ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಅಂಗವಿಕಲ ಚೇತನ ದಿನಾಚರಣೆ ಮತದಾರ ಪರಿಷ್ಕರಣೆ ಜಾಥಕಾರ್ಯಕ್ರಮ "

 " ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶ್ವ

 ಅಂಗವಿಕಲ ಚೇತನ ದಿನಾಚರಣೆ ಮತದಾರ


 ಪರಿಷ್ಕರಣೆ ಜಾಥಕಾರ್ಯಕ್ರಮ

 ಬೆಂಗಳೂರು ಪೂರ್ವ ತಾಲೂಕುಬಿದರಹಳ್ಳಿ ಹೋಬಳಿಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶ್ವ  ಅಂಗವಿಕಲಚೇತನ ದಿನಾಚರಣೆ ಅಂಗವಾಗಿಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆಯನ್ನು ಏರ್ಪಡಿಸಲಾಗಿತ್ತುಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಡೂರು ಗ್ರಾಮಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಮ್ಮನವರು, ಡಿಎಸ್ಆರ್ ನೋಮೆಶ್ ಕುಮಾರ್, ಸಹಾಯಕ ನಿರ್ದೇಶಕರಾದ ಚಂದ್ರಪ್ಪನವರು, ಮಂಡೂರುಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಹರೀಶ್ ರವರು, ಗ್ರಾಮಪಂಚಾಯಿತಿ ಪಿಡಿಓನಾಗೇಶ್ ರವರು,ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಈ ಸಂದರ್ಭದಲ್ಲಿಎಲ್ಲಾ ಗ್ರಾಮ ಪಂಚಾಯತಿಯ ಸದಸ್ಯರುಗಳು,ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತದಾರ ಪರಿಷ್ಕರಣಿ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಂತರ ವಿಶ್ವ ಅಂಗ ವಿಕಲಚೇತನ  ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು, ನಂತರ ಮಾತನಾಡಿದ ಡಿಎಸ್ಆರ್ ನೋಮೇಶ್  ಕುಮಾರ್ ನಮ್ಮ ದೇಶದಲ್ಲಿ ಅಂಗವಿಕಲರಿಗೆ ಹೆಚ್ಚಿನ ಪ್ಯಾಶಸ್ತ್ಯವಿದೆ,ಈಗ ಅಂಗವಿಕಲರು ಕೆಲವೊಂದುಗ್ರಾಮ ಪಂಚಾಯಿತಿಯಲ್ಲಿ ಎಸ್ ಡಿಎಆಗಿ ಕಾರ್ಯನಿರ್ವಹಿಸುತ್ತಿದ್ದು ಕೆಪಿಎಸ್‌ಸಿ ಯಲ್ಲಿ ಹೆಚ್ಚಿನ ಅಂಕ ಗಳಿಸಿ ಆಯ್ಕೆಯಾಗಿಕೆಲಸ ಪಡೆದಿರುತ್ತಾರೆ, ಈ ಅದೇ ರೀತಿ ಎಲ್ಲರಂತೆ ಅವರು ಸಹ ಅತ್ಯುತ್ತಮವಾಗಿ ಅವರ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ  ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ, ಸರ್ಕಾರ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ, ಯೋಜನೆಗಳನ್ನು ಬಳಸಿಕೊಂಡು ಸಬಲರಾಗಬೇಕೆಂದು ವಿಕಲನ ಚೇತನರಿಗೆ ಕಿವಿಮಾತು ತಿಳಿಸಿದರು.

ಆರ್. ನಾಗರಾಜು

ಪಬ್ಲಿಕ್ ರಿಪೋರ್ಟ್  ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

AILU Challenges BCI’s ‘Illegal’ Nomination of Karnataka Bar Council Chairman