ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ 7 ದಿನಗಳ “ಉರೂಸ್ ಮುಬಾರಕ್” – ಭಕ್ತರ ಪಾಲಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾಗಮ

 ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ 7 ದಿನಗಳ “ಉರೂಸ್ ಮುಬಾರಕ್” – ಭಕ್ತರ ಪಾಲಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾಗಮ

ಬೆಂಗಳೂರು , ಜನವರಿ 29, 2025: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಪವಾಡ ಪುರುಷರಾದ ಬಹು. ಹುತ್ ಸೂಫಿ ಶಹೀದ್ (ರ) ಹಾಗೂ ಸೈಯದ್ ಹಸನ್ ಸಖಾಫ್ ಅಲ್ ಹಳರಮಿ (ರ) ಯವರ ನೆನಪಿಗಾಗಿ ನಡೆಯುವ “ಉರೂಸ್ ಮುಬಾರಕ್” ಈ ಬಾರಿ ಫೆಬ್ರವರಿ 21 ರಿಂದ 28, 2025ರವರೆಗೆ ನಡೆಯಲಿದೆ.

ಈ ಮಹೋತ್ಸವದಲ್ಲಿ ಖತಮುಲ್ ಖುರಾನ್, ಧಾರ್ಮಿಕ ಉಪನ್ಯಾಸಗಳು, ಸಾಮೂಹಿಕ ವಿವಾಹ, ಸಾರ್ವಜನಿಕ ಸಮ್ಮೇಳನ ಮತ್ತು ಸಮಾರೋಪ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಜಾತಿ-ಮತ ಭೇದವಿಲ್ಲದೆ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಫೆಬ್ರವರಿ 24, 2025ರಂದು ಆಗಮಿಸುವ ಭಕ್ತರು ಹಾಗೂ ಭಾಂದವರಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾ-ಅತ್ನ ಅಧೀನದಲ್ಲಿ ಆಯೋಜಿಸಲಾಗುತ್ತಿದೆ.

ಸಯ್ಯದ್ ಕುಟುಂಬದ ನೇತೃತ್ವದ ಧಾರ್ಮಿಕ ಪಂಡಿತರು, ರಾಜ್ಯ ಹಾಗೂ ಹೊರರಾಜ್ಯಗಳಿಂದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

400 ವರ್ಷಗಳ ಪರಂಪರೆಯ ಮಹತ್ವ:

ಹಿಜ್ರಿ 11ನೇ ಶತಮಾನದಲ್ಲಿ, ಇಸ್ಲಾಂನ ನವೋತ್ಥಾನ ನಾಯಕರು ಈಜಿಪ್ಟ್ ನಿಂದ ಪ್ರವಾದಿ (ಸ)ವರ ಝಿಯಾರತ್ ಮುಗಿಸಿ ಧರ್ಮಪ್ರಚಾರಕ್ಕಾಗಿ ಕೊಡಗು ತಲುಪಿದರು. ಕೊನೆಗೆ, ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯವಿಶ್ರಾಂತಿ ಪಡೆದ ಈ ಔಲಿಯಾಗಳ ದರ್ಗಾ ಜನರ ಸಂಕಟಗಳಿಗೆ ಪರಿಹಾರ ದೊರಕುವ ಪುಣ್ಯಸ್ಥಳವಾಗಿ ಬೆಳೆಯುತ್ತಿದೆ.

ಈ ಕಾರ್ಯಕ್ರಮದ ಕುರಿತು ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಬೂಬಕ್ಕರ್ ಸಕಾಫಿ, ಅಧ್ಯಕ್ಷರು ಮನವಿ ಮಾಡಿದರು.

ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಜಮಾ-ಅತ್ ಸದಸ್ಯರನ್ನು ಸಂಪರ್ಕಿಸಲು 7204882008.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation