ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2023 ರ " *ಸ್ಪರ್ಶ ಕುಷ್ಟರೋಗ ಜಾಗೃತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2023 ರ "*ಸ್ಪರ್ಶ ಕುಷ್ಟರೋಗ ಜಾಗೃತಿ
ಅಭಿಯಾನ* " ದ ಅಂಗವಾಗಿ ಕುಷ್ಟರೋಗಕ್ಕೆ ಸಂಬಂಧಪಟ್ಟಂತೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಗುರುರಾಜ್* ರವರು ಆರೋಗ್ಯ ಶಿಕ್ಷಣ ನೀಡುತ್ತಾ, ಜನವರಿ 30 ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾಗಿದ್ದು, ಅವರ ಕುಷ್ಟರೋಗಿಗಳ ಬಗ್ಗೆ ಇದ್ದ ಅಪಾರವಾದ ಕಾಳಜಿಯನ್ನು ಸ್ಮರಿಸುತ್ತ ಸದರಿ ದಿನವನ್ನು ದೇಶದಾದ್ಯಂತ " *ಕುಷ್ಟರೋಗ ನಿರ್ಮೂಲನ ದಿನ* " ವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ *ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದರಾಜು* ರವರು ಹಾಗೂ ವಸತಿ ನಿಲಯದ ವಾರ್ಡನ್ ಗಳಾದ ಶ್ರೀ *ಪುಟ್ಟಸ್ವಾಮಿ ಹಾಗೂ ಜಗನ್ನಾಥ್* ರವರು 2023 ರ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನದ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಬೆಂಡಿಗಾನಹಳ್ಳಿ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಶಿವಕುಮಾರ್* ರವರು ವಿದ್ಯಾರ್ಥಿಗಳಿಗೆ *ಪ್ರತಿಜ್ಞಾ ವಿಧಿ* ಯನ್ನು ಬೋಧಿಸಿದರು.
Comments
Post a Comment