ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಮತ್ತೊಂದು ಭೂ ಹಗರಣ ಬಯಲು


ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಮತ್ತೊಂದು ಭೂ ಹಗರಣ ಬಯಲು


ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಆಪ್ತನಿಂದ ತಮಗಾಗಿ MUDA ಮಾಲೀಕತ್ವದ ಸ್ವತ್ತನ್ನು De - notification ಮಾಡಿಸಿಕೊಂಡ ಹಗರಣ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅವರ ಆಪ್ತ ಸಿ. ಬಸವೇಗೌಡ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು.

ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ, ಸರ್ಕಾರೀ ಭೂ ಕಬಳಿಕೆ ಪ್ರಕರಣಗಳು ದಾಖಲು

ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರವು 1985 ರಲ್ಲಿ ಮೈಸೂರಿನ ಹಿನಕಲ್ ಗ್ರಾಮದ ಹಲವು ಜಮೀನುಗಳನ್ನು ವಿಜಯನಗರ 2ನೇ ಬಡಾವಣೆ ನಿರ್ಮಾಣಕ್ಕಾಗಿ ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡಿತ್ತು.

ಅದಕ್ಕೆ ಸಂಬಂಧಿಸಿದಂತೆ ಹಿನಕಲ್ ಗ್ರಾಮದ ಸಾಕಮ್ಮ ಎಂಬುವವರ ಮಾಲೀಕತ್ವದ ಸರ್ವೆ ನಂಬರ್ 70/4A ಜಮೀನನ್ನೂ ಸಹ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿತ್ತು.

22/11/1985 ರಂದು ಸರ್ವೆ ನಂಬರ್ 70/4A ಜಮೀನಿನ ಮಾಲೀಕರಾದ ಸಾಕಮ್ಮನವರಿಗೆ ಪರಿಹಾರ ಹಣ (Award) ವನ್ನು ಬಿಡುಗಡೆ ಮಾಡಿತ್ತು.

ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡ ಹಿನಕಲ್ ಗ್ರಾಮದ ಜಮೀನುಗಳಲ್ಲಿ MUDA ವಿಜಯನಗರ 2ನೇ ಹಂತ ಬಡಾವಣೆ ನಿರ್ಮಾಣ ಮಾಡಿತ್ತು.

MUDA ನಿರ್ಮಿಸಿರುವ ವಿಜಯನಗರ 2ನೇ ಹಂತ ಬಡಾವಣೆ ಸರ್ವೆ ನಂಬರ್ 70/4A ಜಮೀನಿನಲ್ಲಿ 3161, 3162 ಮತ್ತು 3163 ಸಂಖ್ಯೆಯ ತಲಾ 80 X 120 ಅಳತೆಯ ನಿವೇಶನಗಳನ್ನು ರಚಿಸಿತ್ತು.

ವಿಜಯನಗರ 2ನೇ ಹಂತ ಬಡಾವಣೆಯ ನಿವೇಶನ ಸಂಖ್ಯೆ 3161 ನ್ನು ಕಾನೂನು ರೀತ್ಯಾ ಅರ್ಜಿದಾರರಾಗಿದ್ದ ಸುಂದರ್ ರಾಜ್ ಎಂಬುವವರಿಗೆ MUDA ಹಂಚಿಕೆ ಮಾಡಿತ್ತು ಮತ್ತು ಮನೆ ನಿರ್ಮಿಸಿಕೊಳ್ಳಲು ನಕ್ಷೆ ಮಂಜೂರಾತಿಯನ್ನು ನೀಡಿತ್ತು.

ನಂತರದ ಅವಧಿಯಲ್ಲಿ ಸದರಿ ಜಮೀನಿನ ಮಾಲೀಕರಾದ ಸಾಕಮ್ಮ ರವರು ತಮ್ಮ ಜಮೀನನ್ನು  ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ MUDA ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.

ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಾಣ ಮಾಡಿ ಎಲ್ಲಾ ಅರ್ಜಿದಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಆಯಾ ಅರ್ಜಿದಾರರಿಗೆ ಕ್ರಯ ಪತ್ರಗಳನ್ನು ಮಾಡಿಕೊಟ್ಟು ಅವರ ಸ್ವಾಧೀನಾನುಭವಕ್ಕೆ ಈಗಾಗಲೇ ವಹಿಸಿರುವುದರಿಂದ ಕಾನೂನಿನಲ್ಲಿ ಸದರಿ ಜಮೀನಿನ De - Notification ಗೆ ಅವಕಾಶವಿರುವುದಿಲ್ಲ ಎಂದು ಅಂದಿನ ಆಯುಕ್ತರಾದ ಎ. ಎಂ. ಕುಂಜಪ್ಪ, KAS ರವರು ದಿನಾಂಕ 25/12/1995 ರಂದು ಆದೇಶಿಸಿದ್ದರು.

1994 ರಿಂದ 1999 ರ ವರೆಗಿನ 05 ವರ್ಷಗಳ ಅವಧಿಯಲ್ಲಿ ಮಾನ್ಯ ಸಿದ್ಧರಾಮಯ್ಯನವರು ದೇವೇಗೌಡರು ಮತ್ತು ಜೆ. ಹೆಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

30/05/1997 ರಿಂದ 04/08/1999 ರ ಅವಧಿಯಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) ಕ್ಕೆ ಸಿದ್ಧರಾಮಯ್ಯನವರು ತಮ್ಮ ಆತ್ಮೀಯ ಸ್ನೇಹಿತ ಸಿ. ಬಸವೇಗೌಡ ರವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು.

ವಿಜಯನಗರ 2ನೇ ಬಡಾವಣೆಯ ನಿವೇಶನ ಸಂಖ್ಯೆ 3161 ರ ಮೇಲೆ ಕಣ್ಣು ಹಾಕಿದ್ದ ಸಿದ್ಧರಾಮಯ್ಯನವರು - MUDA ಅಧ್ಯಕ್ಷರಾಗಿದ್ದ ತಮ್ಮ ಅತ್ಯಾಪ್ತ ಸಿ. ಬಸವೇಗೌಡರ ಮೂಲಕ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 19/09/1997 ರಂದು ಸರ್ವೆ ನಂಬರ್ 70/4A ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿರುವುದಾಗಿ De - notification ಮಾಡಿಸಿಕೊಟ್ಟಿರುತ್ತಾರೆ

MUDA ಆಯುಕ್ತರ ಆದೇಶಕ್ಕೆ ವ್ಯತಿರಿಕ್ತವಾಗಿ ಮತ್ತು ಆಯುಕ್ತರ ಆದೇಶವನ್ನು ಉಲ್ಲಂಘಿಸಿ ಸಂವಿಧಾನಾತ್ಮಕವಾಗಿ ಯಾವುದೇ ಅಧಿಕಾರವಿಲ್ಲದ ಅಂದಿನ MUDA ಅಧ್ಯಕ್ಷರಾದ ಸಿ. ಬಸವೇಗೌಡ ರವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸದರಿ ಸ್ವತ್ತನ್ನು De - notification ಮಾಡಿದ್ದರು.

ಯಾವುದೇ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತು ಅಂತಹ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತಹ (De - notification) ಪ್ರಕ್ರಿಯೆ ಗಳಲ್ಲಿ ನಿಯಮಾನುಸಾರ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಮೂಲಕ ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆದುಕೊಳ್ಳಬೇಕಿರುತ್ತದೆ ಮತ್ತು ಈ ಸಂಬಂಧ ರಾಜ್ಯ ಸರ್ಕಾರವು ಸರ್ಕಾರೀ ಅಧಿಸೂಚನೆ (Gazette Notification) ಹೊರಡಿಸಿ, ಸರ್ಕಾರೀ ಆದೇಶ (G.O.) ವನ್ನು ಮಾಡಬೇಕಿರುತ್ತದೆ.

ಮೇಲೆ ತಿಳಿಸಿದ ಯಾವ ಪ್ರಕ್ರಿಯೆಗಳನ್ನೂ ಮಾಡದೇ ಏಕಾಏಕಿ ಸ್ವತಃ ತಾವೇ ಸದರಿ ಸ್ವತ್ತನ್ನು De - notification ಮಾಡಿರುವ ಆದೇಶವನ್ನು ಹೊರಡಿಸುವ ಮೂಲಕ ಸಿ. ಬಸವೇಗೌಡ ರವರು ಗಂಭೀರವಾದ ಅಪರಾಧವನ್ನು ಎಸಗಿದ್ದರು.

ಹಿಂದಿನ ಆಯುಕ್ತರು De - notification ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರೂ ಸಹ 1997 ರಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಕ್ರಮವಾಗಿ De - notification ಮಾಡಿದ್ದ ಸಿ. ಬಸವೇಗೌಡರ ನಿಯಮ ಬಾಹಿರ ಕಾರ್ಯವನ್ನು ಪ್ರಶ್ನಿಸುವುದಾಗಲೀ ಅಥವಾ ಸರ್ಕಾರದ ಗಮನಕ್ಕೆ ತರುವುದಾಗಲೀ MUDA ಆಯುಕ್ತರಾಗಿದ್ದ S. N. ನಾಗರಾಜ್ ಅವರು ಮಾಡಲೇ ಇಲ್ಲ.

ಅಂದಿನ ಉಪ ಮುಖ್ಯಮಂತ್ರಿ, ಹಣಕಾಸು ಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಕ್ಕೆ ಹೆದರಿ ಎಸ್. ಎನ್. ನಾಗರಾಜ್ ರವರು ಈ ಭೂ ಹಗರಣದ ಬಗ್ಗೆ ಮೌನ ವಹಿಸಿದ್ದರು.

ಈ ರೀತಿ ನಿಯಮ ಬಾಹಿರವಾಗಿ ದಿನಾಂಕ 19/09/1997 ರಂದು De - notification ಮಾಡಿದ  27ನೇ ದಿನ ಅಂದರೆ ದಿನಾಂಕ 26/11/1997 ರಂದು ಸಿದ್ಧರಾಮಯ್ಯನವರು ಸರ್ವೆ ನಂಬರ್ 70/4A ರಲ್ಲಿ MUDA ರಚಿಸಿದ್ದ 3161 ಸಂಖ್ಯೆಯ ನಿವೇಶನವನ್ನು (9,600 ಚ. ಅಡಿ ವಿಸ್ತೀರ್ಣ) 6,72,000 ರೂಪಾಯಿಗಳಿಗೆ ಸಾಕಮ್ಮನವರಿಂದ ಖರೀದಿ ಮಾಡಿದ್ದರು.

ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಸದರಿ ಸ್ವತ್ತಿನಲ್ಲಿ ಕಾನೂನು ರೀತ್ಯಾ MUDA ದಿಂದ ಹಂಚಿಕೆಗೆ ಪಡೆದುಕೊಂಡು, ನಕ್ಷೆ ಮಂಜುರಾತಿ ಪಡೆದುಕೊಂಡು ಸುಂದರ್ ರಾಜ್ ರವರು ನಿರ್ಮಿಸಿಕೊಂಡಿದ್ದ ಮನೆಯನ್ನು ನಿರ್ದಾಕ್ಷಿಣ್ಯವಾಗಿ ಸಿದ್ಧರಾಮಯ್ಯನವರು ಕೆಡವಿ ಹಾಕಿದ್ದರು.

ಸದರಿ ನಿವೇಶನದಲ್ಲಿ ಸಿದ್ಧರಾಮಯ್ಯನವರು ತಮ್ಮ ವಾಸಕ್ಕೆಂದು ಬೃಹತ್ ಬಂಗಲೆಯನ್ನು ನಿರ್ಮಾಣ ಮಾಡಿಕೊಂಡಿದ್ದರು.

ಖರೀದಿ ಮಾಡಿದ 06 ವರ್ಷಗಳಲ್ಲಿ ದಿನಾಂಕ 29/09/2003 ರಂದು ತಾವು 6,72,000 ರೂಪಾಯಿಗಳಿಗೆ ಖರೀದಿ ಮಾಡಿದ ಸ್ವತ್ತನ್ನು ಒಂದು ಕೋಟಿ ರೂಪಾಯಿಗಳಷ್ಟು ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಿದ್ದರು.

ಸ್ವತಃ ಕಾನೂನು ಪದವೀಧರರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡು MUDA ನಿರ್ಮಿಸಿದ್ದ ಬಡಾವಣೆಗೆ ಸಂಬಂಧಿಸಿದ ಜಾಗವನ್ನು - ತಮ್ಮ ಅತ್ಯಂತ ಆಪ್ತ ಮತ್ತು MUDA ಅಧ್ಯಕ್ಷರಾಗಿದ್ದ ಸಿ. ಬಸವೇಗೌಡರು ಕಾನೂನಾತ್ಮಕವಾಗಿ ಯಾವುದೇ ಅಧಿಕಾರವನ್ನು ಹೊಂದಿರದೇ ಇದ್ದರೂ ಸಹ ಅವರ ಮೂಲಕ De - notification ಮಾಡಿಸಿಕೊಂಡು ನಂತರ ಪರಿಹಾರ ಧನವನ್ನು ಪಡೆದುಕೊಂಡಿದ್ದ ಸದರಿ ಜಮೀನಿನ ಹಿಂದಿನ ಮಾಲೀಕರಾಗಿದ್ದ ಸಾಕಮ್ಮ ರವರಿಂದ ಸದರಿ ಸ್ವತ್ತನ್ನು ಖರೀದಿ ಮಾಡುವ ಮೂಲಕ ಗುರುತರ ಅಪರಾಧವನ್ನು ಎಸಗಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, MUDA ದ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಸೇರಿದಂತೆ ಹಲವು ಭ್ರಷ್ಟ ಅಧಿಕಾರಿಗಳು ಭಾಗಿಯಾಗಿರುವ ಈ De - notification ಹಗರಣವನ್ನು CBI ಅಥವಾ CID ತನಿಖೆಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ N. R. ರಮೇಶ್

ಪತ್ರಿಕಾಗೋಷ್ಠಿಯಲ್ಲಿ ಹಗರಣದ ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ N. R. ರಮೇಶ್ ಹಗರಣ ಬಯಲು

ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಆಪ್ತನಿಂದ ತಮಗಾಗಿ MUDA ಮಾಲೀಕತ್ವದ ಸ್ವತ್ತನ್ನು De - notification ಮಾಡಿಸಿಕೊಂಡ ಹಗರಣ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅವರ ಆಪ್ತ ಸಿ. ಬಸವೇಗೌಡ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು.

ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ, ಸರ್ಕಾರೀ ಭೂ ಕಬಳಿಕೆ ಪ್ರಕರಣಗಳು ದಾಖಲು

ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರವು 1985 ರಲ್ಲಿ ಮೈಸೂರಿನ ಹಿನಕಲ್ ಗ್ರಾಮದ ಹಲವು ಜಮೀನುಗಳನ್ನು ವಿಜಯನಗರ 2ನೇ ಬಡಾವಣೆ ನಿರ್ಮಾಣಕ್ಕಾಗಿ ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡಿತ್ತು.

ಅದಕ್ಕೆ ಸಂಬಂಧಿಸಿದಂತೆ ಹಿನಕಲ್ ಗ್ರಾಮದ ಸಾಕಮ್ಮ ಎಂಬುವವರ ಮಾಲೀಕತ್ವದ ಸರ್ವೆ ನಂಬರ್ 70/4A ಜಮೀನನ್ನೂ ಸಹ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿತ್ತು.

22/11/1985 ರಂದು ಸರ್ವೆ ನಂಬರ್ 70/4A ಜಮೀನಿನ ಮಾಲೀಕರಾದ ಸಾಕಮ್ಮನವರಿಗೆ ಪರಿಹಾರ ಹಣ (Award) ವನ್ನು ಬಿಡುಗಡೆ ಮಾಡಿತ್ತು.

ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡ ಹಿನಕಲ್ ಗ್ರಾಮದ ಜಮೀನುಗಳಲ್ಲಿ MUDA ವಿಜಯನಗರ 2ನೇ ಹಂತ ಬಡಾವಣೆ ನಿರ್ಮಾಣ ಮಾಡಿತ್ತು.

MUDA ನಿರ್ಮಿಸಿರುವ ವಿಜಯನಗರ 2ನೇ ಹಂತ ಬಡಾವಣೆ ಸರ್ವೆ ನಂಬರ್ 70/4A ಜಮೀನಿನಲ್ಲಿ 3161, 3162 ಮತ್ತು 3163 ಸಂಖ್ಯೆಯ ತಲಾ 80 X 120 ಅಳತೆಯ ನಿವೇಶನಗಳನ್ನು ರಚಿಸಿತ್ತು.

ವಿಜಯನಗರ 2ನೇ ಹಂತ ಬಡಾವಣೆಯ ನಿವೇಶನ ಸಂಖ್ಯೆ 3161 ನ್ನು ಕಾನೂನು ರೀತ್ಯಾ ಅರ್ಜಿದಾರರಾಗಿದ್ದ ಸುಂದರ್ ರಾಜ್ ಎಂಬುವವರಿಗೆ MUDA ಹಂಚಿಕೆ ಮಾಡಿತ್ತು ಮತ್ತು ಮನೆ ನಿರ್ಮಿಸಿಕೊಳ್ಳಲು ನಕ್ಷೆ ಮಂಜೂರಾತಿಯನ್ನು ನೀಡಿತ್ತು.

ನಂತರದ ಅವಧಿಯಲ್ಲಿ ಸದರಿ ಜಮೀನಿನ ಮಾಲೀಕರಾದ ಸಾಕಮ್ಮ ರವರು ತಮ್ಮ ಜಮೀನನ್ನು  ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ MUDA ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.

ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಾಣ ಮಾಡಿ ಎಲ್ಲಾ ಅರ್ಜಿದಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಆಯಾ ಅರ್ಜಿದಾರರಿಗೆ ಕ್ರಯ ಪತ್ರಗಳನ್ನು ಮಾಡಿಕೊಟ್ಟು ಅವರ ಸ್ವಾಧೀನಾನುಭವಕ್ಕೆ ಈಗಾಗಲೇ ವಹಿಸಿರುವುದರಿಂದ ಕಾನೂನಿನಲ್ಲಿ ಸದರಿ ಜಮೀನಿನ De - Notification ಗೆ ಅವಕಾಶವಿರುವುದಿಲ್ಲ ಎಂದು ಅಂದಿನ ಆಯುಕ್ತರಾದ ಎ. ಎಂ. ಕುಂಜಪ್ಪ, KAS ರವರು ದಿನಾಂಕ 25/12/1995 ರಂದು ಆದೇಶಿಸಿದ್ದರು.

1994 ರಿಂದ 1999 ರ ವರೆಗಿನ 05 ವರ್ಷಗಳ ಅವಧಿಯಲ್ಲಿ ಮಾನ್ಯ ಸಿದ್ಧರಾಮಯ್ಯನವರು ದೇವೇಗೌಡರು ಮತ್ತು ಜೆ. ಹೆಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

30/05/1997 ರಿಂದ 04/08/1999 ರ ಅವಧಿಯಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) ಕ್ಕೆ ಸಿದ್ಧರಾಮಯ್ಯನವರು ತಮ್ಮ ಆತ್ಮೀಯ ಸ್ನೇಹಿತ ಸಿ. ಬಸವೇಗೌಡ ರವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು.

ವಿಜಯನಗರ 2ನೇ ಬಡಾವಣೆಯ ನಿವೇಶನ ಸಂಖ್ಯೆ 3161 ರ ಮೇಲೆ ಕಣ್ಣು ಹಾಕಿದ್ದ ಸಿದ್ಧರಾಮಯ್ಯನವರು - MUDA ಅಧ್ಯಕ್ಷರಾಗಿದ್ದ ತಮ್ಮ ಅತ್ಯಾಪ್ತ ಸಿ. ಬಸವೇಗೌಡರ ಮೂಲಕ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 19/09/1997 ರಂದು ಸರ್ವೆ ನಂಬರ್ 70/4A ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿರುವುದಾಗಿ De - notification ಮಾಡಿಸಿಕೊಟ್ಟಿರುತ್ತಾರೆ

