾರದಿಂದ ನಿಯೋಜಿಸಲ್ಪಟ್ಟ ಅಧಿಕಾರಿಯನ್ನು ಇಂತಹ ನಿರ್ಲಕ್ಷ್ಯ ಹಾಗೂ ಅನಾಸಕ್ತಿ ತೋರಿಸುವುದು ಅಸ್ವೀಕಾರಾರ್ಹ ಮತ್ತು ಹೃದಯವೇದಕವಾಗಿದೆ. ಅವರ ಆತ್ಮಹತ್ಯೆ ಪತ್ರದಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಇತರ ಅಧಿಕಾರಿಗಳ ಹೆಸರುಗಳನ...
Methodist Church in India Announces New Leadership, Disputes Former Bishop’s Claims Bengaluru, India – 28th, february, 2025 – The Methodist Church in India (MCI) today announced the appointment of Bishop Dr. Anilkumar John Servand as the sole legally appointed Resident and Presiding Bishop of the Bangalore Regional Conference, effective February 1, 2025. This decision, formalized through an Executive Council resolution on January 31, 2025, marks a significant leadership transition within the church. Bishop Servand, who also serves as the Master (Chancellor) of the Senate of Serampore College, Chief Acharya of Sattal Christian Ashram, Chairman of the Council of Medical Work – MCI, Chairman of the Council of Women’s Work – MCI, and a Central Committee Member of the World Council of Churches (WCC), will assume his new role amidst ongoing legal disputes involving his predecessor, Bishop N.L. Karkare. The MCI has clarified that Bishop Karkare, who continu...
Comments
Post a Comment