ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ* "
" *ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ* "
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ 2023 ನೇ ಸಾಲಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಎಲ್ಲಾ ಅಂಗನವಾಡಿ, ಸರ್ಕಾರಿ ಶಾಲೆ, ಖಾಸಗಿ ಶಾಲೆ, ಹಾಗೂ ಕಾಲೇಜುಗಳಲ್ಲಿ *ಒಂದು ವರ್ಷದಿಂದ 19 ವರ್ಷದ ಒಳಗಿನ ಮಕ್ಕಳಿಗೆ* " *ಆಲ್ಬೆಂಡಜೋಲ್* " ಮಾತ್ರೆ ನೀಡುವುದರ ಮೂಲಕ ಆಚರಿಸಲಾಯಿತು.
ವಿಶೇಷವಾಗಿ ಇನ್ನು ಶಾಲೆಗೆ ಸೇರದ ಮಕ್ಕಳಿಗೆ ಹಾಗೂ ಶಾಲೆಯನ್ನು ತೊರೆದ ಮಕ್ಕಳಿಗೆ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ವಲಸೆ ಬಂದಿರುವ ಕುಟುಂಬಗಳ ಮಕ್ಕಳಿಗೆ *ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಲತಾ , ತಾಲೂಕು ಆಶಾ ಮೇಲ್ವಿಚಾರಕರಾದ ಶ್ರೀಮತಿ ಮಹಾದೇವಿ* ರವರ ಮೇಲ್ವಿಚಾರಣೆಯಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಮಾತ್ರೆಗಳನ್ನು ನೀಡಲಾಯಿತು.
ಹೊಸಕೋಟೆ ತಾಲೂಕಿನಲ್ಲಿ ಅಂಗನವಾಡಿ,ಶಾಲೆ, ಕಾಲೇಜುಗಳಲ್ಲಿ ದಾಖಲಾದ ಒಂದರಿಂದ 19 ವರ್ಷದ ಸುಮಾರು *70,794* ಮಕ್ಕಳು ಹಾಗೂ ದಾಖಲಾಗದ *22,702* ಮಕ್ಕಳು ಸೇರಿದಂತೆ *ಒಟ್ಟು 93,787* ಮಕ್ಕಳಿಗೆ ಜಂತು ಹುಳು ನಿವಾರಣ ಮಾತ್ರೆಗಳನ್ನು ನೀಡುತ್ತಿರುವುದಾಗಿ *ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್* ತಿಳಿಸಿದರು.

Comments
Post a Comment