MUDA ಆಯುಕ್ತರ ಆದೇಶಕ್ಕೆ ವ್ಯತಿರಿಕ್ತವಾಗಿ ಮತ್ತು ಆಯುಕ್ತರ ಆದೇಶವನ್ನು ಉಲ್ಲಂಘಿಸಿ ಸಂವಿಧಾನಾತ್ಮಕವಾಗಿ ಯಾವುದೇ ಅಧಿಕಾರವಿಲ್ಲದ ಅಂದಿನ MUDA ಅಧ್ಯಕ್ಷರಾದ ಸಿ. ಬಸವೇಗೌಡ ರವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸದರಿ ಸ್ವತ್ತನ್ನು De - notification ಮಾಡಿದ್ದರು.

ಯಾವುದೇ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತು ಅಂತಹ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತಹ (De - notification) ಪ್ರಕ್ರಿಯೆ ಗಳಲ್ಲಿ ನಿಯಮಾನುಸಾರ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಮೂಲಕ ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆದುಕೊಳ್ಳಬೇಕಿರುತ್ತದೆ ಮತ್ತು ಈ ಸಂಬಂಧ ರಾಜ್ಯ ಸರ್ಕಾರವು ಸರ್ಕಾರೀ ಅಧಿಸೂಚನೆ (Gazette Notification) ಹೊರಡಿಸಿ, ಸರ್ಕಾರೀ ಆದೇಶ (G.O.) ವನ್ನು ಮಾಡಬೇಕಿರುತ್ತದೆ.

ಮೇಲೆ ತಿಳಿಸಿದ ಯಾವ ಪ್ರಕ್ರಿಯೆಗಳನ್ನೂ ಮಾಡದೇ ಏಕಾಏಕಿ ಸ್ವತಃ ತಾವೇ ಸದರಿ ಸ್ವತ್ತನ್ನು De - notification ಮಾಡಿರುವ ಆದೇಶವನ್ನು ಹೊರಡಿಸುವ ಮೂಲಕ ಸಿ. ಬಸವೇಗೌಡ ರವರು ಗಂಭೀರವಾದ ಅಪರಾಧವನ್ನು ಎಸಗಿದ್ದರು.

ಹಿಂದಿನ ಆಯುಕ್ತರು De - notification ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರೂ ಸಹ 1997 ರಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಕ್ರಮವಾಗಿ De - notification ಮಾಡಿದ್ದ ಸಿ. ಬಸವೇಗೌಡರ ನಿಯಮ ಬಾಹಿರ ಕಾರ್ಯವನ್ನು ಪ್ರಶ್ನಿಸುವುದಾಗಲೀ ಅಥವಾ ಸರ್ಕಾರದ ಗಮನಕ್ಕೆ ತರುವುದಾಗಲೀ MUDA ಆಯುಕ್ತರಾಗಿದ್ದ S. N. ನಾಗರಾಜ್ ಅವರು ಮಾಡಲೇ ಇಲ್ಲ.

ಅಂದಿನ ಉಪ ಮುಖ್ಯಮಂತ್ರಿ, ಹಣಕಾಸು ಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಕ್ಕೆ ಹೆದರಿ ಎಸ್. ಎನ್. ನಾಗರಾಜ್ ರವರು ಈ ಭೂ ಹಗರಣದ ಬಗ್ಗೆ ಮೌನ ವಹಿಸಿದ್ದರು.

ಈ ರೀತಿ ನಿಯಮ ಬಾಹಿರವಾಗಿ ದಿನಾಂಕ 19/09/1997 ರಂದು De - notification ಮಾಡಿದ  27ನೇ ದಿನ ಅಂದರೆ ದಿನಾಂಕ 26/11/1997 ರಂದು ಸಿದ್ಧರಾಮಯ್ಯನವರು ಸರ್ವೆ ನಂಬರ್ 70/4A ರಲ್ಲಿ MUDA ರಚಿಸಿದ್ದ 3161 ಸಂಖ್ಯೆಯ ನಿವೇಶನವನ್ನು (9,600 ಚ. ಅಡಿ ವಿಸ್ತೀರ್ಣ) 6,72,000 ರೂಪಾಯಿಗಳಿಗೆ ಸಾಕಮ್ಮನವರಿಂದ ಖರೀದಿ ಮಾಡಿದ್ದರು.

ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಸದರಿ ಸ್ವತ್ತಿನಲ್ಲಿ ಕಾನೂನು ರೀತ್ಯಾ MUDA ದಿಂದ ಹಂಚಿಕೆಗೆ ಪಡೆದುಕೊಂಡು, ನಕ್ಷೆ ಮಂಜುರಾತಿ ಪಡೆದುಕೊಂಡು ಸುಂದರ್ ರಾಜ್ ರವರು ನಿರ್ಮಿಸಿಕೊಂಡಿದ್ದ ಮನೆಯನ್ನು ನಿರ್ದಾಕ್ಷಿಣ್ಯವಾಗಿ ಸಿದ್ಧರಾಮಯ್ಯನವರು ಕೆಡವಿ ಹಾಕಿದ್ದರು.

ಸದರಿ ನಿವೇಶನದಲ್ಲಿ ಸಿದ್ಧರಾಮಯ್ಯನವರು ತಮ್ಮ ವಾಸಕ್ಕೆಂದು ಬೃಹತ್ ಬಂಗಲೆಯನ್ನು ನಿರ್ಮಾಣ ಮಾಡಿಕೊಂಡಿದ್ದರು.

ಖರೀದಿ ಮಾಡಿದ 06 ವರ್ಷಗಳಲ್ಲಿ ದಿನಾಂಕ 29/09/2003 ರಂದು ತಾವು 6,72,000 ರೂಪಾಯಿಗಳಿಗೆ ಖರೀದಿ ಮಾಡಿದ ಸ್ವತ್ತನ್ನು ಒಂದು ಕೋಟಿ ರೂಪಾಯಿಗಳಷ್ಟು ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಿದ್ದರು.

ಸ್ವತಃ ಕಾನೂನು ಪದವೀಧರರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡು MUDA ನಿರ್ಮಿಸಿದ್ದ ಬಡಾವಣೆಗೆ ಸಂಬಂಧಿಸಿದ ಜಾಗವನ್ನು - ತಮ್ಮ ಅತ್ಯಂತ ಆಪ್ತ ಮತ್ತು MUDA ಅಧ್ಯಕ್ಷರಾಗಿದ್ದ ಸಿ. ಬಸವೇಗೌಡರು ಕಾನೂನಾತ್ಮಕವಾಗಿ ಯಾವುದೇ ಅಧಿಕಾರವನ್ನು ಹೊಂದಿರದೇ ಇದ್ದರೂ ಸಹ ಅವರ ಮೂಲಕ De - notification ಮಾಡಿಸಿಕೊಂಡು ನಂತರ ಪರಿಹಾರ ಧನವನ್ನು ಪಡೆದುಕೊಂಡಿದ್ದ ಸದರಿ ಜಮೀನಿನ ಹಿಂದಿನ ಮಾಲೀಕರಾಗಿದ್ದ ಸಾಕಮ್ಮ ರವರಿಂದ ಸದರಿ ಸ್ವತ್ತನ್ನು ಖರೀದಿ ಮಾಡುವ ಮೂಲಕ ಗುರುತರ ಅಪರಾಧವನ್ನು ಎಸಗಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, MUDA ದ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಸೇರಿದಂತೆ ಹಲವು ಭ್ರಷ್ಟ ಅಧಿಕಾರಿಗಳು ಭಾಗಿಯಾಗಿರುವ ಈ De - notification ಹಗರಣವನ್ನು CBI ಅಥವಾ CID ತನಿಖೆಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ N. R. ರಮೇಶ್

ಪತ್ರಿಕಾಗೋಷ್ಠಿಯಲ್ಲಿ ಹಗರಣದ ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ N. R. ರಮೇಶ್

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims