ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2023 ರ " *ಸ್ಪರ್ಶ ಕುಷ್ಟರೋಗ ಜಾಗೃತಿ

 ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಮಾಜ ಕಲ್ಯಾಣ ಇಲಾಖೆಯ  ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  2023 ರ "*ಸ್ಪರ್ಶ ಕುಷ್ಟರೋಗ ಜಾಗೃತಿ








ಅಭಿಯಾನ* " ದ ಅಂಗವಾಗಿ ಕುಷ್ಟರೋಗಕ್ಕೆ ಸಂಬಂಧಪಟ್ಟಂತೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಗುರುರಾಜ್* ರವರು  ಆರೋಗ್ಯ ಶಿಕ್ಷಣ ನೀಡುತ್ತಾ, ಜನವರಿ 30  ದೇಶದ ರಾಷ್ಟ್ರಪಿತ  ಮಹಾತ್ಮ ಗಾಂಧೀಜಿಯವರು  ಹುತಾತ್ಮರಾದ ದಿನವಾಗಿದ್ದು,  ಅವರ ಕುಷ್ಟರೋಗಿಗಳ ಬಗ್ಗೆ ಇದ್ದ ಅಪಾರವಾದ ಕಾಳಜಿಯನ್ನು ಸ್ಮರಿಸುತ್ತ ಸದರಿ ದಿನವನ್ನು ದೇಶದಾದ್ಯಂತ " *ಕುಷ್ಟರೋಗ ನಿರ್ಮೂಲನ ದಿನ* " ವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

 ಇದೇ ಸಂದರ್ಭದಲ್ಲಿ  ಸಮಾಜ ಕಲ್ಯಾಣ ಇಲಾಖೆಯ *ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದರಾಜು* ರವರು ಹಾಗೂ ವಸತಿ ನಿಲಯದ ವಾರ್ಡನ್ ಗಳಾದ ಶ್ರೀ *ಪುಟ್ಟಸ್ವಾಮಿ ಹಾಗೂ ಜಗನ್ನಾಥ್* ರವರು 2023 ರ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನದ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.

 ಕಾರ್ಯಕ್ರಮದಲ್ಲಿ ಬೆಂಡಿಗಾನಹಳ್ಳಿ   ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಶಿವಕುಮಾರ್* ರವರು ವಿದ್ಯಾರ್ಥಿಗಳಿಗೆ *ಪ್ರತಿಜ್ಞಾ ವಿಧಿ* ಯನ್ನು ಬೋಧಿಸಿದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation