ಪಂಚಮಸಾಲಿ ಮೀಸಲಾತಿ ನಿರಂತರ ಹೋರಾಟಕ್ಕೆ ಪ್ರಥಮ ಜಯ* :

ಪಂಚಮಸಾಲಿ ಮೀಸಲಾತಿ

 ನಿರಂತರ  ಹೋರಾಟಕ್ಕೆ

 ಪ್ರಥಮ ಜಯ

   *ಪಂಚಮಸಾಲಿ ಮೀಸಲಾತಿ ನಿರಂತರ  ಹೋರಾಟಕ್ಕೆ ಪ್ರಥಮ ಜಯ* :

*ಹೋರಾಟಕ್ಕೆ ತಾತ್ಕಾಲಿಕ ವಿರಾಮ ಹಾಗೂ ಚುನಾವಣೆ ನಂತರ  ಮೀಸಲಾತಿ  ಹೆಚ್ಚಳಗಾಗಿ  ಕೆಂದ್ರ ಒಬಿಸಿಗಾಗಿ  ಹೋರಾಟ  :   ಬಸವ ಜಯಮೃತ್ಯುಂಜಯ ಶ್ರೀಗಳು*...

*ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾರ್ಚ್ 25 ರಂದು   71 ನೇ ದಿನದ ಸತ್ಯಾಗ್ರಹ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯ  ಕಾರ್ಯ ಕಾರಿನೀಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು*

*ನಾವು ಎರಡು ವರ್ಷದ ಎರಡು ತಿಂಗಳಿಂದ ,  ಪಂಚಮಸಾಲಿ ಲಿಂಗಾಯತ ಗೌಡ , ಮಲೆಗೌಡ ದೀಕ್ಷಾ ಲಿಂಗಾಯತ,  ಮಕ್ಕಳಿಗಾಗಿ ಶ್ರೀಪೀಠವನ್ನು ಬಿಟ್ಟು  ಪಾದಯಾತ್ರೆ ,  ಸಮಾವೇಶ  ,  ಸತ್ಯಾಗ್ರಹ  ಮೂಲಕ ಐತಿಹಾಸಿಕ   ಹೋರಾಟ ಮಾಡುತ್ತಾ ಬರುತ್ತಿದ್ದೇವೆ*.

*ನಾವು ಕೇಳಿದ್ದು  ಶೇ 15 ರ  2ಎ ಮೀಸಲಾತಿ. ಅದರೆ ಸರ್ಕಾರ ಶೇ 7 ರ  2d  ಎಂಬ ನೂತನ ಮೀಸಲಾತಿ ಸೃಷ್ಟಿ ಮಾಡಿತು*

*2ಎ ಮೀಸಲಾತಿ ಪಡೆಯಲು  ಉಚ್ಚಾ ನ್ಯಾಯಾಲಯದಲ್ಲಿ  ತಡೆ ಇರುವುದರಿಂದ 2d ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ  ಸರ್ಕಾರ ಶೇ 7 ರ ಮೀಸಲಾತಿ  ಕೊಟ್ಟಿರುವುದು ,  ನಮ್ಮ ನಿರಂತರ ಹೋರಾಟಕ್ಕೆ ಪ್ರಥಮ ಐತಿಹಾಸಿಕ  ಜಯವಾಗಿದೆ*.

*ಆದ್ದರಿಂದ ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲಾಗಿದೆ*.

*ಚುನಾವಣೆ ನಂತರ ಮೀಸಲಾತಿ ಹೆಚ್ಚಳಕ್ಕಾಗಿ ಹಾಗೂ ಎಲ್ಲಾ ಲಿಂಗಾಯತರ ಒಬಿಸಿ ಮೀಸಲಾತಿಗಾಗಿ   ಹೋರಾಟ ಮುಂದುವರೆಸಲಾಗುವುದು ಎಂದು ಹೋರಾಟದ ಮುಂಚೂಣಿಯ ನೇತೃತ್ವವಹಿಸಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು*.

*ನಮ್ಮ ಹೋರಾಟದಿಂದ ಎಲ್ಲಾ ಲಿಂಗಾಯತ ಒಳಪಂಗಡಗಳಿಗೆ ಹಾಗೂ ಇತರೆ ಸಮಾಜಗಳಿಗೆ  ಮೀಸಲಾತಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಸಮಾಜ ನಮ್ಮದು ಎಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ*.

*ನ್ಯಾಯಾಲಯದ ತಡೆಯಾಜ್ನೆ ತೆರವುಗೊಳಿಸಿ ಮೀಸಲಾತಿ ನೀಡುವಂತೆ ಪ್ರಯತ್ನಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ಹಾಗೂ ಆದೇಶ ಪಾಲಿಸಿದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಗಳು*.

*ನಮ್ಮ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಾತ್ನಳ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಿಗೆ ,     ಕಾರ್ಯದರ್ಶಿ ಎಚ್ ಎಸ್ ಶಿವಶಂಕರ, ವಿನಯ ಕುಲಕರ್ಣಿ, ಸಚಿವ ಸಿಸಿ ಪಾಟೀಲ್ ,  ಎಬಿ ಪಾಟೀಲ್ ,  ಸಿದ್ದುಸವದಿ ,  ಅರವಿಂದ ಬೆಲ್ಲದ್  ಸಂಸದರಾದ ಕರಡಿ ಸಂಗಣ್ಣ , ಈರಣ್ಣ ಕಡಾಡಿ, ಲಕ್ಷ್ಮಿ ಹೆಬ್ಬಳಕಾರ್ , ಕೇಂದ್ರ ಸರ್ಕಾರ ಸಚಿವರುಗಳಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಪಕ್ಷಗಳ ಹಾಲಿ ಮಾಜಿ ಜನಪ್ರತಿನಿಧಿಗಳಿಗೆ , ಕಾನೂನು ತಜ್ಞ ದಿನೇಶ್ ಪಾಟೀಲ್ , ಮಲೆಗೌಡ ಲಿಂಗಾಯತ ಗೌಡ ದೀಕ್ಷಾ ಲಿಂಗಾಯತ ಮುಖಂಡರುಗಳಿಗೆ ,  ನಾಡಿನ ಎಲ್ಲಾ ಪದಾಧಿಕಾರಿಗಲಿಗೆ , ವಿವಿಧ ಘಟಕಗಳ ಪದಾಧಿಕಾರಿಗಲಿಗೆ , ಮಾಧ್ಯಮದವರಿಗೆ ಹಾಗೂ ಸಮಾಜದ ಪ್ರತಿಯೊಬ್ಬನಿಗೂ  ಅಭಿನಂದನೆಗಳು*.

 *ಸರ್ಕಾರದ ಆದೇಶ ಸಿಕ್ಕ ಬಳಿಕ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಗಳನ್ನು ಭೇಟಿಯಾಗುತ್ತೇನೆ*

*ಸರ್ಕಾರದ ಆದೇಶ ಸಿಗುವವರೆಗೂ ಇಲ್ಲೇ ಇದ್ದು ಆದೇಶ ಸಿಕ್ಕಮೇಲೆ ಬೆಂಗಳೂರು ಬಿಟ್ಟು ಕೂಡಲ ಸಂಗಮ ಕ್ಷೇತ್ರಕ್ಕೆ ತೆರಳುತ್ತೆನೆ*

*ಸರ್ಕಾರದ ಆದೇಶ ಪ್ರತಿ ಸಿಕ್ಕ ಮೇಲೆ ಎಲ್ಲಾರೂ ವಿಜಯೋತ್ಸವ ಮಾಡಿ*

  *ಸದ್ಯ ಈ ಹೋರಾಟವನ್ನು ವಿರಾಮಗೊಳಿಸಿ ತಾತ್ಕಾಲಿಕವಾಗಿ ನಿಲ್ಲಿಸುತ್ತೇನೆ ಎಂದು ಶ್ರೀಗಳು ಹೇಳಿದರು.ಬಸನಗೌಡ ಪಾಟೀಲ್ ಯತ್ನಾಳ್  ದೆಹಲಿ ಹೋಗಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ನಮ್ಮ ಸಮಾಜದ ಪ್ರತಿಯೊಬ್ಬರು ಬುತ್ತಿಕಟ್ಟಿಕೊಂಡು ಬಂದು ನನ್ನ ಜೊತೆ ಹೋರಾಟ ಮಾಡಿದರು ಎಂದು  ಭಾವುಕರಾಗಿ ಮಾತಾನಾಡಿದ  ಸ್ವಾಮೀಜಿ ಕಣ್ಣೀರು ಹಾಕಿದರು* . *ನಮ್ಮ ಹೋರಾಟಕ್ಕೆ ಸಿದ್ದಗಂಗಾ ಬಿಟ್ಟರೆ ಉತ್ತರ ಕರ್ನಾಟಕದ ಕೆಲವು ಮಠ ಬಿಟ್ಟರೆ ಬೇರೆ ಯಾವ ಮಠಗಳು ನಮಗೆ ಬೆಂಬಲ ನೀಡಲಿಲ್ಲ* *ಎಲ್ಲರ ಅಭಿಪ್ರಾಯ ಕೇಳಿದಾಗ ನಮ್ಮ ಎರಡೂವರೆ ವರ್ಷದ ಹೋರಾಟದಲ್ಲಿ ಮೊದಲು ಸಾಧನೆ ಮಾಡಿದ್ದೇವೆ* 

*ಮುಂದೆ ಎಲ್ಲಾ ಲಿಂಗಾಯಿತ ಸಮಾಜವನ್ನು ಕೇಂದ್ರ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ

ಹೋರಾಟ ಮಾಡುತ್ತೇವೆ* 

 *ನಮಗೆ ಪೂರ್ಣ  ಊಟ ಸಿಗದೇ ಇರಬಹುದು ಆದರೆ ಮೀಸಲಾತಿಯ ವ್ಯಾಕ್ಸಿನ್ ರೀತಿ ಸಿಕ್ಕಿದೆ ಎಂದರು*.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation