ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ದಿಬ್ಬೂರುಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ "
" ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ದಿಬ್ಬೂರುಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ "
ಯಲಹಂಕ ತಾಲ್ಲೂಕು ಹೆಸರಘಟ್ಟ ಹೋಬಳಿ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ದಿಬ್ಬೂರು ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಯಲಹಂಕ ತಹಸೀಲ್ದಾರ್ ಅನಿಲ್ ಕುಮಾರ್ ಆರೋಲಿಕರ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದದಿಬ್ಬೂರು ಜಯಣ್ಣ, ಬಿಜೆಪಿ ಮುಖಂಡರಾದ ಸತೀಶ್, ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ. ಮುನಿರೆಡ್ಡಿರವರು ಉದ್ಘಾಟಿಸಿದರು.
ನಂತರಮಾತನಾಡಿದ ಯಲಹಂಕ ತಹಸೀಲ್ದಾರ್ ಅನಿಲ್ ಕುಮಾರ್ ಆರೋಳಿಕರ್ ಅರ್ಹ ಫಲಾನುಭವಿರೈತರಿಗೆ ಮಿನಿ ಟ್ಯಾಕ್ಟರ್ ಟಿಲ್ಲರ್ ಗಳು,ಪಿಂಚಣಿ ಯೋಜನೆಯಆದೇಶ ಪತ್ರ,ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ,ಆಹಾರ ಪಡಿತರಚೀಟಿ, ಸೇರಿದಂತೆವಿವಿಧ ಸವಲತ್ತುಗಳನ್ನು ವಿತರಿಸಿದ್ದೇವೆ, ವಿಶೇಷವಾಗಿಕೆರೆ ಒತ್ತುವರಿ ತೆರವಿಗೆಹೆಚ್ಚು ಹೊತ್ತುನೀಡುತ್ತಿದ್ದು ದಿಬ್ಬೂರುಗ್ರಾಮದಕೆರೆ ಸುಮಾರು 4 ಎಕರೆ 23 ಗುಂಟೆ ಒತ್ತುವರಿ ಆಗಿರುವುದು ಕಂಡುಬಂದಿದ್ದು,ಈ ಒತ್ತುವರಿತೆರೆವಿ
ಗೆಕ್ರಮ ಕೈಗೊಳ್ಳಲಾಗುವುದು, ಉಳಿದಂತೆ ಹಲವು ರೈತರುತಮ್ಮ ಜಮೀನುತೆರಳಲು, ಸ್ಮಶಾನಕ್ಕೆ ರಸ್ತೆ ಇಲ್ಲ ರಸ್ತೆನಿರ್ಮಿಸಿ ಕೊಡುವಮೂಲಕ ಸಹಕರಿಸುವಂತೆ ಮನವಿಮಾಡಿದ್ದಾರೆ, ಹಿನ್ನೆಲೆಯಲ್ಲಿರಸ್ತೆ ನಿರ್ಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು, ರಾಜಕಾರಣಿಗಳ ಒತ್ತುವರಿಗುರುತಿಸಿ ಅದನ್ನು ತೆರವುಗೊಳಿಸಲಾಗುವುದು,ರೈತರು ಕಂದಾಯಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಮುಕ್ತವಾಗಿತಿಳಿಸಿದರೆ ಪರಿಹಾರ ಕೊಡುವ ಭರವಸೆ ನೀಡಿದರು,
ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಮುನಿ ರೆಡ್ಡಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ದಿಬ್ಬೂರು ಜಯಣ್ಣನವರು, ಬೆಂಗಳೂರು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಕಡತನ ಮಲೆ ಸತೀಶ್ ರವರು, ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ನಾಗೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಹೇಮಂತ್ ಕುಮಾರ್, ಸುನಂದ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ವಿಜಯಕುಮಾರ್, ಉಪ ತಹಸಿಲ್ದಾರ್ ರಮೇಶ್ ಬಾಬು, ಶ್ರೀನಿವಾಸ್, ಹಾಗೂ ಇನ್ನು ಅನೇಕ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ವರದಿಗಾರರು. ಬೆಂಗಳೂರು ಗ್ರಾಮಾಂತರ ಜಿಲ್ಲೆ,

Comments
Post a Comment