ಪಂಚಮಸಾಲಿ ಮೀಸಲಾತಿ ನಿರಂತರ ಹೋರಾಟಕ್ಕೆ ಪ್ರಥಮ ಜಯ* :

ಪಂಚಮಸಾಲಿ ಮೀಸಲಾತಿ

 ನಿರಂತರ  ಹೋರಾಟಕ್ಕೆ

 ಪ್ರಥಮ ಜಯ

   *ಪಂಚಮಸಾಲಿ ಮೀಸಲಾತಿ ನಿರಂತರ  ಹೋರಾಟಕ್ಕೆ ಪ್ರಥಮ ಜಯ* :

*ಹೋರಾಟಕ್ಕೆ ತಾತ್ಕಾಲಿಕ ವಿರಾಮ ಹಾಗೂ ಚುನಾವಣೆ ನಂತರ  ಮೀಸಲಾತಿ  ಹೆಚ್ಚಳಗಾಗಿ  ಕೆಂದ್ರ ಒಬಿಸಿಗಾಗಿ  ಹೋರಾಟ  :   ಬಸವ ಜಯಮೃತ್ಯುಂಜಯ ಶ್ರೀಗಳು*...

*ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾರ್ಚ್ 25 ರಂದು   71 ನೇ ದಿನದ ಸತ್ಯಾಗ್ರಹ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯ  ಕಾರ್ಯ ಕಾರಿನೀಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು*

*ನಾವು ಎರಡು ವರ್ಷದ ಎರಡು ತಿಂಗಳಿಂದ ,  ಪಂಚಮಸಾಲಿ ಲಿಂಗಾಯತ ಗೌಡ , ಮಲೆಗೌಡ ದೀಕ್ಷಾ ಲಿಂಗಾಯತ,  ಮಕ್ಕಳಿಗಾಗಿ ಶ್ರೀಪೀಠವನ್ನು ಬಿಟ್ಟು  ಪಾದಯಾತ್ರೆ ,  ಸಮಾವೇಶ  ,  ಸತ್ಯಾಗ್ರಹ  ಮೂಲಕ ಐತಿಹಾಸಿಕ   ಹೋರಾಟ ಮಾಡುತ್ತಾ ಬರುತ್ತಿದ್ದೇವೆ*.

*ನಾವು ಕೇಳಿದ್ದು  ಶೇ 15 ರ  2ಎ ಮೀಸಲಾತಿ. ಅದರೆ ಸರ್ಕಾರ ಶೇ 7 ರ  2d  ಎಂಬ ನೂತನ ಮೀಸಲಾತಿ ಸೃಷ್ಟಿ ಮಾಡಿತು*

*2ಎ ಮೀಸಲಾತಿ ಪಡೆಯಲು  ಉಚ್ಚಾ ನ್ಯಾಯಾಲಯದಲ್ಲಿ  ತಡೆ ಇರುವುದರಿಂದ 2d ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ  ಸರ್ಕಾರ ಶೇ 7 ರ ಮೀಸಲಾತಿ  ಕೊಟ್ಟಿರುವುದು ,  ನಮ್ಮ ನಿರಂತರ ಹೋರಾಟಕ್ಕೆ ಪ್ರಥಮ ಐತಿಹಾಸಿಕ  ಜಯವಾಗಿದೆ*.

*ಆದ್ದರಿಂದ ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲಾಗಿದೆ*.

*ಚುನಾವಣೆ ನಂತರ ಮೀಸಲಾತಿ ಹೆಚ್ಚಳಕ್ಕಾಗಿ ಹಾಗೂ ಎಲ್ಲಾ ಲಿಂಗಾಯತರ ಒಬಿಸಿ ಮೀಸಲಾತಿಗಾಗಿ   ಹೋರಾಟ ಮುಂದುವರೆಸಲಾಗುವುದು ಎಂದು ಹೋರಾಟದ ಮುಂಚೂಣಿಯ ನೇತೃತ್ವವಹಿಸಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು*.

*ನಮ್ಮ ಹೋರಾಟದಿಂದ ಎಲ್ಲಾ ಲಿಂಗಾಯತ ಒಳಪಂಗಡಗಳಿಗೆ ಹಾಗೂ ಇತರೆ ಸಮಾಜಗಳಿಗೆ  ಮೀಸಲಾತಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಸಮಾಜ ನಮ್ಮದು ಎಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ*.

*ನ್ಯಾಯಾಲಯದ ತಡೆಯಾಜ್ನೆ ತೆರವುಗೊಳಿಸಿ ಮೀಸಲಾತಿ ನೀಡುವಂತೆ ಪ್ರಯತ್ನಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ಹಾಗೂ ಆದೇಶ ಪಾಲಿಸಿದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಗಳು*.

*ನಮ್ಮ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಾತ್ನಳ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಿಗೆ ,     ಕಾರ್ಯದರ್ಶಿ ಎಚ್ ಎಸ್ ಶಿವಶಂಕರ, ವಿನಯ ಕುಲಕರ್ಣಿ, ಸಚಿವ ಸಿಸಿ ಪಾಟೀಲ್ ,  ಎಬಿ ಪಾಟೀಲ್ ,  ಸಿದ್ದುಸವದಿ ,  ಅರವಿಂದ ಬೆಲ್ಲದ್  ಸಂಸದರಾದ ಕರಡಿ ಸಂಗಣ್ಣ , ಈರಣ್ಣ ಕಡಾಡಿ, ಲಕ್ಷ್ಮಿ ಹೆಬ್ಬಳಕಾರ್ , ಕೇಂದ್ರ ಸರ್ಕಾರ ಸಚಿವರುಗಳಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಪಕ್ಷಗಳ ಹಾಲಿ ಮಾಜಿ ಜನಪ್ರತಿನಿಧಿಗಳಿಗೆ , ಕಾನೂನು ತಜ್ಞ ದಿನೇಶ್ ಪಾಟೀಲ್ , ಮಲೆಗೌಡ ಲಿಂಗಾಯತ ಗೌಡ ದೀಕ್ಷಾ ಲಿಂಗಾಯತ ಮುಖಂಡರುಗಳಿಗೆ ,  ನಾಡಿನ ಎಲ್ಲಾ ಪದಾಧಿಕಾರಿಗಲಿಗೆ , ವಿವಿಧ ಘಟಕಗಳ ಪದಾಧಿಕಾರಿಗಲಿಗೆ , ಮಾಧ್ಯಮದವರಿಗೆ ಹಾಗೂ ಸಮಾಜದ ಪ್ರತಿಯೊಬ್ಬನಿಗೂ  ಅಭಿನಂದನೆಗಳು*.

 *ಸರ್ಕಾರದ ಆದೇಶ ಸಿಕ್ಕ ಬಳಿಕ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಗಳನ್ನು ಭೇಟಿಯಾಗುತ್ತೇನೆ*

*ಸರ್ಕಾರದ ಆದೇಶ ಸಿಗುವವರೆಗೂ ಇಲ್ಲೇ ಇದ್ದು ಆದೇಶ ಸಿಕ್ಕಮೇಲೆ ಬೆಂಗಳೂರು ಬಿಟ್ಟು ಕೂಡಲ ಸಂಗಮ ಕ್ಷೇತ್ರಕ್ಕೆ ತೆರಳುತ್ತೆನೆ*

*ಸರ್ಕಾರದ ಆದೇಶ ಪ್ರತಿ ಸಿಕ್ಕ ಮೇಲೆ ಎಲ್ಲಾರೂ ವಿಜಯೋತ್ಸವ ಮಾಡಿ*

  *ಸದ್ಯ ಈ ಹೋರಾಟವನ್ನು ವಿರಾಮಗೊಳಿಸಿ ತಾತ್ಕಾಲಿಕವಾಗಿ ನಿಲ್ಲಿಸುತ್ತೇನೆ ಎಂದು ಶ್ರೀಗಳು ಹೇಳಿದರು.ಬಸನಗೌಡ ಪಾಟೀಲ್ ಯತ್ನಾಳ್  ದೆಹಲಿ ಹೋಗಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ನಮ್ಮ ಸಮಾಜದ ಪ್ರತಿಯೊಬ್ಬರು ಬುತ್ತಿಕಟ್ಟಿಕೊಂಡು ಬಂದು ನನ್ನ ಜೊತೆ ಹೋರಾಟ ಮಾಡಿದರು ಎಂದು  ಭಾವುಕರಾಗಿ ಮಾತಾನಾಡಿದ  ಸ್ವಾಮೀಜಿ ಕಣ್ಣೀರು ಹಾಕಿದರು* . *ನಮ್ಮ ಹೋರಾಟಕ್ಕೆ ಸಿದ್ದಗಂಗಾ ಬಿಟ್ಟರೆ ಉತ್ತರ ಕರ್ನಾಟಕದ ಕೆಲವು ಮಠ ಬಿಟ್ಟರೆ ಬೇರೆ ಯಾವ ಮಠಗಳು ನಮಗೆ ಬೆಂಬಲ ನೀಡಲಿಲ್ಲ* *ಎಲ್ಲರ ಅಭಿಪ್ರಾಯ ಕೇಳಿದಾಗ ನಮ್ಮ ಎರಡೂವರೆ ವರ್ಷದ ಹೋರಾಟದಲ್ಲಿ ಮೊದಲು ಸಾಧನೆ ಮಾಡಿದ್ದೇವೆ* 

*ಮುಂದೆ ಎಲ್ಲಾ ಲಿಂಗಾಯಿತ ಸಮಾಜವನ್ನು ಕೇಂದ್ರ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ

ಹೋರಾಟ ಮಾಡುತ್ತೇವೆ* 

 *ನಮಗೆ ಪೂರ್ಣ  ಊಟ ಸಿಗದೇ ಇರಬಹುದು ಆದರೆ ಮೀಸಲಾತಿಯ ವ್ಯಾಕ್ಸಿನ್ ರೀತಿ ಸಿಕ್ಕಿದೆ ಎಂದರು*.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims